ಆ್ಯಪ್ನಗರ

ಪ್ರತಿಪಕ್ಷಗಳ ಅವಕಾಶಗಳನ್ನೆಲ್ಲ ಹಾಳುಗೆಡಹುತ್ತಿರುವ ಕಾಂಗ್ರೆಸ್: ಕೇಜ್ರಿವಾಲ್ ದೂಷಣೆ

ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್ಪಿ ಮೈತ್ರಿಕೂಟ, ಕೇರಳದಲ್ಲಿ ಎಡರಂಗ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಆಮ್‌ ಆದ್ಮಿ ಪಾರ್ಟಿಗಳಿಗೆ ರಾಹುಲ್ ಗಾಂಧಿ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ದೂಷಿಸಿದರು.

Vijaya Karnataka Web 10 May 2019, 3:32 pm
ಹೊಸದಿಲ್ಲಿ: ನರೇಂದ್ರ ಮೋದಿ ಅವರೇ ಮರಳಿ ಅಧಿಕಾರಕ್ಕೆ ಬಂದರೆ ಅದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯೇ ಹೊಣೆಯಾಗುತ್ತಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದರು.
Vijaya Karnataka Web Rahul Gandhi- Kejriwal


ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್ಪಿ ಮೈತ್ರಿಕೂಟ, ಕೇರಳದಲ್ಲಿ ಎಡರಂಗ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಆಮ್‌ ಆದ್ಮಿ ಪಾರ್ಟಿಗಳಿಗೆ ರಾಹುಲ್ ಗಾಂಧಿ ಹಾನಿ ಉಂಟುಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ದೂಷಿಸಿದರು.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಈ ಆರೋಪ ಮಾಡಿದರು. ದಿಲ್ಲಿಯಲ್ಲಿ ಕಾಂಗ್ರೆಸ್-ಆಪ್ ಮೈತ್ರಿ ಏರ್ಪಡದ ಹಿನ್ನೆಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

'ಉತ್ತರಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟಕ್ಕೆ ಕಾಂಗ್ರೆಸ್ ಹಾನಿ ಎಸಗುತ್ತಿದೆ. ಕೇರಳದಲ್ಲಿ ಎಡರಂಗ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಆಂಧ್ರದಲ್ಲಿ ಟಿಡಿಪಿ ಮತ್ತು ದಿಲ್ಲಿಯಲ್ಲಿ ಆಪ್‌ಗೆ ಕಾಂಗ್ರೆಸ್ ನಷ್ಟ ಉಂಟುಮಾಡುತ್ತಿದೆ. ಒಂದು ವೇಳೆ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿ ಒಬ್ಬರೇ ಅದಕ್ಕೆ ಹೊಣೆಯಾಗುತ್ತಾರೆ' ಎಂದು ಕೇಜ್ರಿವಾಲ್ ಹೇಳಿದರು.

'ಕಾಂಗ್ರೆಸ್ ಪಕ್ಷ ವಿರೋಧ ಪಕ್ಷಗಳ ವಿರುದ್ಧವೇ ಹೋರಾಡುತ್ತಿದೆ. ಬಿಜೆಪಿ ವಿರುದ್ಧ ಅದು ಸೆಣಸುತ್ತಿಲ್ಲ. ನಮ್ಮ ಎಲ್ಲಾ ಆಟವನ್ನೂ ಕಾಂಗ್ರೆಸ್ ಹಾಳುಗೆಡಹುತ್ತಿದೆ' ಎಂದು ಟೀಕಿಸಿದರು.

'ಪ್ರಧಾನಿ ಮೋದಿ ಎಲ್ಲ ರಂಗಗಳಲ್ಲೂ ವಿಫಲರಾಗಿದ್ದಾರೆ. ನಕಲಿ ರಾಷ್ಟ್ರೀಯತಾವಾದದ ಮೂಲಕ ಮತ್ತೆ ಗೆಲ್ಲಲು ಹೊರಟಿದ್ದಾರೆ. ಮೋದೀಜಿ ದೇಶಪ್ರೇಮ ಅಪಾಯಕಾರಿ' ಎಂದು ಆಪ್ ವರಿಷ್ಠ ಆರೋಪಿಸಿದರು.

'ಒಂದು ತಿಂಗಳ ಹಿಂದೆ ಬಿಜೆಪಿ ನಮಗೆ ತೀವ್ರ ಸೆಣಸಾಟ ನೀಡಬಹುದು ಎಂದುಕೊಂಡಿದ್ದೆವು. ಆದರೆ ಕಳೆದ 10 ದಿನಗಳಿಂದ ರಾಜಕೀಯ ಪರಿಸ್ಥಿತಿಯೇ ಬೇರೆಯಾಗಿದೆ. 2015ರ ವಿಧಾನಸಭೆ ಚುನಾವಣೆ ಫಲಿತಾಂಶದಂತೆ ದಿಲ್ಲಿಯ ಏಳೂ ಲೋಕಸಭೆ ಸ್ಥಾನಗಳಲ್ಲಿ ನಾವೇ ಗದ್ದರೂ ಅಚ್ಚರಿಯಿಲ್ಲ' ಎಂದು ಕೇಜ್ರಿವಾಲ್ ಹೇಳಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌