ಆ್ಯಪ್ನಗರ

ಬಂಗಾಳದಲ್ಲಿ ಮೋದಿ ಸುನಾಮಿಗೆ ಕೊಚ್ಚಿ ಹೋದ ದೀದಿ

ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಭಾರಿ ಹಿಂಸಾಚಾರ ಕೂಡ ನಡೆಯಿತು. ಪ್ರತಿ ಹಂತದ ಚುನಾವಣೆಯಲ್ಲೂ ಭಾರಿ ಹಿಂಸಾಚಾರ ನಡೆದು ರಕ್ತಪಾತವಾಗಿತ್ತು.

Vijaya Karnataka Web 23 May 2019, 6:11 pm
ಹೊಸದಿಲ್ಲಿ: ಪಶ್ಚಿಮ ಬಂಗಾಳ ಒಂದು ಕಾಲದಲ್ಲಿ ಎಡರಂಗದ ಭದ್ರಕೋಟೆಯಾಗಿತ್ತು. ಕೆಂಪು ದ್ವೀಪದಂತೆ ಕಂಗೊಳಿಸುತ್ತಿದ್ದ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಕಿಚ್ಚು ಹಚ್ಚಿ ತಮ್ಮ ವಶ ಮಾಡಿಕೊಂಡಿದ್ದರು.
Vijaya Karnataka Web ಮೋದಿ ಮಮತಾ
ಮೋದಿ ಮಮತಾ


ಈಗ ಇದೇ ಪಶ್ಚಿಮ ಬಂಗಾಳದಲ್ಲಿ ಮೋದಿ, ಅಮಿತ್‌ ಶಾ ಜೋಡೆತ್ತು ತಮ್ಮ ಗತ್ತು ತೋರಿವೆ.

ಬಂಗಾಳದ ಕೆಂಪುತೋಟದಲ್ಲಿ ಈಗ ಕಮಲ ಅರಳಿದೆ. ರಾಜ್ಯದ 42 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 2014ರಲ್ಲಿ ಗೆದ್ದಿದ್ದು ಕೇವಲ 2 ಸ್ಥಾನ ಮಾತ್ರ. ಈಗ ಮೋದಿ, ಅಮಿತ್ ಶಾ ಸುನಾಮಿಯಿಂದಾಗಿ ಈ ಸಂಖ್ಯೆ 2019ರಲ್ಲಿ 18ಕ್ಕೆ ಏರಿಕೆಯಾಗಿದೆ.

ಮೋದಿಯನ್ನು ಎದುರಿಸುವ ಶಕ್ತಿ, ಮೋದಿಯನ್ನು ದಿಲ್ಲಿಯ ಗದ್ದುಗೆಯಿಂದ ಕೆಳಗಿಸುವ ಸಾಮರ್ಥ್ಯ ನನಗೆ ಮಾತ್ರ ಇರೋದು ಎಂದು ಹೇಳಿಕೊಳ್ಳುತ್ತಿದ್ದ, ಮೋದಿಗೆ ಸವಾಲು ಎಸೆದಿದ್ದ ದೀದಿ ಈಗ ಪತರುಗುಟ್ಟಿದ್ದಾರೆ.

ಮೋದಿ, ಅಮಿತ್ ಶಾ ಸುನಾಮಿಯಲ್ಲಿ ತೃಣ ಮೂಲ ಕಾಂಗ್ರೆಸ್‌ ಕೊಚ್ಚಿಕೊಂಡು ಹೋಗಿದೆ. ಹಾಗೆಂದು ಟಿಎಂಸಿಗೆ ಸ್ಥಾನ ಬಂದಿಲ್ಲ ಎಂದಲ್ಲ, ಆದರೆ ಅದರ ಪಾರಪಥ್ಯ ಕಡಿಮೆಯಾಗಿ ಕೇವಲ 23 ಸ್ಥಾನಕ್ಕೆ ಸೀಮಿತವಾಗಿದೆ.

ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಶತಾಯ ಗತಾಯ ಕಮಲ ಅರಳಿಸಬೇಕು ಎಂದು ಬಿಜೆಪಿಯ ಜೋಡೆತ್ತು ಸಂಕಲ್ಪ ಮಾಡಿತ್ತು. ಇದೇ ಕಾರಣಕ್ಕಾಗಿ ಬಿಜೆಪಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿತ್ತು. ನರೇಂದ್ರ ಮೋದಿ ಪ್ರಚಾರ ಮೆರವಣಿಗೆ ನಡೆಸಲು ದೀದಿ ಅನುಮತಿ ಕೊಡಲಿಲ್ಲ. ಇದರಿಂದ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರ ನಡುವೆ ಶೀತಲ ಸಮರವೇ ನಡೆಯಿತು.

ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಭಾರಿ ಹಿಂಸಾಚಾರ ಕೂಡ ನಡೆಯಿತು. ಪ್ರತಿ ಹಂತದ ಚುನಾವಣೆಯಲ್ಲೂ ಭಾರಿ ಹಿಂಸಾಚಾರ ನಡೆದು ರಕ್ತಪಾತವಾಗಿತ್ತು.

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ 18 ಸ್ಥಾನ ಗಳಿಸಿದ್ದು ಭಾರಿ ಸಾಧನೆ ಮಾಡಿದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ