ಆ್ಯಪ್ನಗರ

ಗುಜರಾತ್‌ ಹತ್ಯಾಕಾಂಡದ ಸಂತ್ರಸ್ತ ಅಮಿತ್‌ ಶಾ ವಿರುದ್ಧ ಕಣಕ್ಕೆ

ಅಪ್ನಾ ದೇಶ್‌ ಪಕ್ಷ ದ ಅಭ್ಯರ್ಥಿ ಇಮ್ತಿಯಾಜ್‌ ಖಾನ್‌ ಪಠಾಣ್‌ (42) ಖೇಡಾ ಕ್ಷೇತ್ರದಿಂದ ಮತ್ತು ಅವರ ಸಹೋದರ ಫಿರೋಜ್‌ ಖಾನ್‌ ಪಠಾಣ್‌ (45) ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ.

Vijaya Karnataka 11 Apr 2019, 5:00 am
ಅಹಮದಾಬಾದ್‌: ಗುಜರಾತ್‌ನಲ್ಲಿ 2002ರಲ್ಲಿ ನಡೆದ ಗುಲ್ಬರ್ಗ ಸೊಸೈಟಿ ಹತ್ಯಾಕಾಂಡದಲ್ಲಿ ಬದುಕುಳಿದ ಇಬ್ಬರು ಸಹೋದರರು ಲೋಕಸಭಾ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ಈ ಪೈಕಿ ಒಬ್ಬರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸ್ಪರ್ಧಿಸಿರುವ ಗಾಂಧಿನಗರ ಕ್ಷೇತ್ರದಲ್ಲೇ ಎದುರಾಳಿಯಾಗಿ ಕಣಕ್ಕಿಳಿದಿದ್ದಾರೆ. ಅಪ್ನಾ ದೇಶ್‌ ಪಕ್ಷ ದ ಅಭ್ಯರ್ಥಿ ಇಮ್ತಿಯಾಜ್‌ ಖಾನ್‌ ಪಠಾಣ್‌ (42) ಖೇಡಾ ಕ್ಷೇತ್ರದಿಂದ ಮತ್ತು ಅವರ ಸಹೋದರ ಫಿರೋಜ್‌ ಖಾನ್‌ ಪಠಾಣ್‌ (45) ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ. 2002ರಲ್ಲಿ ನಡೆದ ಹತ್ಯಾಕಾಂಡದಲ್ಲಿ ಪಠಾಣ್‌ ಸಹೋದರರ ತಾಯಿ ಮತ್ತು ಅಜ್ಜಿ ಸೇರಿದಂತೆ ಕುಟುಂಬದ 10 ಸದಸ್ಯರು ಬಲಿಯಾಗಿದ್ದರು. 2002ರಲ್ಲಿ ಗೋಧ್ರಾ ಹತ್ಯಾಕಾಂಡದ ಬೆನ್ನಲ್ಲೇ ಅಹ್ಮದಾಬಾದ್‌ನ ಗುಲ್ಬರ್ಗ ಸೊಸೈಟಿಯ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿತ್ತು. ಮಾಜಿ ಸಂಸದ ಎಹ್ಸಾನ್‌ ಜಫ್ರಿ ಸೇರಿದಂತೆ 68 ಮಂದಿ ಈ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌