ಆ್ಯಪ್ನಗರ

ಉತ್ತಮ ಆಡಳಿತ ನೀಡುವ ಭರವಸೆ ನೀಡಿದ ಜಗನ್ಮೋಹನ್ ರೆಡ್ಡಿ

6 ತಿಂಗಳಿಂದ 1 ವರ್ಷದಲ್ಲಿ ನಾನು ನಾನು ಉತ್ತಮ ಸರಕಾರವನ್ನು ನೀಡಿ ಸಂಪೂರ್ಣ ದೇಶವೇ ನಮ್ಮ ರಾಜ್ಯದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತೇನೆ. 3,600 ಕಿಮೀಗೂ ಹೆಚ್ಚು ದೂರ ನಡೆದಿರುವ ನಾನು ಜನರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಕೇಳಿದ್ದೇನೆ. ನಿಮ್ಮ ಜತೆ ನಾನಿದ್ದೇನೆ ಎಂದು ಭರವಸೆ ನೀಡಿದ್ದೆ. ನನ್ನನ್ನು ನಂಬಿ ಅಧಿಕಾರ ನೀಡಿದ್ದಾರೆ. ಮತ್ತೀಗ ಆ ಮಾತನ್ನು ಉಳಿಸಿಕೊಳ್ಳುತ್ತೇನೆ. ನನ್ನ ತಂದೆಯಂತೆ ಉತ್ತಮ ಆಡಳಿತವನ್ನು ನೀಡುತ್ತೇನೆ ಎಂದು ಹೇಳಿದರು.

TIMESOFINDIA.COM 24 May 2019, 12:17 pm
ವಿಜಯವಾಡ: ನೆರೆಯ ಆಂಧ್ರದಲ್ಲಿ ಪ್ರಚಂಡ ಗೆಲುವು ಸಾಧಿಸಿರುವ ವೆಎಸ್ಸಾರ್ ಕಾಂಗ್ರೆಸ್ ನಾಯಕ ವೈ ಎಸ್ ಜಗನ್ಮೋಹನ ರೆಡ್ಡಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದಾರೆ.
Vijaya Karnataka Web Jagan Reddy


ಜನರು ನನಗೆ ಆಶೀರ್ವದಿಸಿದ್ದಾರೆ. ದೇವರು ನನ್ನ ಮೇಲೆ ಕರುಣೆ ತೋರಿದ್ದಾನೆ. ನನಗೆ ಈ ಅವಕಾಶ ನೀಡಿರುವ 5 ಕೋಟಿ ಜನರಿಗೂ ನಾನು ಕೃತಜ್ಞನಾಗಿದ್ದೇನೆ ಎಂದು ಜಗನ್ ಹೇಳಿದ್ದಾರೆ.

ಮಾಜಿಕ್ ಸಂಖ್ಯೆ 88 ದಾಟುತ್ತಿದ್ದಂತೆ ಹಿರಿಯ ನಾಯಕರಾದ ವಿಜಯ್ ಸಾಯಿ ರೆಡ್ಡಿ ಮತ್ತು ವೈ ಯು ಸುಬ್ಬಾರೆಡ್ಡಿ ಜತೆಗೆ ಪಕ್ಷದ ಕಚೇರಿಯ ಮಾಧ್ಯಮ ಕೇಂದ್ರಕ್ಕೆ ಧಾವಿಸಿದ ರೆಡ್ಡಿ ಅವರನ್ನು ಪಕ್ಷದ ಕಾರ್ಯಕರ್ತರು ಜಯಕಾರ ಹಾಕಿ ಸ್ವಾಗತಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ 6 ತಿಂಗಳಿಂದ 1 ವರ್ಷದಲ್ಲಿ ನಾನು ನಾನು ಉತ್ತಮ ಸರಕಾರವನ್ನು ನೀಡಿ ಸಂಪೂರ್ಣ ದೇಶವೇ ನಮ್ಮ ರಾಜ್ಯದ ಕಡೆಗೆ ತಿರುಗಿ ನೋಡುವಂತೆ ಮಾಡುತ್ತೇನೆ. 3,600 ಕಿಮೀಗೂ ಹೆಚ್ಚು ದೂರ ನಡೆದಿರುವ ನಾನು ಜನರ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಕೇಳಿದ್ದೇನೆ. ನಿಮ್ಮ ಜತೆ ನಾನಿದ್ದೇನೆ ಎಂದು ಭರವಸೆ ನೀಡಿದ್ದೆ. ನನ್ನನ್ನು ನಂಬಿ ಅಧಿಕಾರ ನೀಡಿದ್ದಾರೆ. ಮತ್ತೀಗ ಆ ಮಾತನ್ನು ಉಳಿಸಿಕೊಳ್ಳುತ್ತೇನೆ. ನನ್ನ ತಂದೆಯಂತೆ ಉತ್ತಮ ಆಡಳಿತವನ್ನು ನೀಡುತ್ತೇನೆ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ರೆಡ್ಡಿ ಮ್ಯಾಜಿಕ್‌ ನಡೆದಿದೆ. ಜಗನ್‌ಮೋಹನ್‌ ರೆಡ್ಡಿ ವರ್ಷದಿಂದ ನಡೆಸಿದ ಪಾದಯಾತ್ರೆ ಹಾಗೂ ಜನಸಂಪರ್ಕ ಸಭೆಗಳು ಫಲ ನೀಡಿವೆ. ಅಗತ್ಯ ಬಿದ್ದರೆ ಜಗನ್‌ ಬಿಜೆಪಿಗೆ ಬೆಂಬಲ ನೀಡುತ್ತಾರೆ ಎನ್ನುವ ರಾಜಕೀಯ ಊಹಾಪೋಹವೂ ಜಗನ್‌ಗೆ ಗೆಲುವು ತಂದಿತ್ತಿದೆ. 'ರಾಷ್ಟ್ರ ನಾಯಕ'ನಾಗಬೇಕೆಂಬ ಚಂದ್ರಬಾಬು ನಾಯ್ಡು ಅವರ ಹೆಬ್ಬಯಕೆ ಟಿಡಿಪಿಗೆ ಸೋಲು ತಂದಿತ್ತಿದೆ. ತೆಲಂಗಾಣದಲ್ಲಿ ಟಿಆರ್‌ಎಸ್‌ ವರಿಷ್ಠ, ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ತಮ್ಮ ಎಡಬಿಡಂಗಿ ನಿಲುವಿನಿಂದ ಕೈ ಸುಟ್ಟುಕೊಂಡಿದ್ದಾರೆ. ಮೋದಿ ಆಲಿಂಗನ ಮಾಡಿಕೊಳ್ಳುತ್ತಲೇ ತೃತೀಯ ರಂಗ ರಚನೆಗೆ ಯತ್ನಿಸಿದ್ದು ಟಿಆರ್‌ಎಸ್‌ಗೆ ಹಿನ್ನಡೆ ಉಂಟುಮಾಡಿದೆ.

175 ವಿಧಾನ ಸಭಾ ಸದಸ್ಯ ಬಲಾಬಲದ ಆಂಧ್ರದಲ್ಲಿ ರೆಡ್ಡಿ ಪಕ್ಷ ಬರೋಬ್ಬರಿ 150 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಮೇ 30ರಂದು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ