ಆ್ಯಪ್ನಗರ

ಲೋಕಸಭಾ ಚುನಾವಣೆ 2019: ಏ.5ರ ಮುಖ್ಯಾಂಶಗಳು

ಮುಖ್ಯಮಂತ್ರಿ ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಗುರುವಾರ ಬಿರುಸಿನ ಪ್ರಚಾರ ನಡೆಸಿದರು. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಸಿದ್ಧರಾಮಯ್ಯ ಸೇರಿದಂತೆ ಹೈಕಮಾಂಡ್‌ ಸೂಚನೆಯನ್ನು ಧಿಕ್ಕರಿಸಿ ನಿಖಿಲ್ ಅವರನ್ನು ಸೋಲಿಸುವ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಮಾಡಲೇ ಬೇಕು ಎಂಬ ಪಣ ತೊಟ್ಟಿದ್ದಾರೆ ಎಂದು ಟೀಕಿಸಿದರು.

Vijaya Karnataka Web 5 Apr 2019, 12:52 pm
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು 13 ದಿನಗಳಷ್ಟೇ ಉಳಿದಿವೆ. ಏಪ್ರಿಲ್ 18ಕ್ಕೆ ನಡೆಯುವ ಮತದಾನಕ್ಕೆ ಪಕ್ಷಗಳ ಪ್ರಚಾರ ಸಮರ ಬಿರುಸಾಗಿದೆ. ಬಿಸಿಲಿನ ಝಳವನ್ನೂ ಲೆಕ್ಕಿಸದೆ ನಾಯಕರು ಗೆಲುವಿಗಾಗಿ ಬೆವರು ಹರಿಸುತ್ತಿದ್ದಾರೆ.
Vijaya Karnataka Web HD Devegowda


ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದರೂ ರಾಜ್ಯದ ಗಮನ ಬಹುತೇಕ ರಾಜ್ಯದ ದೋಸ್ತಿ ಸರಕಾರಕ್ಕೆ ಪ್ರತಿಷ್ಠೆಯ ಕಣಗಳಾಗಿರುವ ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳಿಗೆ ಕೇಂದ್ರೀಕೃತವಾಗಿದೆ. ಉಳಿದಂತೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪ್ರಧಿಸುವ ಕಲಬುರಗಿ ಕ್ಷೇತ್ರವೂ ಗಮನ ಸೆಳೆಯುತ್ತಿದೆ.

ಖರ್ಗೆ ಅವರ ಕಡು ವಿರೋಧಿಯಾದ ಡಾ. ಉಮೇಶ್ ಜಾಧವ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು ತೀಕ್ಷ್ಣ ಸವಾಲು ಒಡ್ಡಿದ್ದಾರೆ. ಹೋಗಾಗಿ ಸೋಲಿಲ್ಲದ ಸರದಾರನೆಂಬ ಖರ್ಗೆ ಅವರ ಬಿರುದಿಗೆ ಈ ಬಾರಿ ಕಠಿಣ ಸವಾಲು ಎದುರಾಗಿದೆ.

ಮುಖ್ಯಮಂತ್ರಿ ಮಂಡ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು ಗುರುವಾರ ಬಿರುಸಿನ ಪ್ರಚಾರ ನಡೆಸಿದರು. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರು ಸಿದ್ಧರಾಮಯ್ಯ ಸೇರಿದಂತೆ ಹೈಕಮಾಂಡ್‌ ಸೂಚನೆಯನ್ನು ಧಿಕ್ಕರಿಸಿ ನಿಖಿಲ್ ಅವರನ್ನು ಸೋಲಿಸುವ ಮೂಲಕ ಕುಮಾರಸ್ವಾಮಿಗೆ ಮುಖಭಂಗ ಮಾಡಲೇ ಬೇಕು ಎಂಬ ಪಣ ತೊಟ್ಟಿದ್ದಾರೆ ಎಂದು ಟೀಕಿಸಿದರು.

ನಿನ್ನೆ ಹಾಗೂ ಇಂದು ಲೋಕಸಭಾ ಚುನಾವಣೆ ಕಣದಲ್ಲಿ ನಡೆದ, ನಡೆಯುತ್ತಿರುವ ಪ್ರಮುಖ ವಿದ್ಯಮಾನಗಳ ಹೈಲೈಟ್ಸ್‌ ಇಲ್ಲಿದೆ:
ಸುಸ್ಥಿರ, ಸುಭದ್ರ ಆಡಳಿತಕ್ಕಾಗಿ ಬಿಜೆಪಿ ಬೆಂಬಲಿಸಿ: ಡಿವಿ ಸದಾನಂದ ಗೌಡ

ಮಂಡ್ಯದಲ್ಲಿ ಸಿದ್ದರಾಮಯ್ಯ ಅಂಕೆ ಮೀರಿದ ಕಾಂಗ್ರೆಸಿಗರು
ಎಲ್ಲರೂ ಪಕ್ಷ ಬಿಟ್ಟು ಹೋದಾಗ ಕಣ್ಣೀರು ಹಾಕಿದ್ದೇನೆ: ದೇವೇಗೌಡ
ಚಾಮುಂಡೇಶ್ವರಿಯಲ್ಲಿ ಸಿದ್ದು ಸೋಲಿಗೆ ನಾವ್ಯಾರೂ ಕಾರಣರಲ್ಲ: ದೇವೇಗೌಡ
ಉತ್ತುಂಗಕ್ಕೇರಿದ ಉತ್ತರದ ರಣಕಣ
ಮುಸ್ಲಿಮರಿಗೆ ಕಾಂಗ್ರೆಸ್‌ನಿಂದ ಅನ್ಯಾಯ: ರೋಷನ್‌ ಬೇಗ್‌
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಏಕಾಂಗಿ!
ಕಾಂಗ್ರೆಸ್ ಮುಖಂಡನ ಶಿರಚ್ಛೇದನ ಹೇಳಿಕೆ ವೈರಲ್
ಕಲ್ಯಾಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ರಾಷ್ಟ್ರಪತಿ ಸೂಚನೆ
Flashback: ಮತದಾನ ಪದ್ಧತಿ ಹುಟ್ಟಿದ್ದೇ ಮೈಸೂರಲ್ಲಿ !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌