ಆ್ಯಪ್ನಗರ

ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ದೀದಿಯೇ ಸ್ಪೀಡ್‌ ಬ್ರೇಕರ್‌: ಮೋದಿ

ದೇಶದ ಅಭಿವೃದ್ಧಿಗಾಗಿ ನಮ್ಮ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಗೆ ಇಲ್ಲಿನ ಮುಖ್ಯಮಂತ್ರಿಯೇ ಅಡ್ಡಿಯಾಗಿದ್ದಾರೆ. ಅವರು ಒಂದು ರೀತಿ ಸ್ಪೀಡ್‌ ಬ್ರೇಕರ್‌ ರೀತಿಯಲ್ಲಿದ್ದಾರೆ ಎಂದು ಮೋದಿ ಟೀಕಿಸಿದರು.

Vijaya Karnataka Web 3 Apr 2019, 4:48 pm
ಕೋಲ್ಕೊತಾ: ಈಶಾನ್ಯ ರಾಜ್ಯಗಳು ಅದರಲ್ಲೂ ಪಶ್ಚಿಮ ಬಂಗಾಳದಲ್ಲೂ ಕಮಲ ಅರಳಿಸಬೇಕು ಎಂದು ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ನಿರಂತರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.
Vijaya Karnataka Web ಮೋದಿ
ಮೋದಿ


ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಸ್ತ್ರಗಳನ್ನು ಬಿಟ್ಟರು.

ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಪ್ರಮುಖ ಅಡ್ಡಿಯಾಗಿರುವುದೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಬಂಗಾಳದಲ್ಲಿ ಮೋದಿ ಸಾರ್ವಜನಿಕ ಸಮಾರಂಭದಲಲ್ಲಿ ಭಾಗವಹಿಸಿದರು.

ದೇಶದ ಅಭಿವೃದ್ಧಿಗಾಗಿ ನಮ್ಮ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಗೆ ಇಲ್ಲಿನ ಮುಖ್ಯಮಂತ್ರಿಯೇ ಅಡ್ಡಿಯಾಗಿದ್ದಾರೆ. ಅವರು ಒಂದು ರೀತಿ ಸ್ಪೀಡ್‌ ಬ್ರೇಕರ್‌ ರೀತಿಯಲ್ಲಿದ್ದಾರೆ ಎಂದು ಮೋದಿ ಟೀಕಿಸಿದರು.

ಆಯುಷ್ಮಾನ್‌ ಭಾರತ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಆದರೆ ಬಡವರಿಗೆ ಈ ಯೋಜನೆಗಳ ಲಾಭ ದೊರೆಯದಂತೆ ಮಾಡಿದ್ದಾರೆ ಇಲ್ಲಿನ ಮುಖ್ಯಮಂತ್ರಿ. ಕೇಂದ್ರ ಸರಕಾರಕ್ಕೆ, ಮೋದಿಗೆ ಎಲ್ಲಿ ಕ್ರೆಡಿಟ್‌ ಹೋಗುತ್ತದೋ ಎನ್ನುವ ಭೀತಿಯಲ್ಲಿದ್ದಾರೆ ಇಲ್ಲಿನ ದೀದಿ ಎಂದು ಮೋದಿ ಟಾಂಗ್‌ ಕೊಟ್ಟರು.

ಮಹಾಘಟಬಂಧನ್‌ ಹೆಸರಿನಲ್ಲಿ ನನ್ನ ವಿರುದ್ಧ ಸಮರ ಸಾರಲಾಗುತ್ತಿದೆ. ಮೋದಿ ಹಠಾವೋ, ಮೋದಿ ಹಠಾವೋ ಎಂಬುದೇ ಇವರ ಮಂತ್ರವಾಗಿದೆ. ಮೋದಿ ಅಂಥ ಅಪರಾಧವನ್ನಾದರೂ ಮಾಡಿದ್ದು ಏನು. ದೇಶದ ಅಭಿವೃದ್ಧಿಗೆ ಶ್ರಮಿಸಿದ್ದೇ ತಪ್ಪಾ ಎಂದು ಮೋದಿ ಮತದಾರರನ್ನು ಪ್ರಶ್ನಿಸಿದರು.

ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ. ಮೋದಿ ಒಬ್ಬ ಹೋಗಿ ಬಿಟ್ಟರೆ ಸಾಕು. ಇನ್ನು ಕಾಂಗ್ರೆಸ್‌ ಮಾಡಿರುವ ಪ್ರಣಾಳಿಕೆ ನೋಡಿ ಇವರು ಜನರ ಪರ ಇದ್ದಾರಾ ಅಥವಾ ಪಾಕಿಸ್ತಾನದ ಪರ ಇದ್ದಾರಾ ಎಂಬ ಅನುಮಾನ ಮೂಡುತ್ತದೆ ಎಂದು ಟೀಕಿಸಿದರು.

ಸೇನಾಪಡೆಗಳ ಕೈ ಕಟ್ಟಿ ಹಾಕಲು ಕಾಂಗ್ರೆಸ್‌ ಮುಂದಾಗಿದೆ. ಆದರೆ ನಮ್ಮ ಸರಕಾರ ಸೇನೆಗೆ ಎಲ್ಲ ರೀತಿಯ ಬೆಂಬಲ ನೀಡಿದೆ. ಈಗ ಕಾಂಗ್ರೆಸ್‌ ಸೇನೆಯನ್ನು ಕಟ್ಟಿ ಹಾಕಲು ನಿರ್ಧರಿಸಿದೆ ಎಂದು ಮೋದಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌