ಆ್ಯಪ್ನಗರ

ಹೌದು, ನಾನು ನಾಯ್ಡು, ಅದರಲ್ಲಿ ತಪ್ಪೇನು, ಅದೇನು ಅಪರಾಧನಾ: ಶಿವರಾಮೇಗೌಡಗೆ ದರ್ಶನ್‌ ಪಂಚ್‌

ಮಂಡ್ಯದಲ್ಲಿ ಮುಂದಿನ 10 ದಿನಗಳ ಕಾಲವೂ ಪ್ರಚಾರ ಮಾಡುತ್ತೇನೆ. 18ನೇ ತಾರೀಖಿನ ನಂತರ ಯಾವುದೇ ಜಾತಿ ರಾಜಕಾರಣ. ವಿವಾದಗಳು ಇರುವುದಿಲ್ಲ. ಎಲ್ಲವೂ ತಣ್ಣಗಾಗುತ್ತದೆ. ಸುಮಲತಾ ಪರವಾಗಿ ಪ್ರಚಾರ ನಡೆಸುತ್ತೇವೆ ಎಂದು ದರ್ಶನ್‌ ಹೇಳಿದರು.

Vijaya Karnataka Web 2 Apr 2019, 3:16 pm
ಮಂಡ್ಯ: ಮಂಡ್ಯ ಲೋಕಸಭಾ ಕಣದಲ್ಲಿ ಈಗ ವಿವಾದಾತ್ಮಕ ಹೇಳಿಕೆಗಳು ಕಂಡುಬರುತ್ತಿವೆ. ಅದರಲ್ಲೂ ಜಾತಿ ಕುರಿತು ಹೇಳಿಕೆಗಳಿಂದ ಭಾರಿ ವಿವಾದಗಳು ಸೃಷ್ಟಿಯಾಗುತ್ತಿವೆ.
Vijaya Karnataka Web ದರ್ಶನ್‌
ದರ್ಶನ್‌


ಸುಮಲತಾ ಮಂಡ್ಯ ಗೌಡ್ತಿಯೇ ಅಲ್ಲ, ಆಕೆ ನಾಯ್ಡು, ದರ್ಶನ್‌ ಕೂಡ ನಾಯ್ಡು, ರಾಕ್‌ಲೈನ್‌ ವೆಂಕಟೇಶ್‌ ಕೂಡ ನಾಯ್ಡು, ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ ಸಿನಿಮಾ ಮಂದಿ ಎಂದು ಜೆಡಿಎಸ್‌ನ ಎಲ್‌.ಆರ್.‌ ಶಿವರಾಮೇಗೌಡ ನೀಡಿದ ಹೇಳಿಕೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತಮ್ಮದೇ ಶೈಲಿಯಲ್ಲಿ ಟಾಂಗ್‌ ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್‌, ಹೌದು ನಾನು ನಾಯ್ಡು, ಅದರಲ್ಲಿ ತಪ್ಪೇನು, ನಾಯ್ಡು ಆಗಿಬಿಟ್ಟರೆ ಅಪರಾಧನಾ ಎಂದು ಪ್ರಶ್ನಿಸಿದ್ದಾರೆ.

ನಾನೊಂದು ರೀತಿ ಕಾಡು ಮನುಷ್ಯ ಇದ್ದ ಹಾಗೆ. ಯಾವುದಕ್ಕೂ ಕೇರ್‌ ಮಾಡಲ್ಲ. ಅವರು ಈ ರೀತಿಯ ಹೇಳಿಕೆ ಕೊಟ್ಟರೆ ನಾನೇನೂ ಹೇಳಲ್ಲ, ಅವರನ್ನೇ ಕೇಳಿ ಎಂದು ದರ್ಶನ್‌ ತಿರುಗೇಟು ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಮುಂದಿನ 10 ದಿನಗಳ ಕಾಲವೂ ಪ್ರಚಾರ ಮಾಡುತ್ತೇನೆ. 18ನೇ ತಾರೀಖಿನ ನಂತರ ಯಾವುದೇ ಜಾತಿ ರಾಜಕಾರಣ. ವಿವಾದಗಳು ಇರುವುದಿಲ್ಲ. ಎಲ್ಲವೂ ತಣ್ಣಗಾಗುತ್ತದೆ. ಸುಮಲತಾ ಪರವಾಗಿ ಪ್ರಚಾರ ನಡೆಸುತ್ತೇವೆ ಎಂದು ಹೇಳಿದರು.

ಸಿನಿಮಾ ಮಂದಿಯನ್ನು ಟೂರಿಂಗ್‌ ಟಾಕೀಸ್‌ ಎಂದು ಕರೆಯುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ, ಇಂಥವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ನಾವು ಹೇಗಿದ್ದೇವೋ ಅದೇ ರೀತಿ ಇದ್ದೇವೆ. ನಮ್ಮ ಸುಮಕ್ಕನ ಗೆಲ್ಲಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಚಿತ್ರನಟ ದರ್ಶನ್‌ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ