ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಸ್ಲಿಮ್ ನಾಯಕರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಅಧಿಕಾರ ಸಿಕ್ಕಿಲ್ಲ ಎಂದು ರೋಷನ್ ಬೇಗ್ ಟೀಕೆ ಮಾಡುವುದು ಸರಿಯಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಮೀರ್ ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೋಷನ್ ಬೇಗ್ ಸಚಿವರಾಗಿ ಮಜಾ ಉಡಾಯಿಸಿದರು. ಆಗ ಅವರಿಗೆ ಕಾಂಗ್ರೆಸ್ ಚೆನ್ನಾಗಿತ್ತು. ಈಗ ಅವರಿಗೆ ಪಕ್ಷ ಸರಿ ಇಲ್ಲವೇ ಎಂದು ಪ್ರಶ್ನಿಸಿದರು.
ರೋಷನ್ ಬೇಗ್ ಹೇಳಿದ ತಕ್ಷಣ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಲು ಸಾಧ್ಯವೇ. ಈ ರೀತಿ ಆಗುವುದಿಲ್ಲ. ರೋಷನ್ ಬೇಗ್ ಅಧಿಕಾರ ಇಲ್ಲದೇ ಈ ರೀತಿ ಹೇಳಿರಬಹುದೇನೋ ಗೊತ್ತಿಲ್ಲ ಎಂದು ಜಮೀರ್ ತಿಳಿಸಿದರು.
ಮತಗಟ್ಟೆ ಸಮೀಕ್ಷೆ ಎನ್ಡಿಎ ಪರವಾಗಿದ್ದರೂ ನಮ್ಮ ಪಕ್ಷದ ಮುಸ್ಲಿಮ್ ನಾಯಕರು ಬಿಜೆಪಿ ಕಡೆ ತಲೆ ಹಾಕುವುದಿಲ್ಲ. ರೋಷನ್ ಬೇಗ್ ಬಹುಶಃ ಪಕ್ಷ ಬದಲಿಸುವ ಮಾತನಾಡಿರಹುದು. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ತಿರುಗೇಟು ನೀಡಿದರು.
ನನ್ನನ್ನು ಮಂತ್ರಿ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಾರಿಗೂ ಕೂಡ ಸುಮ್ಮನೆ ಅಧಿಕಾರ ಸಿಗಲ್ಲ. ಹೈಕಮಾಂಡ್ ಸೂಕ್ತವಾಗಿ ಅಳೆದು ತೂಗಿ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ರೋಷನ್ ಬೇಗ್ ಯಾವ ಕಾರಣಕ್ಕೆ ಕಾಂಗ್ರೆಸ್ ಸರಿ ಇಲ್ಲ ಎನ್ನುತ್ತಿದ್ದಾರೆ ಗೊತ್ತಿಲ್ಲ. ಮತಗಟ್ಟೆ ಸಮೀಕ್ಷೆ ಬರುವವರೆಗೂ ಕಾಂಗ್ರೆಸ್ ಸರಿ ಇತ್ತು. ಈಗ ಸರಿ ಇಲ್ಲ. ಬೇಗ್ ಮಂತ್ರಿಯಾದಾಗ ಸಿದ್ದರಾಮಯ್ಯ ಚೆನ್ನಾಗಿದ್ದರು. ಈಗ ಚೆನ್ನಾಗಿಲ್ಲ ಎಂದು ನಂಬುವುದು ಹೇಗೆ ಎಂದು ಜಮೀರ್ ಅಹಮದ್ ತಿಳಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಮೀರ್ ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೋಷನ್ ಬೇಗ್ ಸಚಿವರಾಗಿ ಮಜಾ ಉಡಾಯಿಸಿದರು. ಆಗ ಅವರಿಗೆ ಕಾಂಗ್ರೆಸ್ ಚೆನ್ನಾಗಿತ್ತು. ಈಗ ಅವರಿಗೆ ಪಕ್ಷ ಸರಿ ಇಲ್ಲವೇ ಎಂದು ಪ್ರಶ್ನಿಸಿದರು.
ರೋಷನ್ ಬೇಗ್ ಹೇಳಿದ ತಕ್ಷಣ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರನ್ನು ಬದಲಾವಣೆ ಮಾಡಲು ಸಾಧ್ಯವೇ. ಈ ರೀತಿ ಆಗುವುದಿಲ್ಲ. ರೋಷನ್ ಬೇಗ್ ಅಧಿಕಾರ ಇಲ್ಲದೇ ಈ ರೀತಿ ಹೇಳಿರಬಹುದೇನೋ ಗೊತ್ತಿಲ್ಲ ಎಂದು ಜಮೀರ್ ತಿಳಿಸಿದರು.
ಮತಗಟ್ಟೆ ಸಮೀಕ್ಷೆ ಎನ್ಡಿಎ ಪರವಾಗಿದ್ದರೂ ನಮ್ಮ ಪಕ್ಷದ ಮುಸ್ಲಿಮ್ ನಾಯಕರು ಬಿಜೆಪಿ ಕಡೆ ತಲೆ ಹಾಕುವುದಿಲ್ಲ. ರೋಷನ್ ಬೇಗ್ ಬಹುಶಃ ಪಕ್ಷ ಬದಲಿಸುವ ಮಾತನಾಡಿರಹುದು. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಎಂದು ತಿರುಗೇಟು ನೀಡಿದರು.
ನನ್ನನ್ನು ಮಂತ್ರಿ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಯಾರಿಗೂ ಕೂಡ ಸುಮ್ಮನೆ ಅಧಿಕಾರ ಸಿಗಲ್ಲ. ಹೈಕಮಾಂಡ್ ಸೂಕ್ತವಾಗಿ ಅಳೆದು ತೂಗಿ ನಿರ್ಧಾರ ಕೈಗೊಳ್ಳುತ್ತದೆ ಎಂದರು.
ರೋಷನ್ ಬೇಗ್ ಯಾವ ಕಾರಣಕ್ಕೆ ಕಾಂಗ್ರೆಸ್ ಸರಿ ಇಲ್ಲ ಎನ್ನುತ್ತಿದ್ದಾರೆ ಗೊತ್ತಿಲ್ಲ. ಮತಗಟ್ಟೆ ಸಮೀಕ್ಷೆ ಬರುವವರೆಗೂ ಕಾಂಗ್ರೆಸ್ ಸರಿ ಇತ್ತು. ಈಗ ಸರಿ ಇಲ್ಲ. ಬೇಗ್ ಮಂತ್ರಿಯಾದಾಗ ಸಿದ್ದರಾಮಯ್ಯ ಚೆನ್ನಾಗಿದ್ದರು. ಈಗ ಚೆನ್ನಾಗಿಲ್ಲ ಎಂದು ನಂಬುವುದು ಹೇಗೆ ಎಂದು ಜಮೀರ್ ಅಹಮದ್ ತಿಳಿಸಿದರು.