ಆ್ಯಪ್ನಗರ

ತೇಜಸ್ವಿ ಸೂರ್ಯಗೆ ನನ್ನ ಬೆಂಬಲ: ತೇಜಸ್ವಿನಿ ಅನಂತಕುಮಾರ್‌

ದೇಶ ಮೊದಲು ಎನ್ನುವುದು ನಮ್ಮ ಸಿದ್ಧಾಂತ, ದೇಶ, ರಾಜ್ಯ, ಪಕ್ಷದ ಒಳಿತಾಗಿ ಕೇಂದ್ರ ನಾಯಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

Vijaya Karnataka Web 26 Mar 2019, 11:18 am
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್‌ ಬದಲಿಗೆ ಯು ನಾಯಕ ತೇಜಸ್ವಿ ಸೂರ್ಯಗೆ ಟಿಕೆಟ್‌ ಘೋಷಿಸಲಾಗಿದೆ.
Vijaya Karnataka Web ತೇಜಸ್ವಿನಿ ಅನಂತಕುಮಾರ್‌
ತೇಜಸ್ವಿನಿ ಅನಂತಕುಮಾರ್‌


ಇದು ಸಾಕಷ್ಟು ವಾದ-ಪ್ರತಿವಾದಕ್ಕೆ ಕಾರಣವಾಗಿದೆ.

ಆದರೆ ಎಲ್ಲ ವಿವಾದಗಳಿಗೆ ತೆರೆ ಎಳೆದಿರುವ ತೇಜಸ್ವಿನಿ ಅನಂತಕುಮಾರ್‌, ತೇಜಸ್ವಿ ಪರವಾಗಿ ಬೆಂಬಲ ಸೂಚಿಸಿದ್ದಾರೆ.

ದೇಶ ಮೊದಲು ಎನ್ನುವುದು ನಮ್ಮ ಸಿದ್ಧಾಂತ, ದೇಶ, ರಾಜ್ಯ, ಪಕ್ಷದ ಒಳಿತಾಗಿ ಕೇಂದ್ರ ನಾಯಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

ಬಸವನಗುಡಿಯ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿನಿ ಅನಂತಕುಮಾರ್‌, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

ಆರಂಭದಿಂದಲೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿನಿ ಅನಂತಕುಮಾರ್‌ ಹೆಸರು ಕೇಳಿಬರುತ್ತಿತ್ತು. ನಂತರ ಈ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕಣಕ್ಕಿಳಿಸುವ ವದಂತಿ ಹರಡಿತ್ತು.

ಆದರೆ ಈ ಎಲ್ಲ ಬೆಳವಣಿಗೆಗಳ ನಡುವೆ ಸೋಮವರ ರಾತ್ರಿ ನಡೆದ ಸಭೆಯಲ್ಲಿ ತೇಜಸ್ವಿ ಸೂರ್ಯಗೆ ಬಿಜೆಪಿ ಹೈ ಕಮಾಂಡ್‌ ಟಿಕೆಟ್‌ ಘೊಷಣೆ ಮಾಡಿದೆ.

ಮಂಗಳವಾರ ಬೆಳಗ್ಗೆ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಬಿ ಫಾರಂ ಪಡೆದ ತೇಜಸ್ವಿ ಸೂರ್ಯ ನೇರವಾಗಿ ತೇಜಸ್ವಿನಿ ಅನಂತಕುಮಾರ್‌ ನಿವಾಸಕ್ಕೆ ಆಗಮಿಸಿ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ತೇಜಸ್ವಿನಿ ಮಾತನಾಡಿ, ತೇಜಸ್ವಿ ಸೂರ್ಯಗೆ ನನ್ನ ಸಂಪೂರ್ಣ ಸಹಕಾರ ನೀಡುತ್ತೇನೆ. ಪಕ್ಷದ ಸಿದ್ಧಾಂತವನ್ನು ನಾವು ಫಾಲೋ ಮಾಡಬೇಕು. ನಾಯಕರ ನೀರ್ಧಾರಕ್ಕೆ ಬದ್ಧರಾಗಿರೋಣ, ನಾನು ಎಂದಿಗೂ ಬಿಜೆಪಿ ಕಾರ್ಯಕರ್ತೆ ಎಂದು ಹೇಳಿದರು.

ನಮಗೆ ಅಸಮಾಧಾನ ಆಗಿರಬಹುದು. ಆದರೆ ಇಂಥ ಕಠಿಣ ಸಂದರ್ಣದಲ್ಲಿ ಪ್ರೌಢಿಮೆ ತೋರಬೇಕಾದ ಅಗತ್ಯವಿದೆ ಎಂದು ಕಾರ್ಯಕರ್ತರಿಗೆ ತೇಜಸ್ವಿನಿ ಕರೆ ನೀಡಿದರು.

ಗೋ ಬ್ಯಾಕ್‌ ತೇಜಸ್ವಿ ಸೂರ್ಯ

ಈ ನಡುವೆ ತೇಜಸ್ವಿನಿ ಅನಂತಕುಮಾರ್‌ ನಿವಾಸಕ್ಕೆ ಆಗಮಿಸಿದ ತೇಜಸ್ವಿ ಸೂರ್ಯ ಕಾರ್ಯಕರ್ತರು ಗೋ ಬ್ಯಾಕ್‌ ಗೋ ಬ್ಯಾಕ್‌ ಎಂದು ಕೂಗಿದರು.

ತೇಜಸ್ವಿನಿ ಅನಂತಕುಮಾರ್‌ ಅಭಿಮಾನಿಗಳು, ಕಾರ್ಯಕರ್ತರು ಜಮಾಯಿಸಿ, ತೇಜಸ್ವಿ ಸೂರ್ಯ ಗೋಬ್ಯಾಕ್‌, ಗೋ ಬ್ಯಾಕ್‌, ನಮಗೆ ನ್ಯಾಯ ಬೇಕು ಎಂದು ಘೋಷಣೆ ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ