ಆ್ಯಪ್ನಗರ

ದರ್ಶನ್, ಯಶ್‌ ಮಂಡ್ಯಗೆ ಏನು ಮಾಡಿದ್ದಾರೆ, ಚಿತ್ರನಟರೆಂದು ನೋಡಲು ಜನ ಸೇರುತ್ತಿದ್ದಾರೆ: ಶಾಸಕ ನಾರಾಯಣಗೌಡ

ನಾವೂ ಕೂಡ ಕೆಲವು ಸಂಧರ್ಭದಲ್ಲಿ ನಟರನ್ನು ನೋಡಲು ಹೋಗಿದ್ದೇವೆ. ಸಿನಿಮಾ ನೋಡೋಕೆ ಜನ ಹಣ ಕೊಟ್ಟು ಹೋಗ್ತಾರೆ.. ಈಗಲಾದರೂ ಜನರ ಕಷ್ಟ ಅವರಿಗೆ ಅರ್ಥವಾಗಲಿ ಎಂದು ನಾರಾಯಣಗೌಡ ತಿಳಿಸಿದರು.

Vijaya Karnataka Web 1 Apr 2019, 4:51 pm
ಮಂಡ್ಯ: ಜಿಲ್ಲೆಗೆ ಈ ಇಬ್ಬರು ಸಿನಿಮಾ ನಟರ ಕೊಡುಗೆ ಏನಿದೆ ಎಂದು. ಈಗ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ದರ್ಶನ ಕೊಡುತ್ತಿದ್ದಾರೆ ಎಂದು ದರ್ಶನ್, ಯಶ್ ಬಗ್ಗೆ ಕೆ.ಆರ್‌. ಪೇಟೆ ಶಾಸಕ ನಾರಾಯಣಗೌಡ ವ್ಯಂಗ್ಯವಾಡಿದ್ದಾರೆ.
Vijaya Karnataka Web ಶಾಸಕ ನಾರಾಯಣಗೌಡ
ಶಾಸಕ ನಾರಾಯಣಗೌಡ


ಕೆ.ಆರ್‌. ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ದರ್ಶನ್ ಪ್ರಚಾರದ ಭಯವೇ ನಮಗಿಲ್ಲ. ಇದುವರೆಗೇ ಜಿಲ್ಲೆಗೆ ಏನು ಕೊಟ್ಟಿದ್ದಾರೆ, ಈಗ ಏನು ಕೊಡ್ತಾರೆ ಹೇಳಿಕೊಂಡು ಬರಲಿ ಎಂದು ಸವಾಲು ಎಸೆದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಈ ಜಿಲ್ಲೆಗೆ ಬೇಕಾದಷ್ಟು ಕೊಡುಗೆ ನೀಡಿದೆ. ಅವರು ಅವರ ಕೆಲಸ ಮಾಡೋದು ಬಿಟ್ಟು ಬೇರೆ ಕೆಲಸಕ್ಕೆ ಬಂದಿದ್ದಾರೆ. ಜನ ಸಿನಿಮಾರಂಗದವರನ್ನ ಪರದೇ ಮೇಲೆ ನೋಡ್ತಿದ್ರು, ಈಗ ನ್ಯಾಚುರಲ್ ಆಗಿ ನೋಡ್ತಿದ್ದಾರೆ.. ಹೀಗಾಗಿ ಅವರನ್ನ ನೋಡಲು ಜನ ಹೋಗ್ತಿದ್ದಾರೆ ಅಷ್ಟೇ ಎಂದರು.

ನಾವೂ ಕೂಡ ಕೆಲವು ಸಂಧರ್ಭದಲ್ಲಿ ನಟರನ್ನು ನೋಡಲು ಹೋಗಿದ್ದೇವೆ. ಸಿನಿಮಾ ನೋಡೋಕೆ ಜನ ಹಣ ಕೊಟ್ಟು ಹೋಗ್ತಾರೆ.. ಈಗಲಾದರೂ ಜನರ ಕಷ್ಟ ಅವರಿಗೆ ಅರ್ಥವಾಗಲಿ ಎಂದು ನಾರಾಯಣಗೌಡ ತಿಳಿಸಿದರು.

ಮಂಡ್ಯ ಜೆಡಿಎಸ್ ಭದ್ರಕೋಟೆ. ಜನ ಅಭಿವೃದ್ಧಿ ಬಿಟ್ಟು ಬೇರೆ ಕಡೆ ಗಮನ ಕೊಡ್ತಾರ? ಅವರೇನಾದ್ರು ನಮ್ಮ ಕೈಗೆ ಸಿಗ್ತಾರ...? ದೇವೇಗೌಡರ ಕುಟುಂಬ ಯಾವಾಗ ಹೋದ್ರು ಸಿಗ್ತಾರೆ. ನಾವೂ ಅವರ ಪರ ಇರ್ತೀವಾ ಅಥವಾ ಯಾವಾಗ್ಲೋ ಒಮ್ಮೆ ಸಿಗುವ ನಟರ ಪರ ಇರ್ತೀವಾ ಎಂದು ತಿಳಿಸಿದರು.

ನಮಗೆ ಭಯ ಹುಟ್ಟಿಸಲು ಐಟಿ ರೇಡ್ ಮಾಡಿಸುತ್ತಿದ್ದಾರೆ. ಬಿಜೆಪಿ ಅವರೇ ಈ ಐಟಿ ದಾಳಿಗೆ ಕಾರಣ. ಮಂಡ್ಯ ನಗರದ ಬಗ್ಗೆ ಬಿಜೆಪಿ ಅವ್ರಿಗೆ ಕಣ್ಣಿದೆ. ಯಾವುದೇ ಕಾರಣಕ್ಕೂ ನಾವೂ ಗೆಲ್ಲಕ್ಕೆ ಆಗಲ್ಲ ಎಂದು ಸ್ವತಂತ್ರ ಅಭ್ಯರ್ಥಿಗೆ ಸಪೋರ್ಟ್ ಮಾಡ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿ ಗೆದ್ರೆ ಬಿಜೆಪಿಗೆ ಹೋಗುವ ಚಾನ್ಸಸ್ ಜಾಸ್ತಿ ಇದೆ ಎಂದರು.

ಮೋದಿ ಅವರು ಪಕ್ಷೇತರ ಅಭ್ಯರ್ಥಿಗೆ ಆಶೀರ್ವಾದ ಮಾಡಿದ್ದಾರೆ. ಐಟಿ ದಾಳಿ ಬಗ್ಗೆ ನಮಗೆ ಭಯವಿಲ್ಲ. ಐಟಿ ದಾಳಿಯಲ್ಲಿ ಬರಿ ಪೇಪರ್ ಸಿಕ್ಕಿರಬಹುದು ಎಂದು ಶಾಸಕ ನಾರಾಯಣಗೌಡ ವ್ಯಂಗ್ಯವಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ