ಆ್ಯಪ್ನಗರ

ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದ್ರೆ ನಾವು ಸುಮ್ಮನಿರಲ್ಲ: ಯಶ್‌

ನಾವು ಪ್ರಚಾರದ ವೇಳೆ ಹೇಳಿಕೆಗಳಿಗೆ ಮಾತಾಡಬಾರ್ದು ಅಂತ ಇದ್ವಿ. ನಾವು ಹೇಳಿಕೆ ಕೊಡಬಾರ್ದು ಅಂತ, ನುಂಗ್ಕೊಂಡು ನುಗ್ಕೊಂಡು ಇದ್ವಿ. ಈಗ ಎಲ್ಲದ್ದಕ್ಕೂ ಉತ್ತರ ಕೊಡೋ ಸಮಯ ಬಂದಿದೆ.

Vijaya Karnataka Web 16 Apr 2019, 7:08 pm
ಮಂಡ್ಯ: ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರವಾಗಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ರಾಕಿಂಗ್‌ ಸ್ಟಾರ್ ಯಶ್‌ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
Vijaya Karnataka Web ಯಶ್‌
ಯಶ್‌


ಸಮಾವೇಶದಲ್ಲಿ ಮಾತನಾಡಿದ ಯಶ್‌, ಮುಖ್ಯಮಂತ್ರಿಗೆ ಸವಾಲು ಹಾಕಿದರು.

ನಾವು ಪ್ರಚಾರದ ವೇಳೆ ಹೇಳಿಕೆಗಳಿಗೆ ಮಾತಾಡಬಾರ್ದು ಅಂತ ಇದ್ವಿ. ನಾವು ಹೇಳಿಕೆ ಕೊಡಬಾರ್ದು ಅಂತ, ನುಂಗ್ಕೊಂಡು ನುಗ್ಕೊಂಡು ಇದ್ವಿ. ಈಗ ಎಲ್ಲದ್ದಕ್ಕೂ ಉತ್ತರ ಕೊಡೋ ಸಮಯ ಬಂದಿದೆ ಎಂದು ಯಶ್‌ ಗುಡುಗಿದರು.

ನಮಗೂ ರಕ್ತ ಕುದಿಯುತ್ತೆ. ನಮ್ಮ ಮನೆ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ್ರೆ. ನಾವು ಸುಮ್ಮನ್ನಿರೋಲ್ಲ, ಎಷ್ಟೇ ದೊಡ್ಡವರಾದ್ರು ಅಷ್ಟೇ. ಸಮಾವೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಪರೋಕ್ಷವಾಗಿ ಸಿಎಂಗೆ ಟಾಂಗ್‌ ನೀಡಿದರು.

ಚುನಾವಣೆಗೂ ಮುನ್ನ ಎಲ್ರೂ ಅಣ್ಣತಮ್ಮಂದಿರಂತೆ ಇದ್ರು. ಇದೀಗಾ ನನ್ನ ವಿಷ್ಯದಲ್ಲಿ ಸುಳ್ಳು ಹೇಳ್ತಿದ್ದಾರೆ. ನಾನು ಕಳ್ಳರ ಪಕ್ಷ ಅಂತ ಹೇಳಿದ್ನಂತೆ. ನಾನು ತುಂಬಾ ಭಕ್ತಿಯಿಂದ ನಂಬೋದು ಮಂಜುನಾಥ್ ಸ್ವಾಮಿಯನ್ನು. ಮಂಜುನಾಥ ಸ್ವಾಮಿ‌ ಮೇಲೆ ಆಣೆ ಮಾಡಿ ಹೇಳ್ತಿದೀನಿ. ನಾನು‌ ಕಳ್ಳರ ಪಕ್ಷ ಅಂತ ಹೇಳಿಲ್ಲ ಎಂದು ಹೇಳಿದರು.

ಒಂದು ವೇಳೆ ನಾನು ಹೇಳಿದಕ್ಕೆ ಸಾಕ್ಷಿ ಇದ್ದರೆ, ವೀಡಿಯೋ ಏನಾದರೂ ಸಿಕ್ಕಿದರೆ ಮಂಡ್ಯ ಬಿಟ್ ಹೋಗ್ತೀನಿ, ಸಿನಿಮಾ ಬಿಟ್ ಹೋಗ್ತೀನಿ. ಸುಮ್ನೆ ನಾನು ಹೇಳ್ತಿಲ್ಲ, ಹೇಳಿ ಬೇರೆಯವ್ರ ಥರ ಮಾಡಲ್ಲ. ಇದು ಅರ್ಥ ಆಗಿರೋರಿಗೆ ಅರ್ಥ ಆಗುತ್ತೆ ಎಂದು ಕುಮಾರಸ್ವಾಮಿಗೆ ಯಶ್ ಸವಾಲು ಹಾಕಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌