ಆ್ಯಪ್ನಗರ

ಆಪ್ ಜತೆ 'ಅಪ್ಪುಗೆ' ನಿರ್ಧಾರ ರಾಹುಲ್‌ಗೆ ಬಿಟ್ಟ ದಿಲ್ಲಿ ಕಾಂಗ್ರೆಸ್

ಸಭೆಯಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಆದರೆ ಅಂತಿಮ ನಿರ್ಧಾರವನ್ನು ರಾಹುಲ್ ಗಾಂಧಿ ಅವರಿಗೆ ಬಿಡಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ತಿಳಿಸಿದರು. ದಿಲ್ಲಿ ಕಾಂಗ್ರೆಸ್‌ ಹಾಲಿ ಅಧ್ಯಕ್ಷೆ ಶೀಲಾ ದೀಕ್ಷಿತ್ ಮತ್ತು ಇತರ ಮೂವರು ಕಾರ್ಯಾಧ್ಯಕ್ಷರಾದ ದೇವೇಂದ್ರ ಯಾದವ್, ರಾಜೇಶ್ ಲಿಲೋಥಿಯಾ ಮತ್ತು ಹಾರೂನ್ ಯೂಸುಫ್‌ ಅವರು ಆಪ್ ಜತೆ ಮೈತ್ರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

Vijaya Karnataka Web 25 Mar 2019, 6:07 pm
ಹೊಸದಿಲ್ಲಿ: ದಿಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಶೀಲಾ ದೀಕ್ಷಿತ್ ಮತ್ತು ಇತರ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಆಪ್‌ ಜತೆ ಮೈತ್ರಿ ಸಾಧ್ಯತೆಯನ್ನು ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರ ಜತೆ ಚರ್ಚಿಸಿದರು.

ಸಭೆಯಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳು ವ್ಯಕ್ತವಾದವು. ಆದರೆ ಅಂತಿಮ ನಿರ್ಧಾರವನ್ನು ರಾಹುಲ್ ಗಾಂಧಿ ಅವರಿಗೆ ಬಿಡಲಾಯಿತು ಎಂದು ಸಭೆಯಲ್ಲಿ ಭಾಗವಹಿಸಿದವರೊಬ್ಬರು ತಿಳಿಸಿದರು.

ದಿಲ್ಲಿ ಕಾಂಗ್ರೆಸ್‌ನ ನಾಲ್ವರು ಮಾಜಿ ಅಧ್ಯಕ್ಷರಾದ ಅಜಯ್ ಮಾಕೆನ್, ಸುಭಾಷ್ ಚೋಪ್ರಾ ತಾಜ್‌ದರ್ ಬಾಬರ್ ಮತ್ತು ಅರವಿಂದರ್ ಸಿಂಗ್ ಲವ್ಲಿ ಆಮ್‌ ಆದ್ಮಿ ಪಕ್ಷದ ಜತೆ ಮೈತ್ರಿಗೆ ಪೂರಕ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ದಿಲ್ಲಿ ಕಾಂಗ್ರೆಸ್‌ ಹಾಲಿ ಅಧ್ಯಕ್ಷೆ ಶೀಲಾ ದೀಕ್ಷಿತ್ ಮತ್ತು ಇತರ ಮೂವರು ಕಾರ್ಯಾಧ್ಯಕ್ಷರಾದ ದೇವೇಂದ್ರ ಯಾದವ್, ರಾಜೇಶ್ ಲಿಲೋಥಿಯಾ ಮತ್ತು ಹಾರೂನ್ ಯೂಸುಫ್‌ ಅವರು ಆಪ್ ಜತೆ ಮೈತ್ರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ