ಆ್ಯಪ್ನಗರ

ಕಾಂಗ್ರೆಸ್‌ ಗೆದ್ದ ಕೂಡಲೇ ಬಿಜೆಪಿ ತಡೆಹಿಡಿದ ಯೋಜನೆಗಳ ಜಾರಿ

ಬಿಜೆಪಿ ಸುಳ್ಳುಗಳ ಕಾರ್ಖಾನೆಯನ್ನೇ ಇಟ್ಟಿದೆ. ಮತದಾರರನ್ನು ಸೆಳೆಯಲು ಹಣದ ಹೊಳೆಯನ್ನೇ ಹರಿಸುತ್ತಿದೆ. ಆದರೆ, ಅಮೇಠಿಯ ಶಕ್ತಿ ಇರುವುದು ಪ್ರಾಮಾಣಿಕತೆ, ಸರಳತೆ ಮತ್ತು ಏಕತೆಯಲ್ಲಿಎಂದು ರಾಹುಲ್‌ ಪತ್ರದಲ್ಲಿ ಹೇಳಿದ್ದಾರೆ.

Vijaya Karnataka 4 May 2019, 5:00 am
ಹೊಸದಿಲ್ಲಿ: 'ಅಮೇಠಿಯ ನನ್ನ ಪರಿವಾರದ ಜನರೇ... ಕೇಂದ್ರದಲ್ಲಿ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಈ ಪ್ರದೇಶದ ಎಲ್ಲ ಯೋಜನೆಗಳ ಅನುಷ್ಠಾನ ಮಾಡುತ್ತೇನೆ, ನನ್ನನ್ನು ಮರು ಆಯ್ಕೆ ಮಾಡಿ,'' ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕ್ಷೇತ್ರದ ಮತದಾರರಿಗೆ ಭಾವುಕ ಪತ್ರ ಬರೆದಿದ್ದಾರೆ.
Vijaya Karnataka Web raga


''ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆಯೇ, ಬಿಜೆಪಿ ತಡೆ ಹಿಡಿದ ಎಲ್ಲ ಯೋಜನೆಗಳನ್ನು ಜಾರಿಗೆ ತರಲಾಗುವುದು. ಹಾಗಾಗಿ, ನಿಮ್ಮ ಕುಟುಂಬದ ಸದಸ್ಯನನ್ನು ಮತ್ತೆ ಆರಿಸುವುದಕ್ಕಾಗಿ ಮೇ 6ರಂದು ದೊಡ್ಡ ಪ್ರಮಾಣದಲ್ಲಿ ಮತದಾನ ಮಾಡಿ,'' ಎಂದು ರಾಹುಲ್‌ ಹೇಳಿದ್ದಾರೆ. ಈ ಚುನಾವಣೆಯಲ್ಲಿ ರಾಹುಲ್‌ ಅವರು ಅಮೇಠಿಯಲ್ಲಿ ಕಾಣಿಸಿಕೊಂಡಿದ್ದೇ ಕಡಿಮೆ. ಅವರ ಬದಲಾಗಿ, ಪ್ರಿಯಾಂಕಾ ವಾದ್ರಾ ಅವರು ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿದ್ದರು.

''ಬಿಜೆಪಿ ಸುಳ್ಳುಗಳ ಕಾರ್ಖಾನೆಯನ್ನೇ ಇಟ್ಟಿದೆ. ಮತದಾರರನ್ನು ಸೆಳೆಯಲು ಹಣದ ಹೊಳೆಯನ್ನೇ ಹರಿಸುತ್ತಿದೆ. ಆದರೆ, ಅಮೇಠಿಯ ಶಕ್ತಿ ಇರುವುದು ಪ್ರಾಮಾಣಿಕತೆ, ಸರಳತೆ ಮತ್ತು ಏಕತೆಯಲ್ಲಿ,'' ಎಂದು ರಾಹುಲ್‌ ಪತ್ರದಲ್ಲಿ ಹೇಳಿದ್ದಾರೆ.


ಅಮೇಠಿಯ ನನ್ನ ಜನ ಸತ್ಯದ ಜತೆಗೆ ನಿಲ್ಲುವ ಧೈರ್ಯವನ್ನು ನೀಡಿದ್ದಾರೆ. ಬಡವರು ಮತ್ತು ದುರ್ಬಲರ ನೋವನ್ನು ಆಲಿಸಲು, ಅವರ ನೋವುಗಳಿಗೆ ಧ್ವನಿಯಾಗಲು, ಎಲ್ಲರಿಗೂ ಸಮಾನ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಧೈರ್ಯ ತುಂಬಿದ್ದಾರೆ.

- ರಾಹುಲ್‌ ಗಾಂಧಿ (ಪತ್ರದಲ್ಲಿ)


ಕ್ಷೇತ್ರದ ಮತದಾರರಿಗೆ ಪತ್ರ ಬರೆಯುವ ಮೂಲಕ ತಾವು ಅಮೇಠಿಯನ್ನು ನಿರ್ಲಕ್ಷ್ಯಿಸಿರುವ ಸಂಗತಿಯನ್ನು ರಾಹುಲ್‌ ಗಾಂಧಿ ಒಪ್ಪಿಕೊಂಡಿದ್ದಾರೆ. ಹೀಗಾಗಿಯೇ ಕ್ಷೇತ್ರಕ್ಕೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ.

- ಸ್ಮೃತಿ ಇರಾನಿ, ಬಿಜೆಪಿ ಅಭ್ಯರ್ಥಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌