ಆ್ಯಪ್ನಗರ

ಮೋದಿ ಭಾರತವನ್ನು ಹಿಂದೂ ದೇಶ ಮಾಡ್ತಾರೆ, ಅದಕ್ಕೆ ಜೆಡಿಎಸ್‌ಗೆ ಮತ ನೀಡಿ: ಜಫ್ರುಲ್ಲಾಖಾನ್‌

ಮೋದಿಗೆ ಮತ ಹಾಕಿದ್ರೆ ಇಂಡಿಯಾನ ಹಿಂದೂ ದೇಶ ಮಾಡ್ತಾರೆ. ಬುರ್ಖಾ, ತಲಾಖ್‌ ಹಾಗೂ ಆಹಾರ ಪದ್ಧತಿ ಕುರಿತ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾರೆ. ಅದಕ್ಕೆ ಜೆಡಿಎಸ್‌ ಬೆಂಬಲಿಸಿ'' ಎಂದು ಮನವಿ ಮಾಡಿದರು.

Vijaya Karnataka 15 Apr 2019, 8:08 am
Vijaya Karnataka Web jaffarulla
ಮಂಡ್ಯ: ನಿಖಿಲ್‌ ತಾತ ಸೆಕ್ಯೂಲರ್‌, ಅಪ್ಪ ಸೆಕ್ಯೂಲರ್‌, ಈಗ ಮಗನೂ ಸೆಕ್ಯೂಲರ್‌. ಒಟ್ಟಾರೆ ದೇವೇಗೌಡ್ರುದು ಸೆಕ್ಯೂಲರ್‌ ಕುಟುಂಬ ಎಂದು ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ‍್ಯದರ್ಶಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಫ್ರುಲ್ಲಾಖಾನ್‌ ಹೇಳಿದ್ದಾರೆ.

ನಗರದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಮುಸ್ಲಿಂ ಸಮುದಾಯದಿಂದ ನಡೆದ ಮಂಡ್ಯ ಜಿಲ್ಲಾ ಮಸೀದಿಗಳ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ''ಮೋದಿಗೆ ಮತ ಹಾಕಿದ್ರೆ ಇಂಡಿಯಾನ ಹಿಂದೂ ದೇಶ ಮಾಡ್ತಾರೆ. ಬುರ್ಖಾ, ತಲಾಖ್‌ ಹಾಗೂ ಆಹಾರ ಪದ್ಧತಿ ಕುರಿತ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾರೆ. ಅದಕ್ಕೆ ಜೆಡಿಎಸ್‌ ಬೆಂಬಲಿಸಿ'' ಎಂದು ಮನವಿ ಮಾಡಿದರು.

''ಸುಮಲತಾ ಪಕ್ಷೇತರ ಅಭ್ಯರ್ಥಿಯಲ್ಲ. ಅವರು ನೇರವಾಗಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಣ ತೆಗೆದುಕೊಂಡು ನಟನೆ ಹಾಗೂ ಡೈಲಾಗ್‌ ಹೇಳುತ್ತಿದ್ದಾರೆ'' ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ''ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎನ್ನುವ ಮೋದಿ ಯಾರ ಅಭಿವೃದ್ಧಿ ಮಾಡಿದ್ದಾರೆ? ಪೆಟ್ರೋಲ್‌, ಡೀಸೆಲ್‌, ತರಕಾರಿ ಎಲ್ಲ ವಸ್ತುಗಳು ದುಬಾರಿಯಾಗಿವೆ. ಸಾವಿರಾರು ಕೋಟಿ ಹಣ ಖರ್ಚು ಮಾಡಿದರೂ ರೈತರಿಗೆ ರೂಪಾಯಿ ಉಪಯೋಗವಾಗಿಲ್ಲ. ರೈತರ ನಡುವೆ ಇರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪುತ್ರ ಕೆ.ನಿಖಿಲ್‌ ಅವರಿಗೆ ಗೆಲ್ಲಿಸಿದರೆ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ರಾಜ್ಯದಲ್ಲಿ ನೆರವಾಗಲಿದೆ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್‌, ಜೆಡಿಎಸ್‌ ಅಲ್ಪ ಸಂಖ್ಯಾತರ ರಾಜ್ಯ ಘಟಕ ಉಪಾಧ್ಯಕ್ಷ ರಫೀವುಲ್ಲಾ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮೊಹಿದ್ದೀನ್‌ ಸಾಬ್‌, ಸಮುದಾಯದ ಮುಖಂಡರಾದ ಉಜ್ವಾನ್‌ ಮುಫ್ತಿ ಸಾಬ…, ಜಬೀವುಲ್ಲಾ ಖಾನ್‌ ಹಾಜರಿದ್ದರು.

ಮಸೀದಿ ಪದಾಧಿಕಾರಿಗಳ ನಿರ್ಧಾರ:

ಜಫ್ರುಲ್ಲಾಖಾನ್‌ ಅವರ ಅಧ್ಯಕ್ಷತೆಯಲ್ಲಿ ಮಂಡ್ಯದಲ್ಲಿ ನಡೆದ ಮಂಡ್ಯ ಜಿಲ್ಲಾ ಮಸೀದಿಗಳ ಸಮಿತಿಗಳ ಸಭೆಯಲ್ಲಿ ಜಿಲ್ಲೆಯ ಬಹುತೇಕ ಮುಸ್ಲಿಂ ಮಸೀದಿ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ‍್ಯದರ್ಶಿಗಳು ಭಾಗವಹಿಸಿದ್ದರು. ಮಂಡ್ಯ ಲೋಕ ಅಖಾಡದಲ್ಲಿ ಯಾರನ್ನು ಬೆಂಬಲಿಸಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮವಾಗಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಬೆಂಬಲಿಸುವ ನಿರ್ಧಾರ ಕೈಗೊಳ್ಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ