ಆ್ಯಪ್ನಗರ

ಬಿಜೆಪಿ ಮುಕ್ತ ರಾಜ್ಯ ಕಟ್ಟೋಣ

ರಾಜ್ಯವನ್ನು ಬಿಜೆಪಿ ಮುಕ್ತ ಮಾಡಲು ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು...

Vijaya Karnataka 1 Apr 2019, 5:00 am
ಬೆಂಗಳೂರು : ರಾಜ್ಯವನ್ನು ಬಿಜೆಪಿ ಮುಕ್ತ ಮಾಡಲು ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಚೌಕೀದಾರ್‌ ಚೋರ್‌ ಆಗಿದ್ದು ಅವರು ಪುನಃ ಅಧಿಕಾರಕ್ಕೆ ಬಾರದಂತೆ ತಡೆಯಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web 34CB1E53-3ADC-45DB-AB0B-BDE47A3CC10D


ಜಂಟಿ ರಾರ‍ಯಲಿಯಲ್ಲಿ ಭಾನುವಾರ ಮಾತನಾಡಿದ ಅವರು, ಐದು ವರ್ಷ ದೇಶವನ್ನು ಹಾಳು ಮಾಡಿದ್ದಾರೆ. ರೈತರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ. ಹಾಗಾಗಿ ಈ ಅನಿಷ್ಠವನ್ನು ಬದಲಿಸಬೇಕಿದೆ ಎಂದು ಸೂಚಿಸಿದರು.

ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ''ರಾಜ್ಯದ ಸಾಲ ಮನ್ನಾವನ್ನು ಮೋದಿ ವ್ಯಂಗ್ಯವಾಡಿದ್ದಾರೆ. ಆದರೆ, ಚುನಾವಣೆ ವೇಳೆ ಅವರು ತಂದಿರುವ ಕಿಸಾನ್‌ ಸಮ್ಮಾನ್‌ನಿಂದ ಎಷ್ಟು ಜನರಿಗೆ ಲಾಭವಾಗಿದೆ? ನಾವು 10 ಲಕ್ಷ ರೈತರ ಕುಟುಂಬದ ವಿವರವನ್ನು ಕೇಂದ್ರದ ವೆಬ್‌ಗೆ ಅಪ್‌ಲೋಡ್‌ ಮಾಡಿದರೂ ಅವರು 17 ಕುಟುಂಬ ಗುರುತಿಸಿ 6 ಕುಟುಂಬಕ್ಕೆ ಹಣ ಪಾವತಿಸಿದ್ದಾರೆ. ಮಹದಾಯಿ ಯೋಜನೆಗೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಸಂಬಂಧ ಕೇಂದ್ರವಿನ್ನೂ ಅಧಿಸೂಚನೆ ಹೊರಡಿಸಿಲ್ಲ,'' ಎಂದು ಆಕ್ಷೇಪಿಸಿದರು.

ಇದೇ ಮೊದಲ ಬಾರಿಗೆ ಜಂಟಿ ರಾರ‍ಯಲಿ

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆ ಬಳಿಕ ನಡೆಸಿದ ಮೊದಲ ಜಂಟಿ ರಾರ‍ಯಲಿ ಇದಾಗಿದೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟಿನ ಸಂದೇಶ ರವಾನಿಸಿದ್ದರು. ಇದೀಗ ರಾರ‍ಯಲಿ ನಡೆಸುವ ಮೂಲಕ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಭರ್ಜರಿ ಚಾಲನೆಯನ್ನೇ ನೀಡಿದ್ದಾರೆ. ಉಭಯ ಪಕ್ಷಗಳ ಕಾರ್ಯಕರ್ತರೂ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಮೊಳಗಿಸಲು ಪೈಪೋಟಿಗೆ ಬಿದ್ದಂತಿತ್ತು. ಎರಡೂ ಪಕ್ಷಗಳ ನಾಯಕರ ಆಳೆತ್ತರದ ಕಟೌಟ್‌ಗಳು ರಾರಾಜಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌