ಆ್ಯಪ್ನಗರ

ಬಾಲಾಕೋಟ್ ಏರ್‌ಸ್ಟ್ರೈಕ್ ಯಶಸ್ಸು ಪ್ರಧಾನಿ ಮೋದಿಗೆ ಸೇರಿದ್ದು; ಅವರು 'ಮೌನಿ ಬಾಬಾ'ರಂತಲ್ಲ: ಅಮಿತ್ ಶಾ

'ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತ ವೈಮಾನಿಕ ದಾಳಿಯ ಪ್ರತೀಕಾರ ಕೈಗೊಳ್ಳುತ್ತದೆ ಎಂದು ಪಾಕಿಸ್ತಾನ ಕನಸಲ್ಲೂ ಎಣಿಸಿರಲಿಲ್ಲ. ಭಾರತದ ಜನತೆ ಚುನಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರವದು. ಅವರು ಹಿಂದಿನ ಪ್ರಧಾನಿ ಮೌನಿ ಬಾಬಾರಂತಲ್ಲ' ಎಂದು ಶಾ ಹೇಳಿದರು.

Vijaya Karnataka Web 5 May 2019, 7:36 pm
ಔರಂಗಾಬಾದ್: ಪಾಕಿಸ್ತಾನದ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿಯ ಸಂಪೂರ್ಣ ಯಶಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
Vijaya Karnataka Web Amit Shah


ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ 'ಮೌನಿ ಬಾಬಾ' ಅವರಂತಲ್ಲ ಎಂದು ಅಮಿತ್ ಶಾ ಕಟಕಿಯಾಡಿದರು.

'ಪುಲ್ವಾಮಾ ಉಗ್ರ ದಾಳಿಯ ಬಳಿಕ ಭಾರತ ವೈಮಾನಿಕ ದಾಳಿಯ ಪ್ರತೀಕಾರ ಕೈಗೊಳ್ಳುತ್ತದೆ ಎಂದು ಪಾಕಿಸ್ತಾನ ಕನಸಲ್ಲೂ ಎಣಿಸಿರಲಿಲ್ಲ. ಭಾರತದ ಜನತೆ ಚುನಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನಿರ್ಧಾರವದು. ಅವರು ಹಿಂದಿನ ಪ್ರಧಾನಿ ಮೌನಿ ಬಾಬಾರಂತಲ್ಲ' ಎಂದು ಶಾ ಹೇಳಿದರು.

'ಪುಲ್ವಾಮಾ ದಾಳಿಯಲ್ಲಿ ನಮ್ಮ 40 ವೀರ ಯೋಧರು ಹುತಾತ್ಮರಾದರು. ಜನತೆ ಭರವಸೆ ಕಳೆದುಕೊಂಡಿದ್ದರು. ಭಾರತ ಯಾವುದೇ ಸರ್ಜಿಕಲ್ ದಾಳಿ ನಡೆಸುವುದಿಲ್ಲ, ಯಾಕೆಂದರೆ ಗಡಿಯುದ್ದಕ್ಕೂ ಪಾಕ್ ಸೇನೆ ನಿಯೋಜಿಸಿದೆ ಎಂದು ವದಂತಿಗಳನ್ನು ಹಬ್ಬಿಸಲು ಆರಂಭಿಸಿದ್ದರು' ಎಂದು ಶಾ ನುಡಿದರು.

'ಇನ್ನೂ ಏನೂ ಆಗುವುದಿಲ್ಲ ಎಂದೇ ಜನ ಭಾವಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ವಾಯುಪಡೆ ಪಾಕಿಸ್ತಾನದೊಳಕ್ಕೇ ನುಗ್ಗಿ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತು' ಎಂದು ಶಾ ಹೇಳಿದರು.

ಏರ್‌ಸ್ಟ್ರೈಕ್‌ಗೆ ಸಾಕ್ಷಿ ಕೇಳಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಾಹುಲ್‌ಗೆ ಏನೂ ಗೊತ್ತಿಲ್ಲ, ಏನು ನಡೆದಿದೇ ಎಂಬುದೇ ಆತನಿಗೆ ತಿಳಿಯದು. ವೈಮಾನಿಕ ದಾಳಿಗೆ ಮುನ್ನ ಇಸ್ರೇಲ್ ಮತ್ತು ಅಮೆರಿಕಕ್ಕೆ ಮಾತ್ರ ಭಾರತ ತನ್ನ ಯೋಧರ ಸಾವಿಗೆ ಪ್ರತೀಕಾರ ಕೈಗೊಳ್ಳುವುದು ಖಚಿತ ಎಂಬ ಅರಿವಿತ್ತು' ಎಂದು ಬಿಜೆಪಿ ಅಧ್ಯಕ್ಷರು ನುಡಿದರು.

'ನಮ್ಮತ್ತ ಯಾರಾದರೂ ಗುಂಡು ಹಾರಿಸುತ್ತಿದ್ದರೆ ನಾವು ಅವರ ಜತೆ ಮಾತನಾಡುತ್ತ ಕೂರುವುದಿಲ್ಲ ಇದು ನರೇಂದ್ರ ಮೋದಿ ಅವರ ಸರಕಾರ. ಆ ಕಡೆಯಿಂದ ಗುಂಡುಗಳು ಹಾರಿ ಬಂದರೆ ಈ ಕಡೆಯಿಂದ ಬಾಂಬುಗಳೇ ಹಾರುತ್ತವೆ' ಎಂದು ಶಾ ಹೇಳಿದರು.

ದೇಶದ ಹಿತವೇ ಪರಮೋಚ್ಚ ಎಂದು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ನರೇಂದ್ರ ಮೋದಿ ಅವರ ನಾಯಕತ್ವದ ಸರಕಾರವೆಲ್ಲಿ...? ತನ್ನ ನಾಯಕ ಯಾರೆಂದೇ ನಿರ್ಧರಿಸಲಾಗದ ಮಹಾಘಟಬಂಧನ್ ಎಲ್ಲಿ..? ಎಂದು ಶಾ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌