ಆ್ಯಪ್ನಗರ

ನಾನು ಸುಲಭವಾಗಿ ಸಾಯಲ್ಲ, ದೇವರು, ಜನರ ಆಶೀರ್ವಾದ ಇದೆ: ಕುಮಾರಸ್ವಾಮಿ

ಲೋಕಸಭೆ ಚುನಾವಣೆ ಬಳಿಕ ಸರಕಾರ ಬೀಳೋದಾಗಿ ಬಿಎಸ್‌ವೈ ಹೇಳಿದ್ದರು. ದೇವರ ಅಶೀರ್ವಾದ ನನ್ನ ಮೇಲಿದೆ‌. ಸರಕಾರ ಸುಭದ್ರವಾಗಿರಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka Web 17 Apr 2019, 5:29 pm
ಭದ್ರಾವತಿ: ನಾನು ಅಷ್ಟು ಸುಲಭವಾಗಿ ಸಾಯಲ್ಲ. ದೇವರು ಮತ್ತು ಜನರ ಆಶೀರ್ವಾದ ನನ್ನ ಮೇಲಿದೆ. ಸರಕಾರ ಪತನ ಆಗುತ್ತೆ ಎನ್ನುವವರು ಕನಸು ಕಾಣುತ್ತಲೇ ಇರಬೇಕು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Vijaya Karnataka Web ಕುಮಾರಸ್ವಾಮಿ
ಕುಮಾರಸ್ವಾಮಿ


ಭದ್ರಾವತಿ ತಾಲೂಕಿನ ಆನವೇರಿ ಸಮೀಪದ ಮಲ್ಲಾಪುರ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭಾಷಣ ಮಾಡಿದರು.

ಲೋಕಸಭೆ ಚುನಾವಣೆ ಬಳಿಕ ಸರಕಾರ ಬೀಳೋದಾಗಿ ಬಿಎಸ್‌ವೈ ಹೇಳಿದ್ದರು. ದೇವರ ಅಶೀರ್ವಾದ ನನ್ನ ಮೇಲಿದೆ‌. ಸರಕಾರ ಸುಭದ್ರವಾಗಿರಲಿದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೈತರಿಗೆ ಕೆಲವು ರಾಷ್ಟ್ರೀಯ ಬ್ಯಾಂಕ್ ನೋಟಿಸ್‌ ನೀಡುತ್ತಿರುವುದಾಗಿ ತಿಳಿದುಬಂದಿದೆ. ಒಂದುವೇಳೆ, ಇದೇ ರೀತಿ ನೋಟಿಸ್‌ ನೀಡಿದ್ದಲ್ಲಿ ಅಂತಹ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸರಕಾರ ಕ್ರಮಕೈಗೊಳ್ಳಲಿದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ರೈತರ ಸಾಲಮನ್ನಾ ಮಾಡಿ ಸರಕಾರ ಆದೇಶ ನೀಡಿದೆ. ಆದರೂ ಬ್ಯಾಂಕ್‌ಗಳು ನೋಟಿಸ್‌ ಜಾರಿ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ