ತಿರುವನಂತಪುರಂ: ದೇವಸ್ಥಾನವೊಂದರಲ್ಲಿ ಸೋಮವಾರ ತುಲಾಭಾರ ಸೇವೆ ಸಲ್ಲಿಸುವ ವೇಳೆ ತಕ್ಕಡಿಯ ಕೊಂಡಿ ಕಳಚಿ ಗಾಯಗೊಂಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಕೇರಳ ಪ್ರವಾಸದಲ್ಲಿರುವ ನಿರ್ಮಲಾ ಅವರು ಮಂಗಳವಾರ ಬೆಳಗ್ಗೆ ತರೂರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಿದರು. ಈ ಕುರಿತು ಆಸ್ಪತ್ರೆಯಿಂದಲೇ ಟ್ವೀಟ್ ಮಾಡಿರುವ ತರೂರ್, ''ಬಿಡುವಿಲ್ಲದ ಚುನಾವಣಾ ಕಾರ್ಯಕ್ರಮಗಳ ನಡುವೆಯೂ ನಿರ್ಮಲಾ ಸೀತಾರಾಮನ್ ಭೇಟಿ ನನ್ನ ಹೃದಯ ತಟ್ಟಿತು. ಭಾರತೀಯ ರಾಜಕಾರಣದಲ್ಲಿ ನಾಗರಿಕತೆ ಎನ್ನುವುದು ಅಪರೂಪವಾಗಿದೆ. ನಿರ್ಮಲಾ ನಡೆ ನಿಜಕ್ಕೂ ಮಾದರಿ,'' ಎಂದು ಹೇಳಿದ್ದಾರೆ. ಎಲ್ಡಿಎಫ್ ಮುಖಂಡ ಸಿ.ದಿವಾಕರನ್ ಅವರೂ ತರೂರ್ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಗಾಯಾಳು ತರೂರ್ ಭೇಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್
ಕೇರಳ ಪ್ರವಾಸದಲ್ಲಿರುವ ನಿರ್ಮಲಾ ಅವರು ಮಂಗಳವಾರ ಬೆಳಗ್ಗೆ ತರೂರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿ ಸಾಂತ್ವನ ಹೇಳಿದರು.
Vijaya Karnataka 17 Apr 2019, 5:00 am