ಆ್ಯಪ್ನಗರ

ಮೋದಿ ಪತ್ನಿಗೇ ರಕ್ಷ ಣೆಯಿಲ್ಲ, ಬೇಟಿ ಬಚಾವೋ ಎಲ್ಲಿ?: ವಿ.ಎಸ್‌.ಉಗ್ರಪ್ಪ

ತಾಲೂಕಿನ ಇಟಿಗಿಯಲ್ಲಿ ಶನಿವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ''ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರು, ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿಯವರು ತಮ್ಮ ಹಣೆಗೆ ಕುಂಕುಮ ಹಚ್ಚದಿರುವ ಕುರಿತು ಟೀಕಿಸಿದ್ದಾರೆ.

Vijaya Karnataka 21 Apr 2019, 8:19 am
ಬಳ್ಳಾರಿ: ಪಂಚಭೂತಗಳ ಸಾಕ್ಷಿಯಾಗಿ ಸಪ್ತಪದಿ ತುಳಿದು, ಮದುವೆಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರು, ತಮ್ಮ ಪತ್ನಿಯನ್ನೇ ಗೌರವದಿಂದ ಮನೆಯಲ್ಲಿಟ್ಟುಕೊಂಡಿಲ್ಲ. ಬಿಜೆಪಿಯವರು ಬೇರೆಯವರ ಮನೆಯ ಹೆಣ್ಣುಮಕ್ಕಳ ಸಂಸ್ಕೃತಿ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ವ್ಯಂಗ್ಯವಾಡಿದರು.
Vijaya Karnataka Web Ugrappa.


ತಾಲೂಕಿನ ಇಟಿಗಿಯಲ್ಲಿ ಶನಿವಾರ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ''ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಅವರು, ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿಯವರು ತಮ್ಮ ಹಣೆಗೆ ಕುಂಕುಮ ಹಚ್ಚದಿರುವ ಕುರಿತು ಟೀಕಿಸಿದ್ದಾರೆ. ಆದರೆ, ಅವರಿಗೆ ಮೋದಿಯವರ ಪತ್ನಿ, ಪ್ರತಿ ವರ್ಷ ಹಂಪೆಗೆ ಬಂದು ತನ್ನ ಪತಿಯ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಎಂಬುದು ಗೊತ್ತಿಲ್ಲ. ಆ ಹೆಣ್ಣುಮಗಳನ್ನು ಗೌರವದಿಂದ ಮನೆಯಲ್ಲಿಟ್ಟುಕೊಳ್ಳದ ಹಾಗೂ ರಕ್ಷ ಣೆ ನೀಡದ ಪ್ರಧಾನಿ ಮೋದಿಯವರು ಹೇಗೆ ತಾನೆ ಬೇಟಿ ಬಚಾವೋ ಮಾಡುತ್ತಾರೆ? ಬಿಜೆಪಿಯವರು ಮೊದಲು ತಮ್ಮ ಮನೆಯನ್ನು ಸರಿಪಡಿಸಿಕೊಳ್ಳಲಿ. ಸಂತೋಷ್‌ ಅವರಿಗೆ ಮೊದಲೇ ಮದುವೆಯಾಗಿಲ್ಲ. ಅವರಿಗೆಲ್ಲಿ ಸಂಸಾರದ ಸಮಸ್ಯೆ ಅರ್ಥವಾಗಬೇಕು?'' ಎಂದು ಟಾಂಗ್‌ ಕೊಟ್ಟರು.

ಇಮ್ರಾನ್‌, ಮೋದಿ ಕೋಮುವಾದಿಗಳು:

''ಪಾಕಿಸ್ತಾನ್‌ ಜತೆ ಕಾಂಗ್ರೆಸ್‌ ಮೃದು ಧೋರಣೆ ತೋರುತ್ತಿದೆ ಎಂಬ ವಿರೋಧಿಗಳ ಟೀಕೆ ಸರಿಯಲ್ಲ. ಪಾಕಿಸ್ತಾನವನ್ನು ಎರಡು ಭಾಗ ಮಾಡಿದ್ದೇ ಕಾಂಗ್ರೆಸ್‌. ಆ ಮೂಲಕ ಅಂದಿನಿಂದಲೂ ಅದು ನಮಗೆ ಶತೃ ರಾಷ್ಟ್ರ ಎಂದೇ ಪರಿಗಣಿಸಲಾಗಿದೆ. ಮೋದಿ ಮತ್ತು ಪಾಕ್‌ ಪ್ರಧಾನಿ ಇಮ್ರಾನ್‌ಖಾನ್‌ ಇಬ್ಬರೂ ಕೋಮುವಾದಿಗಳು. ಪರಸ್ಪರ ಷಡ್ಯಂತ್ರ ನಡೆಸುತ್ತಿದ್ದಾರೆ. ಇಮ್ರಾನ್‌ ಖಾನ್‌ ಅವರಿಗೆ ಇದೇ ಮೋದಿಯವರು ರೆಡ್‌ ಕಾರ್ಪೆಟ್‌ ಹಾಕಿ ಸ್ವಾಗತಿಸಿದ ನಿದರ್ಶನವಿದೆ'' ಎಂದು ಆರೋಪಿಸಿದರು.

''11ವರ್ಷ ಆಡಳಿತ ನಡೆಸಿದ ಬಿಜೆಪಿಗೆ ಜಿಲ್ಲೆಯಲ್ಲಿ ಒಂದಾದರೂ ಅಭಿವೃದ್ಧಿಯ ಹೆಜ್ಜೆ ಗುರುತುಗಳಿವೆಯೇ? ಬಡವರ ಶವದ ಮೇಲಿನ ಬಟ್ಟೆಗೂ ಜಿಎಸ್‌ಟಿ ವಿಧಿಸಿದ ಆಡಳಿತ ಬೇಕೇ? ಈ ಹಿಂದೆ ಬಳ್ಳಾರಿಯಲ್ಲಿ ಕರುಣಾಕರ ರೆಡ್ಡಿ ಅಣ್ಣ, ಅಕ್ಕ ಶಾಂತಕ್ಕ, ಮಾವ ಬಿ.ಶ್ರೀರಾಮುಲು ತಲಾ ಐದೈದು ವರ್ಷ ಆಡಳಿತ ನಡೆಸಿದ್ದಾರೆ. ಈ ಭಾಗದ ಒಂದಾದರೂ ಸಮಸ್ಯೆ ಕುರಿತು ಲೋಕಸಭೆಯಲ್ಲಿ ಅವರು ಪ್ರಶ್ನೆ ಎತ್ತಿದ್ದಾರೆಯೇ? ಬರೀ ಡೋಂಗಿ ಬಾಷಣ ಮಾಡುತ್ತಲೇ ತಮ್ಮ ಅವಧಿ ಪೂರ್ಣಗೊಳಿಸಿದ್ದಾರೆ'' ಎಂದು ಟೀಕಿಸಿದರು.

''ಮೋದಿ ಹೆಚ್ಚು ಮಾತು, ಕೆಲಸ ಕಡಿಮೆ. ಆದರೆ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರದು ಕಡಿಮೆ ಮಾತು, ಹೆಚ್ಚು ಕೆಲಸ. ಇಂದಿರಾ, ರಾಜೀವ್‌ ಗಾಂಧಿ ಅಕಾಲಿಕ ಬಲಿದಾನ, ಸೋನಿಯಾ ಅವರ ಅಧಿಕಾರ ತ್ಯಾಗ ಸೇರಿ ಕಾಂಗ್ರೆಸ್‌, ದೇಶಕ್ಕಾಗಿ ಅಪಾರ ತ್ಯಾಗ, ಬಲಿದಾನ ಮಾಡಿದೆ. ಆದರೆ, ಬಿಜೆಪಿ, ರಾಷ್ಟ್ರಪಿತ ಗಾಂಧಿಯನ್ನು ಕೊಂದ ಗೋಡ್ಸೆಯಂಥ ಕೊಲೆಗಾರನ ಫೋಟೊಕ್ಕೆ ಹಾರ ಹಾಕಿ ಸಂಭ್ರಮಿಸುತ್ತಿದೆ'' ಎಂದು ಕುಟುಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌