ಆ್ಯಪ್ನಗರ

ವೋಟ್‌ ಮಾಡಿ ಚಿನ್ನ ಖರೀದಿಸಿದರೆ ಬೆಳ್ಳಿ ಉಚಿತ!

ವೋಟಿಂಗ್‌ ಪ್ರಮಾಣ ಹೆಚ್ಚಿಸಿ ಪ್ರಜಾಪ್ರಭುತ್ವದ ಉಳಿಸುವ ಕಾರ್ಯಕ್ಕೆ ಸರಕಾರದ ಜತೆ ಜನರೂ ಕೈ ಜೋಡಿಸುತ್ತಿದ್ದಾರೆ. ಮತದಾರರಿಗೆ ನಾನಾ ಬಗೆಯ ಕೊಡುಗೆಗಳನ್ನು ನೀಡಿ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.

Vijaya Karnataka 14 Apr 2019, 2:46 pm
ಯಲಹಂಕ(ಬೆಂಗಳೂರು): ವೋಟಿಂಗ್‌ ಪ್ರಮಾಣ ಹೆಚ್ಚಿಸಿ ಪ್ರಜಾಪ್ರಭುತ್ವದ ಉಳಿಸುವ ಕಾರ್ಯಕ್ಕೆ ಸರಕಾರದ ಜತೆ ಜನರೂ ಕೈ ಜೋಡಿಸುತ್ತಿದ್ದಾರೆ. ಮತದಾರರಿಗೆ ನಾನಾ ಬಗೆಯ ಕೊಡುಗೆಗಳನ್ನು ನೀಡಿ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ. ಇದೇ ಮಾದರಿಯಲ್ಲಿ ರಾಜಧಾನಿ ಬೆಂಗಳೂರಿನ ಯಲಹಂಕದಲ್ಲಿರುವ ಜ್ಯುವೆಲ್ಲರ್‌ ಮಾಲೀಕರೊಬ್ಬರು ಮತದಾನ ಮಾಡಿದ ಶಾಯಿ ಗುರುತು ತೋರಿಸಿ ಚಿನ್ನ ಖರೀದಿಸಿದರೆ ಅಷ್ಟೇ ಪ್ರಮಾಣದ ಬೆಳ್ಳಿ ಉಚಿತವಾಗಿ ಕೊಡುವ ಆಫರ್‌ ಘೋಷಿಸಿದ್ದಾರೆ.
Vijaya Karnataka Web gold


ಬಿಬಿ ರಸ್ತೆಯ ಹಳೆ ಯಲಹಂಕದ ಬಸ್‌ ನಿಲ್ದಾಣದ ಮುಂಭಾಗದಲ್ಲಿರುವ ಸುಮತಿ ಜ್ಯುವೆಲ್ಲರ್ಸ್‌ ಮಾಲೀಕರಾದ ಪ್ರಕಾಶ್‌ ಚಂದ್‌ ಕೊಠಾರಿ ಅವರು ಈ ಉಡುಗೊರೆ ಕೊಡುವವವರು. ಬೆಂಗಳೂರಿನಲ್ಲಿ ಏಪ್ರಿಲ್‌ 18ರಂದು ಚುನಾವಣೆ ನಡೆಯಲಿದೆ. ಅಂದಿನಿಂದ ನಾಲ್ಕು ದಿನ ಅಂದರೆ ಏ. 21ರವರೆಗೆ ಈ ಕೊಡುಗೆ ಇರಲಿದೆ.

''ಇದು ರಾಜಕಿಯೇತರ, ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಜನರನ್ನು ಮತದಾನಕ್ಕೆ ಉತ್ತೇಜಿಸುವ ಉದ್ದೇಶ ಮಾತ್ರ ಇದೆ. ಇದನ್ನು ಸದುಪಯೋಗಪಡಿಸಿಕೊಳ್ಳಬಹುದು,'' ಮಾಲೀಕ ಪ್ರಕಾಶ್‌ ಚಂದ್‌ ಕೊಠಾರಿ ಹೇಳಿದರು. ''ನಮ್ಮ ತಂದೆ ಈ ಪ್ರದೇಶದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಈ ಯೋಜನೆಯನ್ನು ಘೋಷಿಸಿದ್ದೇವೆ,'' ಎಂದು ಜ್ಯುವೆಲ್ಲರ್ಸ್‌ನ ವ್ಯವಸ್ಥಾಪಕ ಸವೀನ್‌ ಪಿ ಕೊಠಾರಿ ವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌