ಆ್ಯಪ್ನಗರ

ಲೋಕ ಸಮರ 2019 ಚಾಲನೆ: 91 ಕ್ಷೇತ್ರಗಳಲ್ಲಿ ಮತದಾನ; ಆಂಧ್ರದಲ್ಲಿ ಹಿಂಸಾಚಾರ

ದೇಶವನ್ನು ಆಳುವ ಮುಂದಿನ ಸರಕಾರವನ್ನು ನಿರ್ಧರಿಸುವ, 17ನೇ ಲೋಕಸಭಾ ಚುನಾವಣೆಯ ಮತದಾನದ ಮಹಾ ಹಬ್ಬಕ್ಕೆ ಇಂದು ಚಾಲನೆ ದೊರೆತಿದ್ದು, ಇಂದು (ಗುರುವಾರ) 18 ರಾಜ್ಯದ 91 ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ.

Vijaya Karnataka Web 11 Apr 2019, 2:41 pm
ಹೊಸದಿಲ್ಲಿ: ದೇಶವನ್ನು ಆಳುವ ಮುಂದಿನ ಸರಕಾರವನ್ನು ನಿರ್ಧರಿಸುವ, 17ನೇ ಲೋಕಸಭಾ ಚುನಾವಣೆಯ ಮತದಾನದ ಮಹಾ ಹಬ್ಬಕ್ಕೆ ಇಂದು ಚಾಲನೆ ದೊರೆತಿದ್ದು, ಇಂದು (ಗುರುವಾರ) 18 ರಾಜ್ಯದ 91 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಆಂಧ್ರಪ್ರದೇಶ, ಸಿಕ್ಕಿಂ, ಒಡಿಶಾಗಳಲ್ಲಿ ವಿಧಾನಸಭೆಗೂ ಮತದಾನ ನಡೆಯುತ್ತಿದ್ದು, ಆಂಧ್ರದಲ್ಲಿ ಹಿಂಸಾಚಾರ ವರದಿಯಾಗಿದೆ.
Vijaya Karnataka Web voting


ಏಪ್ರಿಲ್‌ 11ರ ಮೊದಲ ಹಂತದ ಚುನಾವಣೆಯಲ್ಲಿ 18 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 91 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

3 ವಿಧಾನಸಭೆಗೂ ಇಂದೇ ವೋಟಿಂಗ್‌

ಆಂಧ್ರ ಪ್ರದೇಶ ವಿಧಾನಸಭೆಯ ಎಲ್ಲ 175, ಸಿಕ್ಕಿಂ ವಿಧಾನಸಭೆಯ ಎಲ್ಲ 32 ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 147 ಕ್ಷೇತ್ರಗಳ ಪೈಕಿ 28 ಸ್ಥಾನಗಳಿಗೂ ಇಂದು ಮತದಾನ ನಡೆಯುತ್ತಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಡಿಪತ್ರಿ ಎಂಬಲ್ಲಿ ತೆಲುಗು ದೇಶಂ ಮತ್ತು ವೈಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

ಏಪ್ರಿಲ್‌ 11ರಿಂದ ಆರಂಭಗೊಳ್ಳುವ ಏಳು ಹಂತಗಳ ಮತದಾನ ಪರ್ವ ಮೇ 19ರವರೆಗೆ ಮುಂದುವರಿಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.

ಲೋಕ ಕಣದಲ್ಲಿರುವ ಪ್ರಮುಖರು

ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ (ನಾಗ್ಪುರ), ವಿ.ಕೆ. ಸಿಂಗ್‌ (ಗಾಜಿಯಾಬಾದ್‌), ಕಿರಣ್‌ ರಿಜಿಜು (ಅರುಣಾಚಲ ಪಶ್ಚಿಮ), ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್‌ ಸಿಂಗ್‌ (ಮುಜಫ್ಫರ್‌ ನಗರ), ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ (ಜಮೂಯಿ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌