ಆ್ಯಪ್ನಗರ

ಸೇನಾಪಡೆ ನಿವೃತ್ತ ಉಪಮುಖ್ಯಸ್ಥ ಶರತ್ ಚಂದ್‌ ಬಿಜೆಪಿ ಸೇರ್ಪಡೆ

1979ರ ಜೂನ್‌ನಲ್ಲಿ ಗಢವಾಲ್ ರೈಫಲ್ಸ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಶರತ್ ಚಂದ್‌, ಕಳೆದ ವರ್ಷದ ಜೂನ್ 1ರಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.

Vijaya Karnataka Web 6 Apr 2019, 7:36 pm
ಹೊಸದಿಲ್ಲಿ: ಸೇನಾಪಡೆಯ ಮಾಜಿ ಉಪ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್ ಶರತ್ ಚಂದ್‌ ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
Vijaya Karnataka Web Sarath Chand Joins BJP


1979ರ ಜೂನ್‌ನಲ್ಲಿ ಗಢವಾಲ್ ರೈಫಲ್ಸ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ಶರತ್ ಚಂದ್‌, ಕಳೆದ ವರ್ಷದ ಜೂನ್ 1ರಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.

ಸೇನಾ ಕಮಾಂಡ್‌ನಲ್ಲಿ ಅವರು ಹಲವು ಬಗೆಯ ಸಕ್ರಿಯ ಸಮರ ದಳಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.

'ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಭಾರತಕ್ಕೆ ಪ್ರಬಲ ನಾಯಕತ್ವ ಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಿಂದ ನಾನು ಬಹಳ ಪ್ರಭಾವಿತನಾಗಿದ್ದು ಬಿಜೆಪಿ ಸೇರಿದ್ದೇನೆ' ಎಂದು ಶರತ್ ಚಂದ್ ಹೇಳಿದರು. ಯೋಧರ ಕ್ಷೇಮಕ್ಕಾಗಿ ಬಿಜೆಪಿ ಬಹಳಷ್ಟು ಕೆಲಸ ಮಾಡಿದೆ ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌