ಆ್ಯಪ್ನಗರ

ಸುಮಲತಾ ಪರ ಗಡ್ಡಪ್ಪ ಮತ ಯಾಚನೆ

’ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡಿದ್ದಾರೆ. ಗ್ರಾಮಸ್ಥರಿಗೆ ಹೇಳಿ ಸುಮಲತಾ ಅವರಿಗೆ ಮತದಾನ ಮಾಡುವಂತೆ ಸಲಹೆ ನೀಡುವೆ ಎಂದೂ ಹೇಳಿದ್ದಾರೆ.

Vijaya Karnataka Web 13 Apr 2019, 7:39 pm
ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗುತ್ತಿದೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಪರ ಹಲವು ಸೆಲೆಬ್ರಿಟಿಗಳು ಬೆಂಬಲ ನೀಡುತ್ತಿದ್ದು, ಈ ಸಾಲಿಗೆ ಈಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ.
Vijaya Karnataka Web gaddappa


’ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಸುಮಲತಾ ಅಂಬರೀಷ್‌ಗೆ ಬೆಂಬಲ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಗಡ್ಡಪ್ಪ ಅವರು '' ನಟ ಅಂಬರೀಷ್ ತಾವು ಬದುಕಿದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಪತ್ನಿ ಸುಮಲತಾ ಸಹ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಇದೆ'' ಎಂದು ’ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಅವರು ಸುಮಲತಾ ಅಂಬರೀಷ್ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ.

ಮಂಡ್ಯ ತಾಲೂಕು ನೊದೆಕೊಪ್ಪಲು ಗ್ರಾಮದ ತಮ್ಮ ನಿವಾಸದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಅಂಬರೀಶ್ ಇದ್ದಾಗ ಒಳ್ಳೆಯ ಕೆಲಸ ಮಾಡಿದ್ದಾರೆ. ಗ್ರಾಮಸ್ಥರಿಗೆ ಹೇಳಿ ಸುಮಲತಾ ಅವರಿಗೆ ಮತದಾನ ಮಾಡುವಂತೆ ಸಲಹೆ ನೀಡುವೆ'' ಎಂದರು. ಅಲ್ಲದೆ ಇದೇ ವೇಳೆ ನಟ ದರ್ಶನ್ ತಮ್ಮ ಆರೋಗ್ಯ ವಿಚಾರಿಸಿದ್ದರ ಬಗ್ಗೆಯೂ ಖುಷಿಯಿಂದ ಹೇಳಿಕೊಂಡರು.

ಈಗಾಗಲೇ ಸುಮಲತಾ ಪರ ನಟರಾದ ಯಶ್‌, ದರ್ಶನ್‌ ಪ್ರಚಾರ ಮಾಡುತ್ತಿದ್ದು, ರಾಕ್‌ಲೈನ್‌ ವೆಂಕಟೇಶ್‌, ದೊಡ್ಡಣ್ಣ ಮುಂತಾದವರ ಬೆಂಬಲವಿದೆ. ಈಗ ’ತಿಥಿ’ ಸಿನಿಮಾ ಖ್ಯಾತಿಯ ಗಡ್ಡಪ್ಪ ಸಹ ಸುಮಲತಾ ಬೆಂಬಲಕ್ಕೆ ನಿಂತಿರುವುದರಿಂದ ಸುಮಲತಾಗೆ ಮತ್ತಷ್ಟು ಬೆಂಬಲ ಹೆಚ್ಚಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ