ಆ್ಯಪ್ನಗರ

ಗೌಡರು ನಾಟಕ ನಿಲ್ಲಿಸಲಿ: ಯತ್ನಾಳ ಟೀಕೆ

ಪ್ರತಿ ಸಲವೂ ದೇವೇಗೌಡರು ಇದು ಕೊನೆಯ ಚುನಾವಣೆ ಎನ್ನುತ್ತಾರೆ; ಮತ್ತೆ ನಿಲ್ಲುತ್ತಾರೆ. ಈಗ ಅವರ ಕುಟುಂಬ 3ನೇ ತಲೆಮಾರಿನವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಹುಶಃ ಮುಂದಿನ ಸಲ ದೇವೇಗೌಡ ಆ್ಯಂಡ್‌ ಕಂಪನಿ ಸರಕಾರ ಆಗೋತರ ಕಾಣತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಟೀಕಿಸಿದರು.

Vijaya Karnataka 5 Mar 2019, 5:00 am
ವಿಜಯಪುರ: ಪ್ರತಿ ಸಲವೂ ದೇವೇಗೌಡರು ಇದು ಕೊನೆಯ ಚುನಾವಣೆ ಎನ್ನುತ್ತಾರೆ; ಮತ್ತೆ ನಿಲ್ಲುತ್ತಾರೆ. ಈಗ ಅವರ ಕುಟುಂಬ 3ನೇ ತಲೆಮಾರಿನವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬಹುಶಃ ಮುಂದಿನ ಸಲ ದೇವೇಗೌಡ ಆ್ಯಂಡ್‌ ಕಂಪನಿ ಸರಕಾರ ಆಗೋತರ ಕಾಣತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಟೀಕಿಸಿದರು.
Vijaya Karnataka Web Yatnal


''ದೇವೇಗೌಡರು ಹೇಳೋದು ಒಂದು, ಮಾಡೋದು ಇನ್ನೊಂದು, ನಾಟಕ ಮಾಡೋದನ್ನು ಅವರು ಬಿಡಬೇಕು. ನಿಲ್ಲುವುದಿದ್ದರೆ ಚುನಾವಣೆಯಲ್ಲಿ ನಿಲ್ಲಬೇಕು, ಇಲ್ಲವೇ ಮನೆಯಲ್ಲಿ ಕುಳಿತುಕೊಳ್ಳಬೇಕು,'' ಎಂದರು. ಸುಮಲತಾ ಬಿಜೆಪಿಗೆ ಬಂದ್ರೆ ಮಂಡ್ಯದಿಂದ ಟಿಕೆಟ್‌ ಕೊಡುವ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ಮಂಡ್ಯದಲ್ಲಿ ಅಂಬರೀಶ್‌ ಕುಟುಂಬದ ದೊಡ್ಡ ಅಲೆ ಇದೆ. ಸುಮಲತಾ ಅವರು ಪ್ರಧಾನಿ ಮೋದಿ ಸಾಧನೆ ಮೆಚ್ಚಿಕೊಂಡು ಬಿಜೆಪಿಗೆ ಬರಬಹುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌