ಆ್ಯಪ್ನಗರ

ರಾಹುಲ್ ಗಾಂಧಿ ಅದೃಷ್ಟ ಪರೀಕ್ಷೆ: ಎಲ್ಲರ ಚಿತ್ತ ವಯನಾಡಿನತ್ತ

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಅಮೇಠಿ ಜತೆಗೆ ಕೇರಳದ ವಯನಾಡು ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದಾರೆ.

Times Now 23 Apr 2019, 12:54 pm
ವಯನಾಡು: ದೇಶದಲ್ಲಿ ಮೂರನೇ ಹಂತದ ಲೋಕ ಸಭಾ ಚುನಾವಣೆ ನಡೆಯುತ್ತಿದ್ದು, ದೇಶದ ಗಮನ ಕೇರಳದ ಕಡೆ ನೆಟ್ಟಿದೆ. ರಾಹುಲ್ ಗಾಂಧಿ ಕಣಕ್ಕಿಳಿಯುವುದರ ಮೂಲಕ ದೇಶದ ಪ್ರತಿಷ್ಠಿತ ಲೋಕ ಸಭಾ ಕ್ಷೇತ್ರಗಳಲ್ಲಿ ಒಂದೆನಿಸಿರುವ ಕೇರಳದ ವಯನಾಡಿನಲ್ಲಿ ಕೂಡ ಇದು ಲೋಕ ಸಭಾ ಚುನಾವಣೆ ನಡೆಯುತ್ತಿದ್ದು ಮುಂಜಾನೆ 11 ಗಂಟೆಯವರೆಗೆ 21.47 ಪ್ರತಿಶತ ಮತದಾನವಾಗಿದೆ.
Vijaya Karnataka Web Rahul 1200


ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಉತ್ತರ ಪ್ರದೇಶದ ಅಮೇಠಿ ಜತೆಗೆ ಕೇರಳದ ವಯನಾಡು ಕ್ಷೇತ್ರದಿಂದಲೂ ಕಣಕ್ಕಿಳಿದಿದ್ದಾರೆ. ಎಲ್‌ಡಿಎಫ್ ( ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್) ಪಕ್ಷದ ಪಿ ಪಿ ಸುನೀರ್ ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಈ ಪ್ರದೇಶದಲ್ಲಿ ಬಿಜೆಪಿ ಪ್ರಭಾವ ಬಹಳ ಕಡಿಮೆ ಇದೆ.

ಕೇರಳದ ಜಿಲ್ಲೆಗಳಲ್ಲಿ ಅತಿ ಹಿಂದುಳಿದ ಜಿಲ್ಲೆ ಇದು. ವಯನಾಡ್ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು, ಕೊಯಿಕ್ಕೋಡ್ ಜಿಲ್ಲೆಯ 1 ಲೋಕ ಸಭಾ ಕ್ಷೇತ್ರ ಮತ್ತು ಮಲಪ್ಪುರ ಜಿಲ್ಲೆಯ 2 ವಿಧಾನ ಸಭಾ ಕ್ಷೇತ್ರಗಳನ್ನಿದು ಒಳಗೊಂಡಿದೆ.

2009 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಐ.ಶಾನವಾಸ್ 1.5 ಲಕ್ಷ ಮತಗಳಿಂದ ಈ ಕ್ಷೇತ್ರದಿಂದ ಗೆದ್ದಿದ್ದರು. 2014 ರ ಸಂಸತ್ತಿನ ಚುನಾವಣೆಯಲ್ಲಿ, ಶಾನವಾಸ್ ಮರಳಿ ವಿಜಯ ಸಾಧಿಸಿದ್ದು, ಗೆಲುವಿನ ಅಂತರ 21,000 ಕ್ಕೆ ಇಳಿದಿತ್ತು.

ಕೇರಳದಲ್ಲಿ ಮುಂಜಾನೆ 11ರವರೆಗೆ 14.27 ಪ್ರತಿಶತ ಮತದಾನವಾಗಿದ್ದರೆ, ವಯನಾಡಿನಲ್ಲಿ 21.47 ಪ್ರತಿಶತ ಜನರು ಮತದಾನ ಮಾಡಿದ್ದಾರೆ.

ರಾಜ್ಯದಲ್ಲಿ ಒಟ್ಟು 20 ಲೋಕ ಸಭಾ ಕ್ಷೇತ್ರಗಳಿದ್ದು , ಒಂದೇ ಹಂತದಲ್ಲಿ ಇಂದು ಮತದಾನವಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌