ಆ್ಯಪ್ನಗರ

ಎನ್‌ಕೌಂಟರ್‌ನಲ್ಲಿ ದೀದಿ ಬಿಜೆಪಿ ಅಭ್ಯರ್ಥಿಯನ್ನು ಹತ್ಯೆ ಮಾಡಿಸಬಲ್ಲರು: ಕೈಲಾಶ್‌ ವಿಜಯ್‌ವರ್ಗಿಯಾ

ಟ್ವಿಟ್ಟರ್‌ನಲ್ಲಿ ಮಮತಾ ವಿರುದ್ಧ ಹರಿಹಾಯ್ದ ಬಂಗಾಳದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಕೈಲಾಶ್‌, ಈಗಾಗಲೇ ಬೈರಕಪುರ ವ್ಯಾಪ್ತಿಯ ಪೊಲೀಸ್‌ ಆಯುಕ್ತರಿಗೆ ಅರ್ಜುನ್‌ ಸಿಂಗ್‌ ಅವರನ್ನು ಬಂಧಿಸುವಂತೆ ಮಮತಾ ಸೂಚನೆ ಕೊಟ್ಟಿದ್ದಾರೆ. ಬಳಿಕ ಎನ್‌ಕೌಂಟರ್‌ ನಡೆದರೂ ಅಚ್ಚರಿಯಿಲ್ಲ ಎಂದಿದ್ದಾರೆ.

Vijaya Karnataka 22 May 2019, 5:30 am
ಕೋಲ್ಕೊತಾ : ಬೈರಕಪುರದಲ್ಲಿ ಬಿಜೆಪಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅರ್ಜುನ್‌ ಸಿಂಗ್‌ ಅವರನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿಸಬಲ್ಲರು ಎಂದು ಬಿಜೆಪಿಯ ಹಿರಿಯ ನಾಯಕ ಕೈಲಾಶ್‌ ವಿಜಯ್‌ವರ್ಗಿಯಾ ಆತಂಕ ವ್ಯಕ್ತಪಡಿಸಿದ್ದಾರೆ.
Vijaya Karnataka Web kailash vijayvargiya


ಟ್ವಿಟ್ಟರ್‌ನಲ್ಲಿ ಮಮತಾ ವಿರುದ್ಧ ಹರಿಹಾಯ್ದ ಬಂಗಾಳದಲ್ಲಿ ಬಿಜೆಪಿ ಉಸ್ತುವಾರಿ ಹೊತ್ತಿರುವ ಕೈಲಾಶ್‌, ಈಗಾಗಲೇ ಬೈರಕಪುರ ವ್ಯಾಪ್ತಿಯ ಪೊಲೀಸ್‌ ಆಯುಕ್ತರಿಗೆ ಅರ್ಜುನ್‌ ಸಿಂಗ್‌ ಅವರನ್ನು ಬಂಧಿಸುವಂತೆ ಮಮತಾ ಸೂಚನೆ ಕೊಟ್ಟಿದ್ದಾರೆ. ಬಳಿಕ ಎನ್‌ಕೌಂಟರ್‌ ನಡೆದರೂ ಅಚ್ಚರಿಯಿಲ್ಲ ಎಂದಿದ್ದಾರೆ.

ಅರ್ಜುನ್‌ ಸಿಂಗ್‌ ಅವರಿಗೆ ಏನೇ ಆದರೂ ಅದಕ್ಕೆ ಮಮತಾ ನೇರ ಹೊಣೆಯಾಗುತ್ತಾರೆ ಎಂದು ಕೈಲಾಶ್‌ ಆರೋಪಿಸಿದ್ದಾರೆ.

ನಾಲ್ಕು ಬಾರಿ ಟಿಎಂಸಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಅರ್ಜುನ್‌ ಮಾರ್ಚ್‌ನಲ್ಲಿ ಬಿಜೆಪಿ ಸೇರ್ಪಡೆಯಾದರು. ಟಿಎಂಸಿ ಹಿರಿಯ ನಾಯಕ ಹಾಗೂ ಮಾಜಿ ರೈಲ್ವೆ ಸಚಿವ ದಿನೇಶ್‌ ತ್ರಿವೇದಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ಅರ್ಜುನ್‌ ಸಿಂಗ್‌ ಸ್ಪರ್ಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌