ಆ್ಯಪ್ನಗರ

ಟಿಎಂಸಿ ಹಿಂಸಾಚಾರ: ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಕಾರು ಧ್ವಂಸ

ಅಸನ್‌ಸೋಲ್ ಕ್ಷೇತ್ರದ 199ನೇ ಮತಗಟ್ಟೆ ಬಳಿ ಕ್ಷಿಪ್ರ ಸ್ಪಂದನಾ ಪಡೆ (ಕ್ಯುಆರ್‌ಎಫ್‌) ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು. ಕೇಂದ್ರ ಪಡೆಗಳನ್ನು ಹೊರಗಿಟ್ಟು ಮತದಾನ ನಡೆಯಬೇಕೆಂದು ಟಿಎಂಸಿ ಕಾರ್ಯಕರ್ತರು ಪಟ್ಟು ಹಿಡಿದಾಗ ಘರ್ಷಣೆ ಆರಂಭವಾಯಿತು ಎಂದು ಎಎನ್‌ಐ ವರದಿ ತಿಳಿಸಿದೆ.

Vijaya Karnataka Web 29 Apr 2019, 12:05 pm
ಹೊಸದಿಲ್ಲಿ: ಪಶ್ಚಿಮ ಬಂಗಾಳದ ಅಸನ್‌ಸೋಲ್‌ ಕ್ಷೇತ್ರದ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಅವರ ಕಾರನ್ನು ಮತಗಟ್ಟೆಯೊಂದರ ಹೊರಗೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಧ್ವಂಸಗೊಳಿಸಿದರು.
Vijaya Karnataka Web BJP MPs car vandalise


ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಹಿಂಸಾಚಾರಕ್ಕೆ ತಿರುಗಿತು. ಭದ್ರತಾ ಪಡೆಗಳು ಲಾಠಿ ಚಾರ್ಜ್‌ ನಡೆಸಿ ಗುಂಪುಗಳನ್ನು ಚದುರಿಸಿದರು.

ಅಸನ್‌ಸೋಲ್ ಕ್ಷೇತ್ರದ 199ನೇ ಮತಗಟ್ಟೆ ಬಳಿ ಕ್ಷಿಪ್ರ ಸ್ಪಂದನಾ ಪಡೆ (ಕ್ಯುಆರ್‌ಎಫ್‌) ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆಯಿತು.

ಕೇಂದ್ರ ಪಡೆಗಳ ಅನುಪಸ್ಥಿತಿಯಲ್ಲೇ ಮತದಾನ ನಡೆಯಬೇಕೆಂದು ಟಿಎಂಸಿ ಕಾರ್ಯಕರ್ತರು ಪಟ್ಟು ಹಿಡಿದಾಗ ಘರ್ಷಣೆ ಆರಂಭವಾಯಿತು ಎಂದು ಎಎನ್‌ಐ ವರದಿ ತಿಳಿಸಿದೆ.

ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದ ವರದಿಯಾಗಿದೆ. ನಾಲ್ಕನೇ ಹಂತದ ಚುನಾವಣೆಗೆ ಶೇ 100ರಷ್ಟು ಕೇಂದ್ರೀಯ ಪಡೆಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

2014ರ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಅಸನ್‌ಸೋಲ್‌ ಕೂಡ ಒಂದು. ಟಿಎಂಸಿ ಅಭ್ಯರ್ಥಿ ಹಾಗೂ ನಟಿ ಮೂನ್ ಮೂನ್ ಸೇನ್ ಈ ಬಾರಿ ಹಾಲಿ ಸಂಸದ ಸುಪ್ರಿಯೋಗೆ ಎದುರಾಳಿಯಾಗಿದ್ದಾರೆ.

ರಾಜ್ಯದ 42 ಕ್ಷೇತ್ರಗಳ ಪೈಕಿ 8 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ 7 ಹಂತಗಳ ಚುನಾವಣೆ ನಡೆಯುತ್ತಿದ್ದು, ಕೊನೆಯ ಹಂತ ಮೇ 19ರಂದು ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌