ಭೋಪಾಲ್ : ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಲೋಕಸಭಾ ಚುನಾವಣಾ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಪರವಾಗಿ ಹಠಯೋಗ ಪೂಜೆ ನೆರವೇರಿಸಿ ಸುದ್ದಿಯಾಗಿದ್ದ ಕಂಪ್ಯೂಟರ್ ಬಾಬಾ ಅಲಿಯಾಸ್ ನಾಮದಾಸ್ ತ್ಯಾಗಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.
ಬಾಬಾ ವಿರುದ್ಧ ಬಿಜೆಪಿ ನಾಯಕರು ಸಲ್ಲಿಸಿದ್ದ ದೂರು ಆಧರಿಸಿ ಜಿಲ್ಲಾಧಿಕಾರಿ ಸುಧಾಮ್ ಖಾಡೆ ತನಿಖೆ ನಡೆಸಿದ್ದರು. ವಿಶೇಷ ಪೂಜೆ ನಡೆಸಲು ಬಾಬಾ ಅನುಮತಿ ಪಡೆದಿದ್ದರೆ. ಅದರ ಖರ್ಚು ವೆಚ್ಚಗಳನ್ನು ಯಾರು ಹೊತ್ತಿದ್ದರು ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗಿತ್ತು. ಚುನಾವಣಾ ಆಯೋಗದಿಂದ ಈ ಕುರಿತು ಮಾಹಿತಿ ನೀಡುವಂತೆ ಕಂಪ್ಯೂಟರ್ ಬಾಬಾಗೆ ನೋಟಿಸ್ ಕೂಡ ನೀಡಲಾಗಿತ್ತು. ಇವೆಲ್ಲವನ್ನು ಆಧರಿಸಿ ಜಿಲ್ಲಾ ಚುನಾವಣಾ ಆಯುಕ್ತ ಬಾಬಾ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ವಿಶೇಷ ಪೂಜೆಯಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಅವರ ಪತ್ನಿ ಕೂಡ ಭಾಗವಹಿಸಿದ್ದರು. ಅವರ ಪಾತ್ರದ ಕುರಿತು ಕೂಡ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಆಡಳಿದಲ್ಲಿ ಕಂಪ್ಯೂಟರ್ ಬಾಬಾಗೆ ಸಂಪುಟ ಸಚಿವರ ಸ್ಥಾನಮಾನ ನೀಡಲಾಗಿತ್ತು. ಆದರೆ ಲೋಕÓಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಕಂಪ್ಯೂಟರ್ ಬಾಬಾ ಬಂಡಾಯವೆದ್ದು ದಿಗ್ವಿಜಯ್ ಸಿಂಗ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.
ಬಾಬಾ ವಿರುದ್ಧ ಬಿಜೆಪಿ ನಾಯಕರು ಸಲ್ಲಿಸಿದ್ದ ದೂರು ಆಧರಿಸಿ ಜಿಲ್ಲಾಧಿಕಾರಿ ಸುಧಾಮ್ ಖಾಡೆ ತನಿಖೆ ನಡೆಸಿದ್ದರು. ವಿಶೇಷ ಪೂಜೆ ನಡೆಸಲು ಬಾಬಾ ಅನುಮತಿ ಪಡೆದಿದ್ದರೆ. ಅದರ ಖರ್ಚು ವೆಚ್ಚಗಳನ್ನು ಯಾರು ಹೊತ್ತಿದ್ದರು ಎಂಬ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗಿತ್ತು. ಚುನಾವಣಾ ಆಯೋಗದಿಂದ ಈ ಕುರಿತು ಮಾಹಿತಿ ನೀಡುವಂತೆ ಕಂಪ್ಯೂಟರ್ ಬಾಬಾಗೆ ನೋಟಿಸ್ ಕೂಡ ನೀಡಲಾಗಿತ್ತು. ಇವೆಲ್ಲವನ್ನು ಆಧರಿಸಿ ಜಿಲ್ಲಾ ಚುನಾವಣಾ ಆಯುಕ್ತ ಬಾಬಾ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ವಿಶೇಷ ಪೂಜೆಯಲ್ಲಿ ದಿಗ್ವಿಜಯ್ ಸಿಂಗ್ ಮತ್ತು ಅವರ ಪತ್ನಿ ಕೂಡ ಭಾಗವಹಿಸಿದ್ದರು. ಅವರ ಪಾತ್ರದ ಕುರಿತು ಕೂಡ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಹಿಂದಿನ ಶಿವರಾಜ್ ಸಿಂಗ್ ಚೌಹಾಣ್ ಆಡಳಿದಲ್ಲಿ ಕಂಪ್ಯೂಟರ್ ಬಾಬಾಗೆ ಸಂಪುಟ ಸಚಿವರ ಸ್ಥಾನಮಾನ ನೀಡಲಾಗಿತ್ತು. ಆದರೆ ಲೋಕÓಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಕಂಪ್ಯೂಟರ್ ಬಾಬಾ ಬಂಡಾಯವೆದ್ದು ದಿಗ್ವಿಜಯ್ ಸಿಂಗ್ ಪಾಳಯದಲ್ಲಿ ಕಾಣಿಸಿಕೊಂಡಿದ್ದರು.