ಆ್ಯಪ್ನಗರ

ಮಹಿಳೆಯ ಕೈಹಿಡಿದು ಬಲವಂತದಿಂದ ಕಾಂಗ್ರೆಸ್‌ಗೆ ಮತ ಹಾಕಿಸಿದ ಮತಗಟ್ಟೆ ಅಧಿಕಾರಿ: ಸ್ಮೃತಿ ಇರಾನಿ ದೂರು

ಬಿಜೆಪಿಗೆ ಮತ ಹಾಕಲು ಬಯಸಿದ್ದ ವೃದ್ಧೆಯೊಬ್ಬರಿಂದ ಬಲವಂತವಾಗಿ ಕಾಂಗ್ರೆಸ್ ಗುರುತಿನ ಗುಂಡಿ ಒತ್ತಿಸಲಾಗಿದೆ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಗೌರಿಗಂಜ್‌ನಲ್ಲಿ ಈ ಘಟನೆ ನಡೆದಿದೆ. ಇದು ಅಮೇಠಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಬಲ ಎದುರಾಳಿಯಾಗಿ ಬಿಜೆಪಿಯ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.

Vijaya Karnataka Web 6 May 2019, 12:55 pm
ಹೊಸದಿಲ್ಲಿ: ಅಮೇಠಿಯ ಮತಗಟ್ಟೆಯೊಂದರಲ್ಲಿ ಅಧಿಕಾರಿಗಳೇ ಕಾಂಗ್ರೆಸ್‌ಗೆ ಮತ ಹಾಕುವಂತೆ ಮತದಾರರನ್ನು ಬಲವಂತ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪಿಸಿದ್ದಾರೆ.
Vijaya Karnataka Web Congress Booth capturing


ಬಿಜೆಪಿಗೆ ಮತ ಹಾಕಲು ಬಯಸಿದ್ದ ವೃದ್ಧೆಯೊಬ್ಬರಿಂದ ಬಲವಂತವಾಗಿ ಕಾಂಗ್ರೆಸ್ ಗುರುತಿನ ಗುಂಡಿ ಒತ್ತಿಸಲಾಗಿದೆ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.

ಉತ್ತರ ಪ್ರದೇಶದ ಗೌರಿಗಂಜ್‌ನಲ್ಲಿ ಈ ಘಟನೆ ನಡೆದಿದೆ. ಇದು ಅಮೇಠಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಬಲ ಎದುರಾಳಿಯಾಗಿ ಬಿಜೆಪಿಯ ಸ್ಮೃತಿ ಇರಾನಿ ಸ್ಪರ್ಧಿಸುತ್ತಿದ್ದಾರೆ.

'ನಾನು ಕಮಲದ ಚಿಹ್ನೆಗೆ ಮತ ಹಾಕಲು ಬಯಸಿದ್ದೆ. ಆದರೆ ನನ್ನ ಕೈ ಹಿಡಿದು ಕಾಂಗ್ರೆಸ್‌ ಚಿಹ್ನೆಗೆ ಬಲವಂತದಿಂದ ಮತ ಹಾಕಿಸಲಾಯಿತು' ಎಂದು ಮಹಿಳೆಯೊಬ್ಬರು ಹೇಳುತ್ತಿರುವ ವೀಡಿಯೋವನ್ನು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತಗಟ್ಟೆ ವಶೀಕರಣ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.


ಈ ಮೊದಲು, ರಾಹುಲ್ ಗಾಂಧಿ ಮತದಾನ ದಿನವೂ ಅಮೇಠಿ ಕ್ಷೇತ್ರದಿಂದ ದೂರವುಳಿದಿದ್ದಾರೆ. ಈ ಕ್ಷೇತ್ರದ ಮತದಾರರ ಬಗ್ಗೆ ಅವರಿಗೆ ಯಾವುದೇ ಕಾಳಜಿಯಿಲ್ಲ ಎಂದು ಸ್ಮೃತಿ ಟೀಕಿಸಿದ್ದರು.

ಅಮೇಠಿ ಆಸ್ಪತ್ರೆಯೊಂದರಲ್ಲಿ ಭಾನುವಾರ ವ್ಯಕ್ತಿಯೊಬ್ಬನ ಸಾವಿಗೆ ರಾಹುಲ್ ಗಾಂಧಿಯೇ ಕಾರಣವೆಂದು ಸ್ಮೃತಿ ದೂರಿದ್ದರು. ಸ್ವತಃ ರಾಹುಲ್ ಅವರೇ ಟ್ರಸ್ಟಿಯಾಗಿರುವ ಆ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಸರಕಾರ ಒದಗಿಸಿದ ಆಯುಷ್ಮಾನ್ ಭಾರತ್ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಬಯಸಿದ್ದರು. ಆದರೆ ರಾಜಕೀಯ ದ್ವೇಷದಿಂದ ಆ ಕಾರ್ಡ್‌ಗೆ ಮಾನ್ಯತೆ ನೀಡದೆ ವ್ಯಕ್ತಿಗೆ ಚಿಕಿತ್ಸೆ ನಿರಾಕರಿಸಲಾಗಿತ್ತು. ಸಕಾಲದಲ್ಲಿ ಚಿಕಿತ್ಸೆ ಸಿಗದೆ ಆ ವ್ಯಕ್ತಿ ಮೃತಪಟ್ಟಿದ್ದರು ಎಂದು ಸ್ಮೃತಿ ಇರಾನಿ ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ