ಆ್ಯಪ್ನಗರ

ಚೌಕಿದಾರ ಪದ ಬಿಟ್ಟು ಮೋದಿ ಟೀಕಿಸಿದ ರಾಹುಲ್‌

ರಾಹುಲ್‌ ಗಾಂಧಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

Vijaya Karnataka 18 Apr 2019, 5:00 am
ಸುಲ್ತಾನ್‌ಬತೇರಿ/ವಯನಾಡ್‌: ಕೇರಳದ ವಯನಾಡ್‌, ಸುಲ್ತಾನ್‌ಬತೇರಿ, ಕಣ್ಣೂರಿನಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ರಾಹುಲ್‌ ಗಾಂಧಿ ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.
Vijaya Karnataka Web congress chief rahul gandhi lashed out at prime minister narendra modi
ಚೌಕಿದಾರ ಪದ ಬಿಟ್ಟು ಮೋದಿ ಟೀಕಿಸಿದ ರಾಹುಲ್‌


'ಚೌಕಿದಾರ್‌ ಚೋರ್‌ ಹೈ' ಪದ ಬಳಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಿಂದ ತರಾಟೆಗೆ ಒಳಗಾದ ನಂತರ ಎಚ್ಚೆತ್ತುಕೊಂಡಿರುವ ಅವರು ಈ ಪದ ಪ್ರಯೋಗ ನಡೆಸದೇ ''ನಾನು 'ಮನ್‌ ಕಿ ಬಾತ್‌' ಹೇಳಲು ಇಲ್ಲಿಗೆ ಬಂದಿಲ್ಲ. ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಸುಳ್ಳು ಆಶ್ವಾಸನೆ ಕೊಡುವುದಿಲ್ಲ. 15 ಲಕ್ಷ ರೂ.ವನ್ನು ನಿಮ್ಮ ಬ್ಯಾಂಕ್‌ ಖಾತೆಗೆ ಕಳುಹಿಸುತ್ತೇನೆ ಎಂದು ಹೇಳುವುದಿಲ್ಲ. ನಾನು ನಿಮ್ಮೆಲ್ಲರ ಧ್ವನಿಯಾಗಲು ಇಲ್ಲಿಗೆ ಬಂದಿದ್ದೇನೆ,'' ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೋದಿ ಅವರನ್ನು ಟೀಕಿಸಿದರು. ''ಆರೆಸ್ಸೆಸ್‌-ಬಿಜೆಪಿಯು ಸಮುದಾಯಗಳ ಮಧ್ಯೆ ಬಿರುಕು ಹುಟ್ಟಿಸುತ್ತಿದ್ದು, ಇವೆರಡರಿಂದಲೂ ದೇಶವನ್ನು ರಕ್ಷಿಸಬೇಕಿದೆ,'' ಎಂದರು.

ಇದೇ ವೇಳೆ, ತಂದೆ ರಾಜೀವ್‌ ಗಾಂಧಿ ಅವರ ಚಿತಾಭಸ್ಮ ವಿಸರ್ಜಿಸಿದ ಪಾಪನಾಶಿನಿ ನದಿ ತಟಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌