ಆ್ಯಪ್ನಗರ

ಜೆಡಿಎಸ್‌ನವರಿಗೆ 'ನಾಳೆ ಬಾ' ಎನ್ನಿ: ಯಶ್‌

ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಈಗಾಗಲೇ ಜೆಡಿಎಸ್‌ ಅನ್ನು ಗೆಲ್ಲಿಸಿ ಆಗಿದೆ. ಮೊದಲು ಅದಕ್ಕೆ ಕೂಲಿ ಕೇಳಿ. ಕೂಲಿ ಸಂದಾಯವಾದ ಬಳಿಕ ಅವರು ಬರಲಿ. ಅದಕ್ಕಾಗಿ 'ನಾಳೆ ಬಾ' ಎಂದು ಬೋರ್ಡ್‌ ಹಾಕಿಕೊಳ್ಳಿ,''ಎಂದು ಹೇಳಿದರು.

Vijaya Karnataka 15 Apr 2019, 7:55 am
ಕೆ.ಆರ್‌.ಪೇಟೆ: ಮತ ಕೇಳಲು ನಿಮ್ಮೆದುರು ಬರುವ ಜೆಡಿಎಸ್‌ನವರಿಗೆ 'ನಾಳೆ ಬಾ' ಎಂದು ಬೋರ್ಡ್‌ ಹಾಕಿ ಎಂದು ಚಿತ್ರನಟ ಯಶ್‌ ಅವರು ಅಭಿಮಾನಿಗಳಿಗೆ ಸಲಹೆ ನೀಡಿದರು.
Vijaya Karnataka Web yash


ಕೆ.ಆರ್‌.ಪೇಟೆ ಟೌನ್‌ನ ಹಾಸ್ಟೆಲ್‌ ಬಿಲ್ಡಿಂಗ್‌ ವೃತ್ತದಲ್ಲಿ ಭಾನುವಾರ ರಾತ್ರಿ ರೋಡ್‌ ಶೋ ನಡೆಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಪರ ಪ್ರಚಾರ ನಡೆಸಿದ ಅವರು ಮಾತನಾಡಿ, ''ಲೋಕಸಭಾ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಈಗಾಗಲೇ ಜೆಡಿಎಸ್‌ ಅನ್ನು ಗೆಲ್ಲಿಸಿ ಆಗಿದೆ. ಮೊದಲು ಅದಕ್ಕೆ ಕೂಲಿ ಕೇಳಿ. ಕೂಲಿ ಸಂದಾಯವಾದ ಬಳಿಕ ಅವರು ಬರಲಿ. ಅದಕ್ಕಾಗಿ 'ನಾಳೆ ಬಾ' ಎಂದು ಬೋರ್ಡ್‌ ಹಾಕಿಕೊಳ್ಳಿ,''ಎಂದು ಹೇಳಿದರು.

''ಏ.18ರ ನಂತರ ಸುಮಲತಾ ಅವರು ಮಂಡ್ಯ ಬಿಟ್ಟು ಓಡಿ ಹೋಗಲಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅವರು ಓಡಿ ಹೋಗಲು ಬಂದಿಲ್ಲ. ದುರಹಂಕಾರ, ದರ್ಪದಿಂದ ಮೆರೆಯುವವರನ್ನು ಓಡಿಸಲು ಬಂದಿದ್ದಾರೆ. ಚುನಾವಣೆ ವೇಳೆ ಜೆಡಿಎಸ್‌ನವರು ಬೇಕೆಂದೇ ನಮ್ಮ ಅಭಿಮಾನಿಗಳು ಉದ್ವೇಗಕ್ಕೊಳಗಾಗುವಂಥ ಮಾತುಗಳನ್ನು ಮಾಡುತ್ತಿದ್ದಾರೆ. ಅವರ ಮಾತುಗಳಿಗೆ ಉದ್ವೇಕಕ್ಕೊಳಗಾಗಬೇಡಿ. ನೀವು ಪ್ರೀತಿಯಿಂದ ಸುಮಲತಾ ಪರವಾಗಿ ಮತ ಕೇಳಿ. ನಾವು ಇಲ್ಲೇ ಇರ್ತೀವಿ ಅಣ್ತಮ್ಮ''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌