ಆ್ಯಪ್ನಗರ

ಅಂಬಿ ಸಮಾಧಿ ಮೇಲೆ ಮಗನ ರಾಜಕಾರಣಕ್ಕೆ ಸಿಎಂ ನಾಂದಿ ಹಾಡುತ್ತಿದ್ದಾರೆ: ಸುಮಲತಾ ಅಂಬರೀಷ್‌

ನನ್ನ ಪ್ರೀತಿಯ ಅಂಬಿ ನಿಧನರಾದ ಸಂದರ್ಭದಲ್ಲಿ ಅತ್ಯಂತ ದುಃಖವಾಗಿತ್ತು. ಇದನ್ನು ಯಾರಿಗೂ ಹೇಳಿಕೊಳ್ಳುವಾಗಲು ಆಗುವುದಿಲ್ಲ. ನಾನು ಆ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದು ಡ್ರಾಮಾ ಅಂತೆ. ಆದರೆ ಸಿಎಂ ಕುಟುಂಬದವರು ಚುನಾವಣೆ ಸಂದರ್ಭದಲ್ಲಿ ಮೈಕ್‌ ಮುಂದೆ ಬಂದು ಕಣ್ಣೀರು ಹಾಕುವುದು ನಾಟಕವಲ್ಲವಾ?

Vijaya Karnataka Web 16 Apr 2019, 5:13 pm
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಗುಡುಗಿದ್ದಾರೆ.
Vijaya Karnataka Web ಸುಮಲತಾ ಅಂಬರೀಷ್‌
ಸುಮಲತಾ ಅಂಬರೀಷ್‌


ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರವಾಗಿ ಸಾವಿರಾರು ಮಂದಿ ಬೆಂಬಲ ಸೂಚಿಸಿದರು.

ಈ ಸಮಾವೇಶದಲ್ಲಿ ಮಾತನಾಡಿದ ಸುಮಲತಾ ಅಂಬರೀಷ್‌, ಭಾವನಾತ್ಮಕವಾಗಿ ಭಾಷಣ ಮಾಡಿದರು.

ಅಂಬರೀಷ್‌ ನಿಧನ ನಂತರದ ಅಂತ್ಯಕ್ರಿಯೆ ವಿಷಯವನ್ನು ಸದಾ ಪ್ರಸ್ತಾಪಿಸುವ ಮುಖ್ಯಮಂತ್ರಿ ಹಾಗೂ ಅಭ್ಯರ್ಥಿಯ ಟೀಕೆಗಳಿಗೆ ಸುಮಲತಾ ಅಂಬರೀಷ್‌ ತಿರುಗೇಟು ನೀಡಿದರು.

ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರವನ್ನು ತರಬೇಕೆಂದು ಹೇಳಿದ್ದು ನಾನೇ ಎಂದು ನಿಖಿಲ್‌ ಹೇಳಿಕೊಂಡಿದ್ದರು. ಆದರೆ ಅದು ಬರೀ ಸುಳ್ಳು. ಅದನ್ನು ಹೇಳಿದ್ದು ನನ್ನ ಪುತ್ರ ಅಭಿ ಮತ್ತು ಇತರೆ ನಾಯಕರು ಎಂದು ಸುಮಲತಾ ಬಹಿರಂಗಪಡಿಸಿದರು.

ಇದನ್ನು ನಾನು ಹೇಳಬಾರದಿತ್ತು. ಆದರೆ ಈ ರೀತಿ ಹೇಳುವಂತೆ ಒತ್ತಡ ಮಾಡಿದ್ದೇ ಮುಖ್ಯಮಂತ್ರಿ ಎಂದು ಸುಮಲತಾ ತಿಳಿಸಿದರು.

ನನ್ನ ಪ್ರೀತಿಯ ಅಂಬಿ ನಿಧನರಾದ ಸಂದರ್ಭದಲ್ಲಿ ಅತ್ಯಂತ ದುಃಖವಾಗಿತ್ತು. ಇದನ್ನು ಯಾರಿಗೂ ಹೇಳಿಕೊಳ್ಳುವಾಗಲು ಆಗುವುದಿಲ್ಲ. ನಾನು ಆ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದು ಡ್ರಾಮಾ ಅಂತೆ. ಆದರೆ ಇವರು ಚುನಾವಣೆ ಸಂದರ್ಭದಲ್ಲಿ ಇಡೀ ಕುಟುಂಬವೇ ಮೈಕ್‌ ಮುಂದೆ ಬಂದು ಕಣ್ಣೀರು ಹಾಕುವುದು ನಾಟಕವಲ್ಲವಾ? ಎಂದು ಸುಮಲತಾ ಅಂಬರೀಷ್‌ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ