ಆ್ಯಪ್ನಗರ

ಮೋದಿಯ ಸಂತೆ ಭಾಷಣಕ್ಕೆ ಉತ್ತರಿಸಲ್ಲ, ಚರ್ಚೆಗೆ ಬರಲಿ: ಸಿಎಂ ಕುಮಾರಸ್ವಾಮಿ

'ರಿಮೋಟ್‌ ಕಂಟ್ರೋಲ್‌ ಸಿಎಂ ಆಗಿಯೂ ನನ್ನದು 9 ತಿಂಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ದೊಡ್ಡಮಟ್ಟದ ಸಾಧನೆ, ಎಂದು ತಿರುಗೇಟು ನೀಡಿದರು.

Vijaya Karnataka 7 Mar 2019, 3:09 pm
ಬೆಂಗಳೂರು/ಚಿಕ್ಕಮಗಳೂರು: ನರೇಂದ್ರ ಮೋದಿ ಮಾಡುವ ಸಂತೆ ಭಾಷಣಕ್ಕೆ ನಾನೇಕೆ ಉತ್ತರ ಕೊಡಲಿ? ಕಳೆದ ನಾಲ್ಕೂವರೆ ವರ್ಷದಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ಚರ್ಚೆಗೆ ಬರಲಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶೃಂಗೇರಿಯಲ್ಲಿ ಸವಾಲು ಹಾಕಿದರು.
Vijaya Karnataka Web cm


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ''ರಿಮೋಟ್‌ ಕಂಟ್ರೋಲ್‌ ಸಿಎಂ ಆಗಿಯೂ ನನ್ನದು 9 ತಿಂಗಳ ಅಧಿಕಾರಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ದೊಡ್ಡಮಟ್ಟದ ಸಾಧನೆ,'' ಎಂದು ತಿರುಗೇಟು ನೀಡಿದರು.

''ಪ್ರಧಾನಿ ಸ್ಥಾನದಲ್ಲಿ ಕುಳಿತು ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳುವವರು ದೇಶದಲ್ಲಿ ಮತ್ತೊಬ್ಬರು ಬರಲು ಸಾಧ್ಯವೇ ಇಲ್ಲ. ರಾಜ್ಯದ ರೈತರ ಸಾಲ ಮನ್ನಾ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಪದೇಪದೇ ಸುಳ್ಳು ಹೇಳಿಕೆ ಮೂಲಕ ಹುಡುಗಾಟಿಕೆ ಪ್ರದರ್ಶಿಸುತ್ತಿದ್ದಾರೆ. ಸಾಲ ಮನ್ನಾ ತೀರ್ಮಾನದಂತೆ ಈಗಾಗಲೇ ಸಹಕಾರಿ ಸಂಸ್ಥೆಗಳು ಮತ್ತು ವಾಣಿಜ್ಯ ಬ್ಯಾಂಕ್‌ಗಳಿಗೆ ಒಟ್ಟು 11,170 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಮೋದಿ ಅವರಿಗೆ ಮಾಹಿತಿ ಇಲ್ಲವಾದರೆ, ನಮ್ಮ ಅಧಿಕಾರಿಗಳನ್ನು ಕಳಿಸಿ ಪೂರ್ಣ ಒದಗಿಸುತ್ತೇನೆ. ಭೇಟಿಗೆ ಕಾಲಾವಕಾಶ ಕೊಡಲಿ. ಮೋದಿ ಅವರ ಸುಳ್ಳಿನ ಬಗ್ಗೆ ರಾಜ್ಯದ ಜನರೇ ಎಚ್ಚರ ವಹಿಸಬೇಕು'' ಎಂದು ಹೇಳಿದರು.

ರೈತರ ಖಾತೆಗಳಿಗೆ 2 ಸಾವಿರ ಹಣ ತುಂಬಲು ರಾಜ್ಯ ಸರಕಾರ ವಿವರ ಕೊಡುತ್ತಿಲ್ಲ ಎಂಬ ಪ್ರಧಾನಿ ಆಪಾದನೆಯನ್ನೂ ಸಿಎಂ ಅಲ್ಲಗಳೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌