ಚಂಡೀಗಢ : ಮಕ್ಕಳು ಚುನಾವಣಾ ಪ್ರಚಾರ ನಡೆಸುತ್ತಿರುವ ವಿಡಿಯೊವೊಂದು ವೈರಲ್ ಆದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಅವರಿಗೆ ಚುನಾವಣಾ ಆಯೋಗ ಶನಿವಾರ ನೋಟಿಸ್ ನೀಡಿದೆ. ''ನೀವು ಪ್ರಚಾರದಲ್ಲಿ ಸಣ್ಣ ಮಕ್ಕಳನ್ನು ಬಳಸಿಕೊಂಡಿರುವ ವಿಡಿಯೊ ಹರಿದಾಡುತ್ತಿದೆ. ಇದನ್ನು ಟ್ವಿಟ್ಟರ್ನಲ್ಲಿ ನೀವು ಕೂಡ ಹಂಚಿಕೊಂಡಿದ್ದೀರಿ. ಈ ಕುರಿತು 24 ಗಂಟೆಯೊಳಗೆ ಪ್ರತಿಕ್ರಿಯಿಸಿ,'' ಎಂದು ಆಯೋಗ ಸೂಚಿಸಿದೆ. ನೋಟಿಸ್ಗೆ ಉತ್ತರಿಸಿರುವ ಕಿರಣ್ ಖೇರ್, ಚುನಾವಣಾ ಆಯೋಗದ ಕ್ಷಮೆ ಕೋರಿದ್ದಾರಲ್ಲದೆ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. 2017ರ ಜನವರಿಯಲ್ಲಿ ಚುನಾವಣಾ ಆಯೋಗಕ್ಕೆ ವಿಸ್ತೃತ ಪತ್ರ ಬರೆದಿದ್ದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ , ಪ್ರಚಾರಗಳಲ್ಲಿ ಮತ್ತು ಇತರ ಯಾವುದೇ ಚುನಾವಣಾ ಚಟುವಟಿಕೆಗಳಲ್ಲಿ ಅಭ್ಯರ್ಥಿಗಳು ಮಕ್ಕಳನ್ನು ಬಳಸಿಕೊಳ್ಳಲು ನಿರ್ಬಂಧ ಹೇರುವಂತೆ ಮನವಿ ಮಾಡಿತ್ತು. ನಾಲ್ಕು ಬಾರಿ ಚಂಡೀಗಢದಿಂದ ಸಂಸದೆಯಾಗಿರುವ ಕಿರಣ್ ವಿರುದ್ಧ ಕಾಂಗ್ರೆಸ್ನಿಂದ ಪವನ್ ಕುಮಾರ ಬನ್ಸಾಲ್ ಸ್ಪರ್ಧಿಸುತ್ತಿದ್ದಾರೆ. ಮೇ 19ರಂದು ಚಂಡೀಗಢದಲ್ಲಿ ಮತದಾನ ನಡೆಯಲಿದೆ.
ಪ್ರಚಾರಕ್ಕೆ ಮಕ್ಕಳ ಬಳಕೆ: ಆಯೋಗದ ನೋಟಿಸ್ ಬಳಿಕ ಕ್ಷಮೆ ಕೋರಿದ ಕಿರಣ್
ನೋಟಿಸ್ಗೆ ಉತ್ತರಿಸಿರುವ ಕಿರಣ್ ಖೇರ್, ಚುನಾವಣಾ ಆಯೋಗದ ಕ್ಷಮೆ ಕೋರಿದ್ದಾರಲ್ಲದೆ ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.
Vijaya Karnataka 5 May 2019, 5:00 am