ಆ್ಯಪ್ನಗರ

ಕರ್ನಾಟಕದ ಲೋಕಸಭೆ ಚುನಾವಣಾ ಕಣ: ಮಾ.30 ಮುಖ್ಯಾಂಶಗಳು

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಏ.18ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಕೊನೇ ಅವಕಾಶ ಶುಕ್ರವಾರ ಮುಗಿದಿದ್ದು, ಅಂತಿಮ ಅಖಾಡ ಸಿದ್ಧವಾಗಿದೆ. ಮತದಾರರ ಓಲೈಕೆಗೆ ಇನ್ನು ಪ್ರಚಾರದ ಅಬ್ಬರ ಜೋರಾಗಲಿದೆ.

Vijaya Karnataka Web 30 Mar 2019, 6:40 pm
ಬೆಂಗಳೂರು: ಲೋಕಸಭೆ ಚುನಾವಣೆ 2019ರಲ್ಲಿ ಕರ್ನಾಟಕದ 28 ಕ್ಷೇತ್ರದಲ್ಲಿ ಅರ್ಧ ಭಾಗದಷ್ಟು ಕ್ಷೇತ್ರಗಳ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಶುಕ್ರವಾರ ಕೊನೆಗೊಂಡಿದ್ದು, ಏ.18ರಂದು ಈ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಇಂದು ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದ ಬೆಳವಣಿಗೆಗಳ ಮುಖ್ಯಾಂಶಗಳು ಇಲ್ಲಿವೆ.
Vijaya Karnataka Web Elections


ಮಂಡ್ಯ: ಮದ್ದೂರು ತಾಲ್ಲೂಕು ಆತಗೂರು ಗ್ರಾಮದಲ್ಲಿ ಭತ್ತ ನಾಟಿ ಮಾಡಿದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ. ಆತಗೂರು ಗ್ರಾಮದ ಶ್ರೀರಾಮಣ್ಣ ಎಂಬುವವರಿಗೆ ಸೇರಿದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಸ್ಥಳೀಯರನ್ನು ಓಲೈಸಲು ಯತ್ನಿಸಿದರು.

ನಿನ್ನೆ ಏನಾಯ್ತು: ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾಗಿದ್ದ ಹಾಲಿ ಸಂಸದ ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಉಮೇದುವಾರಿಕೆ ಹಿಂಪಡೆದಿದ್ದು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಮಿತ್ರಪಕ್ಷದಿಂದ ಎದುರಾಗಿದ್ದ ಬಂಡಾಯದ ಆತಂಕ ನಿವಾರಣೆಯಾಗಿದೆ.

ಕೋಲಾರದಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ಸಾರಿದ್ದ ಮಾಜಿ ಎಂಎಲ್‌ಸಿ ಡಿ.ಎಸ್‌.ವೀರಯ್ಯ ಅವರೂ ನಾಮಪತ್ರ ಹಿಂಪಡೆದಿದ್ದಾರೆ.

ಐಟಿ ದಾಳಿಯೇನೂ ಭಯೋತ್ಪಾದಕರ ದಾಳಿಯಲ್ಲ: ಮಂಡ್ಯದಲ್ಲಿ ಸಿ.ಟಿ ರವಿ

ಧರಂಗೆ 230 ವೋಲ್ಟೇಜ್ ಹೊಡೆದಿದ್ದೆ, ಖಂಡ್ರೆಗೆ 440 ವೋಲ್ಟೇಜ್ ಹೊಡೆಯುವೆ: ಖೂಬಾ ಡೈಲಾಗ್
ಉ.ಪ್ರ ಮಹಾಘಟಬಂಧನಕ್ಕೆ ಶಾಕ್: ಮೂರೇ ದಿನಕ್ಕೆ ಹೊರಬಿದ್ದ ನಿಷಾದ್ ಪಾರ್ಟಿ
200ನೇ ಬಾರಿ ಕಣಕ್ಕಿಳಿಯುತ್ತಿರುವವನಿಗೆ ಗೆದ್ದರೇನು ಮಾಡುವುದೆಂದು ಗೊತ್ತಿಲ್ಲವಂತೆ!
ಮೊದಲ ಕಣಕ್ಕೆ ಹಾದಿ ಸುಗಮ
ಬಿಜೆಪಿಗೆ 22 ಸ್ಥಾನ ಕೊಟ್ರೆ, ಮರುದಿನವೇ ಕುಮಾರಸ್ವಾಮಿ ಮನೆಗೆ ಹೋಗ್ತಾರೆ: ಮೊಯ್ಲಿ ಎಚ್ಚರಿಕೆ
ಎಲ್ಲರಿಗೂ ಕಾಸು, ಮತದಾರ ಮಾಡುವನೇ ಪಾಸು?

ಉರಿಬಿಸಿಲಿನಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಶನಿವಾರದಿಂದ ತಾರಕಕ್ಕೇರುತ್ತಿದೆ.

ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿಕೂಟ ಮಾ.31 ಭಾನುವಾರ ತುಮಕೂರು ರಸ್ತೆಯ ಬಿಐಇಸಿ ಮೈದಾನದಲ್ಲಿ ಜಂಟಿ ಪ್ರಚಾರ ಸಭೆ ಮೂಲಕ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಲಿದೆ. ರಾಹುಲ್‌ ಗಾಂಧಿ ಮತ್ತು ದೇವೇಗೌಡ ಭಾಗವಹಿಸಲಿದ್ದರೆ, ರಾಜ್ಯದ 7 ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಸಭೆಗಳಿಗೆ ಬಿಜೆಪಿ ತಯಾರಿ ಮಾಡಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ