ಆ್ಯಪ್ನಗರ

ಬಿಜೆಪಿಗೆ ವೋಟು ಹಾಕದವರು ಸುಶಿಕ್ಷಿತರು, ಉಳಿದವರು ಅಂಧ ಭಕ್ತರು ಎಂದ ಕಾಂಗ್ರೆಸ್ ಸಂಸದ

ಮತ್ತೆ ರಾಜಕೀಯ ನಾಯಕರು ತಮ್ಮ ಅಭಿಪ್ರಾಯಗಳನ್ನು ತುಸು ಖಾರವಾಗಿಯೇ ಬಹಿರಂಗಪಡಿಸುತ್ತಿದ್ದಾರೆ.

Vijaya Karnataka Web 20 May 2019, 4:32 pm
ಹೊಸದಿಲ್ಲಿ: ಲೋಕಸಭಾ ಚುನಾವಣೆ ಮುಗಿದರೂ ರಾಜಕೀಯ ನಾಯಕರ ವಾದ-ಪ್ರತಿವಾದಗಳು ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ.
Vijaya Karnataka Web ಉದಿತ್‌ ರಾಜ್‌ ಟ್ವೀಟ್‌
ಉದಿತ್‌ ರಾಜ್‌ ಟ್ವೀಟ್‌


ಚುನಾವಣೆ ಪ್ರಚಾರ ಸಂದರ್ಭದಲ್ಲಿ ರಾಜಕೀಯ ನಾಯಕರ ನಾಲಗೆ ತೀರಾ ಹರಿದಾಡಿತ್ತು. ಈಗ ಚುನಾವಣೆ ಮುಗಿದು ಮತಗಟ್ಟೆ ಸಮೀಕ್ಷೆಗಳ ಪ್ರಕಟವಾಗಿವೆ.

ಈ ಹಂತದಲ್ಲಿ ಮತ್ತೆ ರಾಜಕೀಯ ನಾಯಕರು ತಮ್ಮ ಮನದಾಳದ ಇಂಗಿತವನ್ನು ತುಸು ಹೆಚ್ಚಾಗಿಯೇ ಬಹಿರಂಗಪಡಿಸುತ್ತಿದ್ದಾರೆ.

ಈ ಪೈಕಿ ಕಾಂಗ್ರೆಸ್‌ ಸಂಸದ ಡಾ. ಉದಿತ್‌ ರಾಜ್‌ ಜನರನ್ನು ಹೀಗಳೆದಿದ್ದಾರೆ.


ಕೇರಳದಲ್ಲಿ ಇದುವರೆಗೂ ಬಿಜೆಪಿ ಒಂದೇ ಒಂದು ಸ್ಥಾನ ಗೆದ್ದಿಲ್ಲ. ಏಕೆಂದರೆ ಅಲ್ಲಿರುವ ಜನರೆಲ್ಲ ಸುಶಿಕ್ಷಿತರು ಎಂದು ಟ್ವೀಟರ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂದರೆ ಬಿಜೆಪಿಗೆ ವೋಟು ಹಾಕಿ ಗೆಲ್ಲಿಸುವ ವರು ಅಂಧ ಭಕ್ತರು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.

ಡಾ. ಉದಿತ್ ತ್ಯಾಗಿ ಅವರ ಈ ವಿವಾದಾತ್ಮಕ ಟ್ವೀಟ್‌ ಸಂದೇಶಕ್ಕೆ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌