ಲಖನೌ: ಉತ್ತರ ಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಪ್ರದಾ ಒಳಉಡುಪಿನ ಕುರಿತು ಸಮಾಜವಾದಿ ಪಾರ್ಟಿ ಅಭ್ಯರ್ಥಿ ಅಜಂ ಖಾನ್ ನೀಡಿರುವ ಹೇಳಿಕೆಗೆ ಮುಸ್ಲಿಂ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ. ''ಈ ರೀತಿಯ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ವೈಯಕ್ತಿಕ ವಿಚಾರವಾಗಿ ಹೇಳಿಕೆ ನೀಡುವುದು ಸರಿಯಲ್ಲ. ಅಲ್ಲದೇ ಖಾನ್ ಅವರು ಯಾವುದೇ ಹೇಳಿಕೆಯನ್ನಾದರೂ ಎಚ್ಚರಿಕೆಯಿಂದ ನೀಡಬೇಕು,'' ಎಂದು ಬಹುತೇಕ ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಒಂಬತ್ತು ಬಾರಿ ಶಾಸಕರಾಗಿರುವ ಖಾನ್ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಹೀಗಾಗಿ ಮತದಾನದ ವಿಚಾರಕ್ಕೆ ಬಂದರೆ ತಾವು ಖಾನ್ ಅವರಿಗೇ ಮತ ಹಾಕುವುದಾಗಿ ಹೇಳಿದ್ದಾರೆ. ರಾಂಪುರದಲ್ಲಿ ಏ.23ರಂದು ಮತದಾನ ನಡೆಯಲಿದೆ.
ಜಯಪ್ರದಾ ಕುರಿತ ಖಾನ್ ಹೇಳಿಕೆಗೆ ಮುಸ್ಲಿಂ ಮಹಿಳೆಯರ ಆಕ್ಷೇಪ
ಒಂಬತ್ತು ಬಾರಿ ಶಾಸಕರಾಗಿರುವ ಖಾನ್ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಹೀಗಾಗಿ ಮತದಾನದ ವಿಚಾರಕ್ಕೆ ಬಂದರೆ ತಾವು ಖಾನ್ ಅವರಿಗೇ ಮತ ಹಾಕುವುದಾಗಿ ಹೇಳಿದ್ದಾರೆ. ರಾಂಪುರದಲ್ಲಿ ಏ.23ರಂದು ಮತದಾನ ನಡೆಯಲಿದೆ.
Vijaya Karnataka 20 Apr 2019, 5:00 am