ಆ್ಯಪ್ನಗರ

ನಿಖಿಲ್‌ ಕುಮಾರಸ್ವಾಮಿಯನ್ನು ಮಂಡ್ಯದಲ್ಲಿ ಕಣಕ್ಕಿಳಿಸಿದ್ದು ಏಕೆ ಗೊತ್ತಾ?: ಪುಟ್ಟರಾಜು

ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಸೈನಿಕರಂತೆ ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Vijaya Karnataka Web 29 Mar 2019, 8:31 pm
ಮಂಡ್ಯ: ಕೇಂದ್ರದಲ್ಲಿ ದಕ್ಷಿಣ ಭಾರತದ ಜನಪ್ರತಿನಿಗಳಿಗೆ ಮನ್ನಣೆಯಿಲ್ಲ. ಆದರೆ, ನಿಖಿಲ್ ಕುಮಾರಸ್ವಾಮಿ ಗೆದ್ದು ಸಂಸತ್ ಪ್ರವೇಶಿಸಿದರೆ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನೆಂಬುದು ಹೆಚ್ಚು ಕೆಲಸ ಮಾಡಲಿದೆ. ಇದನ್ನು ಪ್ರತಿಬಿಂಬಿಸಿ ಕೇಂದ್ರದ ಯೋಜನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಂಡ್ಯಕ್ಕೆ ತರಬಹುದು. ಹೀಗಾಗಿ ನಿಖಿಲ್ ಅವರನ್ನು ಅಭ್ಯರ್ಥಿ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌. ಪುಟ್ಟರಾಜು ತಿಳಿಸಿದ್ದಾರೆ.
Vijaya Karnataka Web ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ


ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಪುಟ್ಟರಾಜು ಮಾತನಾಡಿದರು.

ಐಆರ್‌ಎಸ್ ಹುದ್ದೆಗೆ ರಾಜೀನಾಮೆ ನೀಡಿ ಜೆಡಿಎಸ್‌ನಲ್ಲಿ ಸಕ್ರಿಯವಾಗಿದ್ದ ಲಕ್ಷ್ಮಿಅಶ್ವಿನ್‌ಗೌಡ ಅವರಿಗೆ ಪುನಃ ಕೆಲಸ ಕೊಡಿಸುವ ಪ್ರಯತ್ನ ನಡೆಯುತ್ತಿದೆ. ಅವರೆಲ್ಲೂ ತಮಗೆ ಅನ್ಯಾಯವಾಗಿದೆ ಎಂದು ಹೇಳಿಲ್ಲ.
- ಸಿ.ಎಸ್.ಪುಟ್ಟರಾಜು, ಜಿಲ್ಲಾ ಉಸ್ತುವಾರಿ ಸಚಿವ

ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಸೈನಿಕರಂತೆ ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಅವರೊಂದಿಗೆ ಸಚಿವ ಸಾ.ರಾ.ಮಹೇಶ್ ಸಮಾಲೋಚಿಸಿದ್ದು, ಅವರೂ ಶೀಘ್ರದಲ್ಲೇ ಪ್ರಚಾರಕ್ಕೆ ಬರಲಿದ್ದಾರೆ. ನಾಯಕರ ಹಂತದಲ್ಲಿ ಎಲ್ಲರೂ ಬೇಗ ಒಂದಾಗಿಬಿಡುತ್ತಾರೆ. ಆದರೆ, ಕಾರ್ಯಕರ್ತರ ಹಂತದಲ್ಲಿ ಅದು ಸ್ವಲ್ಪ ಕಷ್ಟ. ಆದರೆ, ಅದಕ್ಕೂ ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದರು.

ಸಂತಾಪ ಸೂಚಿಸುವ ಯೋಗ್ಯತೆಯಿಲ್ಲ


ಮೂರು ಬಾರಿ ಸಂಸದ, ಒಮ್ಮೆ ಕೇಂದ್ರ ಮಂತ್ರಿಯಾಗಿದ್ದ ಹಾಗೂ ದಿಲ್ಲಿಯಲ್ಲೂ ಅಪಾರ ಸ್ನೇಹ ಬಳಗವನ್ನು ಹೊಂದಿದ್ದ ಅಂಬರೀಷ್ ನಿಧನರಾದಾಗ ಲೋಕಸಭಾ ಅಧಿವೇಶನದಲ್ಲಿ ಅಂಬಿಗೆ ಸಂತಾಪ ಸೂಚಿಸುವ ಯೋಗ್ಯತೆಯಿಲ್ಲ. ಇವರಿಂದ ನಾವು ನೀತಿಪಾಠ ಕಲಿಯಬೇಕಾ? ಬಿಜೆಪಿಗಾಗಿ ದುಡಿದ ಅನಂತಕುಮಾರ್ ಪತ್ನಿ ಬಗ್ಗೆ ಇಲ್ಲದ ಅನುಕಂಪ ಮಂಡ್ಯದಲ್ಲಿ ಹೇಗೆ ಬಂತು ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌