ಆ್ಯಪ್ನಗರ

ಮೋದಿಯನ್ನು ಅಧಿಕಾರದಿಂದಷ್ಟೇ ಅಲ್ಲ, ರಾಜಕೀಯದಿಂದಲೇ ಕಿತ್ತೊಗೆಯಬೇಕು: ಮಮತಾ ಬ್ಯಾನರ್ಜಿ

ಉತ್ತಮ ರಾಷ್ಟ್ರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಮಾತ್ರವಲ್ಲ, ರಾಜಕೀಯದಿಂದಲೇ ಕಿತ್ತೊಗೆಯಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಬ್ಬರಿಸಿದ್ದಾರೆ.

TOI.in 8 Apr 2019, 3:08 pm
ಕೋಲ್ಕತ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದವರಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಮೋದಿಯನ್ನು ಅಧಿಕಾರ ಮತ್ತು ರಾಜಕೀಯದಿಂದ ಕಿತ್ತೊಗೆಯಬೇಕು ಎಂದು ಅಬ್ಬರಿಸಿದ್ದಾರೆ.
Vijaya Karnataka Web Mamata Banerjee


ಪಿಎಂ ಮೋದಿಗೆ ರೈತರು ಮತ್ತು ಮಧ್ಯಮ ವರ್ಗದ ಜನರ ಬಗ್ಗೆ ಚಿಂತಿಸಲು ಸಮಯವಿಲ್ಲ. 5 ವರ್ಷಗಳ ಆಡಳಿತದಲ್ಲಿ 4.5 ವರ್ಷ ವಿಶ್ವ ಪ್ರವಾಸ ಮಾಡುವುದರಲ್ಲೇ ಬ್ಯುಸಿಯಾಗಿದ್ದರು. ಚುನಾವಣೆ ಬಂದಾಗ ಮೋದಿ ಎಲ್ಲರನ್ನು ಬೆದರಿಸಲು ಆರಂಭಿಸಿದ್ದಾರೆ. ಸುಳ್ಳುಗಳನ್ನು ಹೇಳಲು ಆರಂಭಿಸಿದ್ದಾರೆ. ಸುಳ್ಳು ಹೇಳುವ ಸ್ಪರ್ಧೆಯಿದ್ದರೆ ಪ್ರಧಾನಿ ಮೋದಿಗೆ ಮೊದಲ ಸ್ಥಾನ ಸಿಗಲಿದೆ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರದ ಒಳಿತಿಗಾಗಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಇಳಿಸುವುದು ಮಾತ್ರವಲ್ಲ, ರಾಜಕೀಯದಿಂದಲೇ ಕಿತ್ತೊಗೆಯಬೇಕು ಎಂದು ಟಿಎಂಸಿ ನಾಯಕಿ ಗುಡುಗಿದ್ದಾರೆ.

ಮೋದಿ ಭಯದ ರೋಗದಿಂದ ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಬಳಲುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮಮತಾ ಬ್ಯಾನರ್ಜಿ, ತಮಗೆ ಬೆದರಿಕೆ ಹಾಕಬೇಡಿ, ಅದು ಅತಿ ದೊಡ್ಡ ತಪ್ಪಾಗಲಿದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ರಾಷ್ಟ್ರಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಪ್ರಧಾನಿ ಮೋದಿ ಎಲ್ಲಿದ್ದರು? ನೋಟ್‌ ಬ್ಯಾನ್‌ನಿಂದ ಜನರು ಸಾವನ್ನಪ್ಪಿದಾಗ ಮತ್ತು ಉದ್ಯೋಗ ಕಳೆದುಕೊಂಡಾಗ ಮೋದಿ ಎಲ್ಲಿದ್ದರು? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌