ಆ್ಯಪ್ನಗರ

ಬಿಜೆಪಿಯಿಂದ ಸೈನಿಕರ ಹೆಸರಲ್ಲಿ ರಾಜಕೀಯ: ಉಗ್ರಪ್ಪ ಕಿಡಿ

ರಾಜ್ಯದಲ್ಲಿ ಮೈತ್ರಿ ಪರ ಅಲೆ ಇದೆ. ಕಾಂಗ್ರೆಸ್‌ ಪಕ್ಷ ಈ ದೇಶಕ್ಕೆ ತ್ಯಾಗ ಮಾಡಿದೆ. ಬಿಜೆಪಿ ಈ ದೇಶಕ್ಕೆ ಏನು ಕೊಡುಗೆ ಕೊಟ್ಟಿದೆ? ಸೈನಿಕರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

Vijaya Karnataka Web 10 Apr 2019, 7:09 pm
ಬಳ್ಳಾರಿ: ಗಡಿ ಕಾಯುವ ಸೈನಿಕರ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
Vijaya Karnataka Web ugrappa


ತಾಲೂಕಿನ ರೂಪನಗುಡಿ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಪರ ಅಲೆ ಇದೆ. ಕಾಂಗ್ರೆಸ್‌ ಪಕ್ಷ ಈ ದೇಶಕ್ಕೆ ತ್ಯಾಗ ಮಾಡಿದೆ. ಬಿಜೆಪಿ ಈ ದೇಶಕ್ಕೆ ಏನು ಕೊಡುಗೆ ಕೊಟ್ಟಿದೆ? ಸೈನಿಕರ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

ಸೈನಿಕರು ಈ ದೇಶದ ಸ್ವತ್ತು. 2014 ರಲ್ಲಿ ಬಿಜೆಪಿ ಸ್ವರ್ಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು. ಆದರೆ ಏನೂ ಆಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿ ಅವರು ಪ್ರತಿ ಬಡ ಕುಟುಂಬಕ್ಕೆ 6 ಸಾವಿರ ರೂ.ಹಾಕುತ್ತೇವೆ ಎಂದು ಹೇಳಿ ವಾಗ್ದಾನ ನೀಡಿದ್ದಾರೆ. ಈ ಜನ್ಮದ ಕೊನೆಯ ಉಸಿರು ಇರುವರೆಗೆ ಈ ಭಾಗದ ಜನರ ಸೇವೆ ಮಾಡುವೆ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಚಿವ ಡಿ.ಕೆ.ಶಿವಕುಮಾರ್, ಮೋದಿ ಅವರನ್ನು ಪಿಎಂ ಮಾಡಲು, ಯಾರೂ ಅಭ್ಯರ್ಥಿ ಇಲ್ಲವೆಂದು, ನಮ್ಮ ಪಾರ್ಟಿಯ ದೇವೆಂದ್ರಪ್ಪ ಅವರನ್ನು ನಿಲ್ಲಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ವಾ. ನಮ್ಮ ಪಾರ್ಟಿಯವರೇ ಇವರಿಗೆ ಬೇಕಾ'' ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌