ಆ್ಯಪ್ನಗರ

ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಗೀತೆ ‘ಅಬ್‌ ಹೋಗಾ ನ್ಯಾಯ್‌’ ಬಿಡುಗಡೆ

ಈ ಪ್ರಚಾರ ಗೀತೆಯು ಕಡುಬಡವರಿಗೆ ವಾರ್ಷಿಕ 72,000 ರೂ. ನೀಡುವ ಪಕ್ಷದ ಮಹತ್ವಾಕಾಂಕ್ಷಿ 'ನ್ಯಾಯ್‌' ಯೋಜನೆಯ ಮಹತ್ವ ಸಾರುವುದರ ಜತೆಗೆ ಎನ್‌ಡಿಎ ಅವಧಿಯಲ್ಲಿ ದೇಶ ಅನುಭವಿಸಿದ ಹಿನ್ನಡೆಯನ್ನು ಬಿಂಬಿಸುತ್ತದೆ.

Vijaya Karnataka 8 Apr 2019, 5:00 am
ಹೊಸದಿಲ್ಲಿ: ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್‌ ತನ್ನ ಘೋಷವಾಕ್ಯ ಹಾಗೂ ಪ್ರಚಾರ ಗೀತೆ 'ಅಬ್‌ ಹೋಗಾ ನ್ಯಾಯ್‌' ಬಿಡುಗಡೆಗೊಳಿಸಿದೆ. ಈ ಪ್ರಚಾರ ಗೀತೆಯು ಕಡುಬಡವರಿಗೆ ವಾರ್ಷಿಕ 72,000 ರೂ. ನೀಡುವ ಪಕ್ಷದ ಮಹತ್ವಾಕಾಂಕ್ಷಿ 'ನ್ಯಾಯ್‌' ಯೋಜನೆಯ ಮಹತ್ವ ಸಾರುವುದರ ಜತೆಗೆ ಎನ್‌ಡಿಎ ಅವಧಿಯಲ್ಲಿ ದೇಶ ಅನುಭವಿಸಿದ ಹಿನ್ನಡೆಯನ್ನು ಬಿಂಬಿಸುತ್ತದೆ.
Vijaya Karnataka Web congress


''ಬಿಜೆಪಿ ನೇತೃತ್ವದ ಸರಕಾರವು ಕಳೆದ ಐದು ವರ್ಷಗಳಲ್ಲಿ ಹೇಳಿಕೊಳ್ಳುವ ಯಾವುದೇ ಪ್ರಗತಿ ಸಾಧಿಸಿಲ್ಲ. ಇದರಿಂದ ಜನತೆ 'ಅನ್ಯಾಯ'ಕ್ಕೆ ಒಳಗಾದರು. ಅದನ್ನು ಸರಿಪಡಿಸುವುದು ನಮ್ಮ 'ನ್ಯಾಯ್‌' ಯೋಜನೆಯ ಕನಸು. ಇದರ ನಿಜವಾದ ಮಹತ್ವವನ್ನು ಸಾರುವುದೇ 'ಅಬ್‌ ಹೋಗಾ ನ್ಯಾಯ್‌' ಗೀತೆಯ ಒಳ ತಿರುಳು,'' ಎಂದು ಪ್ರಚಾರ ಗೀತೆ ಬಿಡುಗಡೆ ಮಾಡಿದ ಕಾಂಗ್ರೆಸ್‌ ಹಿರಿಯ ಮುಖಂಡ ಆನಂದ್‌ ಶರ್ಮಾ ಹೇಳಿದರು.

ಬಾಲಿವುಡ್‌ ಗೀತ ರಚನೆಕಾರ ಜಾವೇದ್‌ ಅಖ್ತರ್‌ ಅವರು ಕಾಂಗ್ರೆಸ್‌ನ ಚುನಾವಣಾ ಪ್ರಚಾರದ ಗೀತೆ ರಚನೆ ಮಾಡಿದ್ದು, ನಿಖಿಲ್‌ ಆಡ್ವಾಣಿ ವಿಡಿಯೊ ಚಿತ್ರೀಕರಣದ ನಿರ್ದೇಶನ ಮಾಡಿದ್ದಾರೆ. ಕಾಂಗ್ರೆಸ್‌ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನೂ ಪ್ರಚಾರ ಗೀತೆ ಒಳಗೊಂಡಿದೆ. ಈ ಬಾರಿ ಚುನಾವಣೆಯ ಧ್ಯೇಯವಾಕ್ಯ 'ಕಾಂಗ್ರೆಸ್‌ ನಿಭಾಯಿಸುತ್ತದೆ' ಎನ್ನುವುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ