ಆ್ಯಪ್ನಗರ

22 ಬಾರಿ ಸೋತು 23ನೇ ಸಲ ಚುನಾವಣೆ ಎದುರಿಸುತ್ತಿರುವ ಚಾಯವಾಲಾ!

49 ವರ್ಷದ ಆನಂದ್ ಸಿಂಗ್ ಅವರು 1994 ರಿಂದ ಸತತ ಎಲ್ಲ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಠೇವಣಿ ಸಹ ಕಳೆದುಕೊಂಡಿದ್ದಾರೆ.

TIMESOFINDIA.COM 20 Apr 2019, 10:25 am
ಭೋಪಾಲ: ಮಧ್ಯ ಪ್ರದೇಶದ ಟೀ ಮಾರಾಟಗಾರನಾಗಿರುವ ಈ ಚುನಾವಣಾ ವೀರನನ್ನೊಮ್ಮೆ ಭೇಟಿಯಾಗಲೇಬೇಕು. ಹೌದು, 22 ಬಾರಿ ಚನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವ ಆನಂದ್ ಸಿಂಗ್ ಕುಶ್ವಾಹಾ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿಯೂ ಕಣಕ್ಕಿಳಿದಿದ್ದಾರೆ.
Vijaya Karnataka Web kushva


1994 ರಿಂದ ಸತತ ಎಲ್ಲ ಚುನಾವಣೆಯಲ್ಲಿ ಸ್ಪರ್ಧಿಸಿರುವ ಆನಂದ್ ಸಿಂಗ್, ಠೇವಣಿ ಸಹ ಕಳೆದುಕೊಂಡಿದ್ದಾರೆ. ಆದರೆ, ಸೋಲಿನಿಂದ ಎದೆಗುಂದದೆ ಮುನ್ನುಗುತ್ತಿದ್ದಾರೆ. 'ಪ್ರತಿಯೊಬ್ಬರ ಆಸಕ್ತಿಯೂ ಬೇರೇ ಬೇರೇ ಯಾಗಿರುತ್ತದೆ. ಹಾಗೆಯೇ ಚುನಾವಣೆಯಲ್ಲಿ ಸ್ಪರ್ಧಿಸುವುದೇ ನನ್ನ ಆಸಕ್ತಿ' ಎನ್ನುತ್ತಾರೆ ಸಿಂಗ್.

ಈ ಕುರಿತು ವಿಜಯ ಕರ್ನಾಟಕದ ಸೋದರ ಪತ್ರಿಕೆಯಾಗಿರುವ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿರುವ ಆನಂದ್ ಸಿಂಗ್ ಕುಶ್ವಾಹಾ, 'ಜವಾಬ್ದಾರಿಯುತ ನಾಗರಿಕನಾಗಿ ಇದು ನನ್ನ ಆದ್ಯ ಕರ್ತವ್ಯವಾಗಿದೆ. ಪುರಸಭೆ, ವಿಧಾನಸಭೆ ಮತ್ತು ಲೋಕಸಭೆ ಸೇರಿದಂತೆ ರಾಷ್ಟ್ರಪತಿ ಚುನಾವಣೆ ಎದುರಿಸುವ ಪ್ರಯತ್ನ ಮಾಡಿದ್ದೇನೆ' ಎಂದು ನಗುನಗುತ್ತಲೇ ಹೇಳಿಕೊಂಡಿದ್ದಾರೆ.

ಸತತ 22 ಬಾರಿ ಚುನಾವಣೆಯಲ್ಲಿ ಸೋತರು ಸಹ ನನ್ನ ಆತ್ಮವಿಶ್ವಾಸ ಕಡಿಮೆಯಾಗಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಆದರೆ, ನನಗೆ ಬಹುಜನ ಸಮಾಜ ಪಕ್ಷದ ಟಿಕೆಟ್ ಸಿಗುವ ವಿಶ್ವಾಸ ಇದೆ. ಈ ಬಾರಿ ನನ್ನ ಗೆಲವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆನಂದ್ ಸಿಂಗ್ ಕುಶ್ವಾಹಾ ಅವರು 25 ವರ್ಷಗಳ ಹಿಂದೆ ಗ್ವಾಲಿಯರ್ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌