ವಿಕ ಸುದ್ದಿಲೋಕ ಬೆಂಗಳೂರು
ಮೋದಿ ಸರಕಾರದ ವೈಫಲ್ಯ ಹಾಗೂ ಯುಪಿಎ ಸಾಧನೆ ಬಿಂಬಿಸಲು ಕಾಂಗ್ರೆಸ್ ವಕ್ತಾರರಿಗೆ ಅನುಕೂಲವಾಗುವ ಕೈಪಿಡಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.
ಕೆಪಿಸಿಸಿ ಸಂಶೋಧನಾ ವಿಭಾಗ ಈ ಕೈಪಿಡಿಯನ್ನು ಹೊರತಂದಿದೆ. 'ದ್ವೇಷ ಬಿತ್ತಿದ ಬಿಜೆಪಿ ಹಾಗೂ ದೇಶ ಕಟ್ಟಿದ ಕಾಂಗ್ರೆಸ್' ಎಂಬ ಶೀರ್ಷಿಕೆಯನ್ನು ಈ ಕೈಪಿಡಿಯ ಮುಖಪುಟದಲ್ಲಿ ಮುದ್ರಿಸಲಾಗಿದೆ.
ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ''ಈ ಕೈಪಿಡಿಯಲ್ಲಿ ನಮ್ಮ ವಕ್ತಾರರು ಮಾತನಾಡಲು ಅಗತ್ಯವಾದ ಅಂಕಿ, ಅಂಶಗಳಿವೆ. ವಾಸ್ತವಾಂಶ ತಿಳಿದುಕೊಳ್ಳಲು ಮಾಧ್ಯಮಗಳಿಗೂ ಇದು ಸಹಾಯಕ್ಕೆ ಬರುತ್ತದೆ. 5 ವರ್ಷದಲ್ಲಿ ಮೋದಿ ಸರಕಾರ ಹೇಗೆ ಎಡವಿತು, 2009 ರಿಂದ 2014ರ ವರೆಗೆ ಯುಪಿಎ ಕೊಡುಗೆಯೇನು ಎಂಬ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪರ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿಯಿದೆ. ಕಾಂಗ್ರೆಸ್ನ ಈ ಸಾಧನೆಗಳಿಗೆ ಹೋಲಿಸಿ ನೋಡಿದಾಗ ಮೋದಿ ಸರಕಾರಕ್ಕೆ ಬದ್ಧತೆಯೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ,'' ಎಂದು ಆರೋಪಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ಮನ್ಸೂರ್ ಅಲಿಖಾನ್, ಸಂಸದ ವಿ.ಎಸ್.ಉಗ್ರಪ್ಪ, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಮತ್ತಿತರರು ಭಾಗಿಯಾಗಿದ್ದರು.
ಮೋದಿ ಸರಕಾರದ ವೈಫಲ್ಯ ಹಾಗೂ ಯುಪಿಎ ಸಾಧನೆ ಬಿಂಬಿಸಲು ಕಾಂಗ್ರೆಸ್ ವಕ್ತಾರರಿಗೆ ಅನುಕೂಲವಾಗುವ ಕೈಪಿಡಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ಕಚೇರಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.
ಕೆಪಿಸಿಸಿ ಸಂಶೋಧನಾ ವಿಭಾಗ ಈ ಕೈಪಿಡಿಯನ್ನು ಹೊರತಂದಿದೆ. 'ದ್ವೇಷ ಬಿತ್ತಿದ ಬಿಜೆಪಿ ಹಾಗೂ ದೇಶ ಕಟ್ಟಿದ ಕಾಂಗ್ರೆಸ್' ಎಂಬ ಶೀರ್ಷಿಕೆಯನ್ನು ಈ ಕೈಪಿಡಿಯ ಮುಖಪುಟದಲ್ಲಿ ಮುದ್ರಿಸಲಾಗಿದೆ.
ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ''ಈ ಕೈಪಿಡಿಯಲ್ಲಿ ನಮ್ಮ ವಕ್ತಾರರು ಮಾತನಾಡಲು ಅಗತ್ಯವಾದ ಅಂಕಿ, ಅಂಶಗಳಿವೆ. ವಾಸ್ತವಾಂಶ ತಿಳಿದುಕೊಳ್ಳಲು ಮಾಧ್ಯಮಗಳಿಗೂ ಇದು ಸಹಾಯಕ್ಕೆ ಬರುತ್ತದೆ. 5 ವರ್ಷದಲ್ಲಿ ಮೋದಿ ಸರಕಾರ ಹೇಗೆ ಎಡವಿತು, 2009 ರಿಂದ 2014ರ ವರೆಗೆ ಯುಪಿಎ ಕೊಡುಗೆಯೇನು ಎಂಬ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನಪರ ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿಯಿದೆ. ಕಾಂಗ್ರೆಸ್ನ ಈ ಸಾಧನೆಗಳಿಗೆ ಹೋಲಿಸಿ ನೋಡಿದಾಗ ಮೋದಿ ಸರಕಾರಕ್ಕೆ ಬದ್ಧತೆಯೇ ಇಲ್ಲವೆಂಬುದು ಸ್ಪಷ್ಟವಾಗುತ್ತದೆ,'' ಎಂದು ಆರೋಪಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ ಮನ್ಸೂರ್ ಅಲಿಖಾನ್, ಸಂಸದ ವಿ.ಎಸ್.ಉಗ್ರಪ್ಪ, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ ಮತ್ತಿತರರು ಭಾಗಿಯಾಗಿದ್ದರು.