ಆ್ಯಪ್ನಗರ

ಮೊಮ್ಮಕ್ಕಳ ಗೆಲುವಿಗೆ ಪ್ರಯತ್ನಿಸಿದ್ದಷ್ಟೇ ಮಧು ಬಂಗಾರಪ್ಪ ಗೆಲುವಿಗೂ: ದೇವೇಗೌಡ

ಸಚಿವ ಡಿ.ಕೆ.ಶಿವಕುಮಾರ್‌ ಆದಿಯಾಗಿ ಮೈತ್ರಿ ಸರಕಾರದ ಪ್ರಮುಖರೆಲ್ಲರೂ ಒಗ್ಗೂಡಿ ಮಧು ಪರ ಪ್ರಚಾರ ಮಾಡಲಿದ್ದಾರೆ. ಕಾಗೋಡು ತಿಪ್ಪಮ್ಮ ಹಾಗೂ ಕಾಂಗ್ರೆಸ್‌ನವರ ಆಶೀರ್ವಾದದಿಂದ ಗೆಲ್ಲಿಸಲು ಪ್ರಯತ್ನಿಸುತ್ತೇವೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿಲ್ಲ. ದೇಶಪಾಂಡೆ ಅವರು ಬೆಳಗ್ಗೆ ಮಾತನಾಡಿದ್ದಾರೆ ಎಂದರು.

Vijaya Karnataka 18 Mar 2019, 7:51 am
ಶಿವಮೊಗ್ಗ: ಹಾಸನ, ಮಂಡ್ಯದಲ್ಲಿ ಮೊಮ್ಮಕಳ್ಳನ್ನು ಗೆಲ್ಲಿಸುವುದಕ್ಕೆ ಹೇಗೆ ಪ್ರಯತ್ನಿಸುತ್ತಿದ್ದೇವೆಯೋ ಅದೇ ರೀತಿಯಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮೈತ್ರಿಕೂಟ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಗೆಲುವಿಗೂ ಶ್ರಮಿಸುವುದಾಗಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಿಳಿಸಿದರು.
Vijaya Karnataka Web DeveGowda


ನಗರದ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿಕೂಟದ ಅಭ್ಯರ್ಥಿಯಾಗಿ ಮಧು ಕಣಕ್ಕಿಳಿಯುತ್ತಿದ್ದಾರೆ. ಅವರ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇವೆ ಎಂದರು.

ಸಚಿವ ಡಿ.ಕೆ.ಶಿವಕುಮಾರ್‌ ಆದಿಯಾಗಿ ಮೈತ್ರಿ ಸರಕಾರದ ಪ್ರಮುಖರೆಲ್ಲರೂ ಒಗ್ಗೂಡಿ ಮಧು ಪರ ಪ್ರಚಾರ ಮಾಡಲಿದ್ದಾರೆ. ಕಾಗೋಡು ತಿಪ್ಪಮ್ಮ ಹಾಗೂ ಕಾಂಗ್ರೆಸ್‌ನವರ ಆಶೀರ್ವಾದದಿಂದ ಗೆಲ್ಲಿಸಲು ಪ್ರಯತ್ನಿಸುತ್ತೇವೆ. ಉತ್ತರ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿಲ್ಲ. ದೇಶಪಾಂಡೆ ಅವರು ಬೆಳಗ್ಗೆ ಮಾತನಾಡಿದ್ದಾರೆ ಎಂದರು.

ಗೊಂದಲ ಮೀಡಿಯಾ ಸೃಷ್ಟಿ

ಹಾಸನ ಮತ್ತು ಮಂಡ್ಯದಲ್ಲಿ 'ಮೀಡಿಯಾ ಸೃಷ್ಟಿಸಿದ' ಗೊಂದಲವಷ್ಟೆ. ವಾಸ್ತವದಲ್ಲಿ ಅಂತಹದ್ದೇನೂ ಇಲ್ಲ. ನಿಮಗ್ಯಾಕೆ ಆ ವಿಷಯದಲ್ಲಿ ಅಷ್ಟೊಂದು ಆಸಕ್ತಿ ಎಂದು ಪ್ರಶ್ನಿಸಿದರು.

ಒಟ್ಟಾಗಿ ಪ್ರಚಾರ ಮಾಡೋಣ

ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗ ನಗರಕ್ಕೆ ಭಾನುವಾರ ಆಗಮಿಸಿದ್ದ ದೇವೇಗೌಡರು, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರೊಂದಿಗೆ ಚರ್ಚೆ ನಡೆಸಿದರು. ಜಿಲ್ಲಾಮಟ್ಟದ ಸಮನ್ವಯ ಸಮಿತಿ ಮಾಡುವ ಮೂಲಕ ಪ್ರಚಾರ ನಡೆಸಬೇಕೆಂದು ನಿರ್ಧರಿಸಲಾಯಿತು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ರಾಹುಲ್‌ ಗಾಂಧಿ ಅವರನ್ನು ಪ್ರಧಾನಮಂತ್ರಿಯಾಗಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡಬೇಕೆಂಬ ಕುರಿತೂ ಚರ್ಚೆ ನಡೆಸಲಾಯಿತು. ಮುಖಂಡರಾದ ಕೆ.ಬಿ.ಪ್ರಸನ್ನಕುಮಾರ್‌, ಆರ್‌.ಪ್ರಸನ್ನಕುಮಾರ್‌, ಸುಂದರೇಶ್‌, ತೀ.ನ.ಶೀನಿವಾಸ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌