ಆ್ಯಪ್ನಗರ

ನೀತಿ ಸಂಹಿತೆ ಅಂತ್ಯದ ವರೆಗೂ ಕೇಂದ್ರ ಪಡೆಗಳು ಬಂಗಾಳದಲ್ಲಿರಲಿ: ನಿರ್ಮಲಾ ಸೀತಾರಾಮನ್

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದಲ್ಲಿ ಮತದಾರರನ್ನು ಬೆದರಿಸಲಾಗುತ್ತಿದೆ ಮತ್ತು ಮತದಾರರು ತಮ್ಮ ಹಕ್ಕು ಚಲಾಯಸದಂತೆ ತಡೆಯೊಡ್ಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು. 'ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾದ ಕೇಂದ್ರ ಭದ್ರತಾ ಪಡೆಗಳನ್ನು ಮಾದರಿ ನೀತಿ ಸಂಹಿತೆ ಕೊನೆಗೊಳ್ಳುವ ವರೆಗೂ ಮುಂದುವರಿಸಬೇಕು' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Vijaya Karnataka Web 19 May 2019, 5:28 pm
ಕೋಲ್ಕತ: ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲೂ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಎಗ್ಗಿಲ್ಲದೇ ಮುಂದುವರಿದಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸೇ ಹೊಣೆ ಎಂದು ಬಿಜೆಪಿ ಬಲವಾಗಿ ಪ್ರತಿಪಾದಿಸಿದೆ.
Vijaya Karnataka Web Nirmala Sitharaman


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದಲ್ಲಿ ಮತದಾರರನ್ನು ಬೆದರಿಸಲಾಗುತ್ತಿದೆ ಮತ್ತು ಮತದಾರರು ತಮ್ಮ ಹಕ್ಕು ಚಲಾಯಸದಂತೆ ತಡೆಯೊಡ್ಡಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದರು.

'ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಲಾದ ಕೇಂದ್ರ ಭದ್ರತಾ ಪಡೆಗಳನ್ನು ಮಾದರಿ ನೀತಿ ಸಂಹಿತೆ ಕೊನೆಗೊಳ್ಳುವ ವರೆಗೂ ಮುಂದುವರಿಸಬೇಕು' ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಇನ್ನೊಂದೆಡೆ ಟಿಎಂಸಿ ಕೂಡ ಬಿಜೆಪಿ ವಿರುದ್ಧ ಹಿಂಸಾಚಾರ ಮತ್ತು ಇವಿಎಂ ತಿರುಚಿದ ಆರೋಪ ಮಾಡಿದೆ.

ಬೆಳಗ್ಗೆ ಮತದಾನ ಆರಂಭವಾದಾಗಿನಿಂದಲೂ ಪಶ್ಚಿಮ ಬಂಗಾಳದಲ್ಲಿ ಇಂದು ಚುನಾವಣೆ ನಡೆದ 9 ಕ್ಷೇತ್ರಗಳಲ್ಲೂ ವ್ಯಾಪಕ ಹಿಂಸಾಚಾರ ನಡೆದಿದೆ. ಉತ್ತರ ಕೋಲ್ಕತದ ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಅವರ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ಬಿಜೆಪಿ ಕಾರ್ಯಕರ್ತ ಹಾಗೂ ಒಬ್ಬ ಕ್ಯಾಮರಾಮನ್ ಗಾಯಗೊಂಡಿದ್ದಾರೆ. ಸಿನ್ಹಾ ಅವರ ಕಾರಿಗೂ ಹಾನಿ ಮಾಡಲಾಗಿದೆ.

ಬಳಿಕ ಇಸ್ಲಾಂಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತಗಟ್ಟೆಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಅದೇ ಪ್ರದೇಶದಲ್ಲಿ ಮಾಧ್ಯಮ ಪ್ರತಿನಿಧಿ ಒಬ್ಬರನ್ನು ತಳ್ಳಿಹಾಕಿ ಗಾಯಗೊಳಿಸಲಾಗಿದೆ.

ಜಾಧವಪುರದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಿಗೆ ಥಳಿಸಲಾಗಿದ್ದು ಅವರ ವಾಹನವನ್ನು ಗುಂಪೊಂದು ಹಾನಿಗೊಳಿಸಿದೆ.

ಇಂದು ಮತದಾನ ನಡೆದ ಎಲ್ಲ 9 ಕ್ಷೇತ್ರಗಳನ್ನೂ 2014ರ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ ಗೆದ್ದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ