ಆ್ಯಪ್ನಗರ

ತಮಿಳ್ನಾಡಲ್ಲಿ ಪಕ್ಷದ ಕಾರ್ಯಕರ್ತರಿಗೆ ಕೋಟಿ ರೂ. ಬಹುಮಾನ, ವಿದೇಶ ಪ್ರವಾಸದ ಆಫರ್

ಪಕ್ಷದ ಕಾರ್ಯಕರ್ತರಿಗೆ ಭಾರಿ ಬಹುಮಾನದ ಆಮಿಷದ ಮೂಲಕ ತಮ್ಮ ಗೆಲುವಿಗೆ ಶ್ರಮ ವಹಿಸಲು ಉತ್ತೇಜನ ನೀಡುತ್ತಿರುವ ಟ್ರೆಂಡ್‌ ತಮಿಳುನಾಡಿನಲ್ಲಿ ಹೆಚ್ಚಾಗಿದೆ.

Vijaya Karnataka Web 31 Mar 2019, 3:12 pm
ಚೆನ್ನೈ: ರಾಷ್ಟ್ರರಾಜಕಾರಣದಲ್ಲಿ ತಮಿಳುನಾಡಿನ ರಾಜಕೀಯ ಜಿದ್ದಾಜಿದ್ದಿ ಹಲವು ವಿಶೇಷತೆಗಳಿಗೆ ಕಾರಣವಾಗುತ್ತದೆ. ತಮ್ಮನ್ನು ಗೆಲ್ಲಿಸುವ ಕಾರ್ಯಕರ್ತರಿಗೆ ವಿಶೇಷ ಬಹುಮಾನಗಳನ್ನು ಘೋಷಿಸುವ ಮೂಲಕ ಸದ್ದು ಮಾಡುತ್ತಿದ್ದಾರೆ.
Vijaya Karnataka Web Money


ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಚಿನ್ನದ ಚೈನುಗಳು, ಉಂಗುರಗಳು ಮತ್ತು ಮೋಟಾರ್‌ ಬೈಕ್‌, ವಿದೇಶಿ ಪ್ರವಾಸ ಹೀಗೆ ಅನೇಕ ಆಫರ್‌ಗಳನ್ನು ರಾಜಕೀಯ ಮುಖಂಡರು ಹರಿಯಬಿಟ್ಟಿದ್ದಾರೆ. ತಮ್ಮನ್ನು ಗೆಲ್ಲಿಸಲು ಕಠಿಣ ಶ್ರಮ ವಹಿಸುವ ಕಾರ್ಯಕರ್ತರಿಗೆ ಭಾರಿ ಮೊತ್ತದ ಬಹುಮಾನಗಳನ್ನು ಘೋಷಿಸುವ ಮೂಲಕ ತಮ್ಮ ಪರ ಮತ್ತಷ್ಟು ಹುರುಪಿನಿಂದ ಕೆಲಸ ಮಾಡಿಸಲು ದಾರಿ ಕಂಡುಕೊಂಡಿದ್ದಾರೆ.

ಮಾಜಿ ಕೇಂದ್ರ ಸಚಿವ ಮತ್ತು ಡಿಎಂಕೆ ಅಭ್ಯರ್ಥಿ ಜಗತ್‌ರಕ್ಷಕನ್‌ 1 ಕೋಟಿ ರೂ. ಬಹುಮಾನ ಘೋಷಿಸುವ ಮೂಲಕ ಹುಬ್ಬೇರುವಂತೆ ಮಾಡಿದ್ದಾರೆ. ತಾವು ಪ್ರತಿನಿಧಿಸುತ್ತಿರುವ ಅರಕ್ಕೊಣಂ ಕ್ಷೇತ್ರದಲ್ಲಿ ಭಾರಿ ಬಹುಮತದಿಂದ ಗೆಲ್ಲಿಸುವಲ್ಲಿ ಕಠಿಣ ಶ್ರಮ ವಹಿಸುವ ಕಾರ್ಯಕರ್ತನಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ವೆಲ್ಲೂರಿನ ಎಐಎಡಿಎಂಕೆ ಅಭ್ಯರ್ಥಿ ಎಸಿ ಶಣ್ಮಗಮ್‌ ಪಕ್ಷದ ಕಾರ್ಯಕರ್ತರಿಗೆ 6 ಬುಲೆಟ್‌ಗಳು ಮತ್ತು ದೇಶ-ವಿದೇಶ ಪ್ರವಾಸದ ಆಫರ್‌ ನೀಡಿದ್ದಾರೆ. ವೆಲ್ಲೂರಿನ ಡಿಎಂಕೆ ಅಭ್ಯರ್ಥಿ ಕದಿರ್‌ ಆನಂದ್‌ ತಮ್ಮನ್ನು ಗೆಲ್ಲಿಸಲು ಕಠಿಣ ಶ್ರಮ ವಹಿಸುವ ಕಾರ್ಯಕರ್ತರಿಗೆ 50 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌