ಆ್ಯಪ್ನಗರ

ಸಚಿವರಾಗಿದ್ದ 7ರಲ್ಲಿ ಐವರು ಐಎಎಸ್, ಐಪಿಎಸ್ ಅಧಿಕಾರಿಗಳ ಪುನರಾಯ್ಕೆ

ಹರ್‌ದೀಪ್‌ ಸಿಂಗ್‌ ಪುರಿ ಅವರು ಪಂಜಾಬ್‌ನ ಅಮೃತಸರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎದುರು ಸೋತರೆ, ಮಾಜಿ ಐಎಎಸ್‌ ಅಧಿಕಾರಿ ಆಲ್ಫೋನ್ಸ್‌ ಕೇರಳದ ಎರ್ನಾಕುಲಂನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇಬ್ಬರೂ ರಾಜ್ಯಸಭೆ ಸದಸ್ಯರು.

Vijaya Karnataka 25 May 2019, 11:41 am
ಹೊಸದಿಲ್ಲಿ: ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಏಳು ಮಂದಿ ನಿವೃತ್ತ ಐಎಎಸ್‌ ಮತ್ತು ಐಪಿಎಸ್‌ ಅಧಿಕಾರಿಗಳ ಪೈಕಿ ಐವರು ಪುನರಾಯ್ಕೆಯಾಗಿದ್ದಾರೆ. ಆರ್‌.ಕೆ.ಸಿಂಗ್‌, ಸತ್ಯಪಾಲ್‌ ಸಿಂಗ್‌, ಅರ್ಜುನ್‌ ಸಿಂಗ್‌ ಮೇಘಾವಾಲ್‌, ಬ್ರಿಜೇಂದ್ರ ಸಿಂಗ್‌ ಮತ್ತು ವಿಷ್ಣು ದಯಾಳ್‌ ರಾಮ್‌ ಮತ್ತೆ ಲೋಕಸಭೆ ಪ್ರವೇಶಿಸಿದ್ದಾರೆ. ಹರ್‌ದೀಪ್‌ ಸಿಂಗ್‌ ಪುರಿ ಮತ್ತು ಕೆ.ಜೆ. ಆಲ್ಫೋನ್ಸ್‌ ಮಾತ್ರ ಸೋತಿದ್ದಾರೆ. ಹರ್‌ದೀಪ್‌ ಸಿಂಗ್‌ ಪುರಿ ಅವರು ಪಂಜಾಬ್‌ನ ಅಮೃತಸರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎದುರು ಸೋತರೆ, ಮಾಜಿ ಐಎಎಸ್‌ ಅಧಿಕಾರಿ ಆಲ್ಫೋನ್ಸ್‌ ಕೇರಳದ ಎರ್ನಾಕುಲಂನಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇಬ್ಬರೂ ರಾಜ್ಯಸಭೆ ಸದಸ್ಯರು.
Vijaya Karnataka Web modi


ಗೆದ್ದವರು
1. ಆರ್‌.ಕೆ. ಸಿಂಗ್‌: ಕೇಂದ್ರ ಇಂಧನ ಖಾತೆ ಸಚಿವ, ಮಾಜಿ ಐಎಎಸ್‌ ಅಧಿಕಾರಿ. ಬಿಹಾರದ ಅರಾಹ್‌ ಕ್ಷೇತ್ರದಲ್ಲಿ ಗೆಲುವು.
2. ಸತ್ಯಪಾಲ್‌ ಸಿಂಗ್‌: ಸಿಬಿಐನಲ್ಲಿ ಕರ್ತವ್ಯ ನಿರ್ವಹಿಸಿರುವ ಮಾಜಿ ಐಪಿಎಸ್‌ ಅಧಿಕಾರಿ ಸತ್ಯಪಾಲ್‌ ಸಿಂಗ್‌ ಮುಂಬಯಿ ಪೊಲೀಸ್‌ ಆಯುಕ್ತರೂ ಆಗಿದ್ದರು. ಕೇಂದ್ರ ಸಚಿವರಾಗಿರುವ ಇವರು ಉತ್ತರ ಪ್ರದೇಶದ ಬಾಘ್‌ಪತ್‌ನಲ್ಲಿ ಜಯಶಾಲಿ.
3. ಅರ್ಜುನ್‌ ಸಿಂಗ್‌ ಮೇಘಾವಾಲ್‌: ಸಂಸದೀಯ ವ್ಯವಹಾರ, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ ಖಾತೆ ಸಚಿವರಾಗಿರುವ ಇವರು ಗೆದ್ದಿರುವುದು ರಾಜಸ್ಥಾನದ ಬಿಕನೇರ್‌ ಕ್ಷೇತ್ರದಿಂದ.
4. ಬ್ರಿಜೇಂದ್ರ ಸಿಂಗ್‌: ಐಎಎಸ್‌ ಹುದ್ದೆ ಬಿಟ್ಟು ಬಿಜೆಪಿ ಸೇರಿದ ಇವರು ಕೇಂದ್ರ ಉಕ್ಕು ಖಾತೆ ಸಚಿ ಬಿರೇಂದ್ರ ಸಿಂಗ್‌ ಅವರ ಪುತ್ರ. ಹರಿಯಾಣದ ಹಿಸಾರ್‌ನಲ್ಲಿ ಇವರ ಗೆಲುವು.
5.ವಿಷ್ಣು ದಯಾಳ್‌ ರಾಮ್‌: ಮಾಜಿ ಐಪಿಎಸ್‌ ಅಧಿಕಾರಿ ರಾಮ್‌ ಜಾರ್ಖಂಡ್‌ನ ಪಾಲಮು ಕ್ಷೇತ್ರಲ್ಲಿ ಆರ್‌ಜೆಡಿ ಅಭ್ಯರ್ಥಿಯನ್ನು ಸೋಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ