ಆ್ಯಪ್ನಗರ

ಬಡತನದ ವಿರುದ್ಧ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ : ರಾಹುಲ್

ರಾಜಸ್ಥಾನದ ಸೂರತ್‌ಗಢದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು, ನಾವು ಆಡಳಿತಕ್ಕೇರಿದರೆ ಶೇ. 20ರಷ್ಟು ಕುಟುಂಬಗಳಿಗೆ ಕನಿಷ್ಠ ವರಮಾನ ಗ್ಯಾರಂಟಿ ಯೋಜನೆಯೊಂದನ್ನು ಘೋಷಿಸಲಿದ್ದೇವೆ. ನಿಮ್ಮ ಕೂಲಿಗೆ ಮತ್ತು ಉತ್ಪನ್ನಕ್ಕೆ ಸೂಕ್ತ ಬೆಲೆ ದೊರೆಯಲಿದೆ. ಬಡತನವನ್ನು ಹೇಗೆ ನಿರ್ಮೂಲನೆಗೊಳಿಸುವುದೆಂದು ನಾವು ಕಳೆದ 6 ತಿಂಗಳಿಂದ ಯೋಜನೆ ರೂಪಿಸುತ್ತಿದ್ದೇವೆ ಎಂದರು.

TIMESOFINDIA.COM 26 Mar 2019, 4:26 pm
ಜೈಪುರ್: ಕಾಂಗ್ರೆಸ್ ಬಡತನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲಿದ್ದು, ದೇಶದಲ್ಲಿ ಬಡತನ ನಿರ್ಮೂಲನೆಯಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾನ ಮಾಡಿದ್ದಾರೆ.
Vijaya Karnataka Web Rahul Gandhi 1


ರಾಜಸ್ಥಾನದ ಸೂರತ್‌ಗಢದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ಅವರು, ನಾವು ಆಡಳಿತಕ್ಕೇರಿದರೆ ಶೇ. 20ರಷ್ಟು ಕುಟುಂಬಗಳಿಗೆ ಕನಿಷ್ಠ ವರಮಾನ ಗ್ಯಾರಂಟಿ ಯೋಜನೆಯೊಂದನ್ನು ಘೋಷಿಸಲಿದ್ದೇವೆ. ನಿಮ್ಮ ಕೂಲಿಗೆ ಮತ್ತು ಉತ್ಪನ್ನಕ್ಕೆ ಸೂಕ್ತ ಬೆಲೆ ದೊರೆಯಲಿದೆ. ಬಡತನವನ್ನು ಹೇಗೆ ನಿರ್ಮೂಲನೆಗೊಳಿಸುವುದೆಂದು ನಾವು ಕಳೆದ 6 ತಿಂಗಳಿಂದ ಯೋಜನೆ ರೂಪಿಸುತ್ತಿದ್ದೇವೆ ಎಂದರು.

ದೇಶದಿಂದ ಬಡತನವನ್ನು ಕಿತ್ತೊಗೆಯುತ್ತೇವೆ. ದೇಶದಲ್ಲಿ ಒಬ್ಬನೇ ಒಬ್ಬ ಬಡ ವ್ಯಕ್ತಿ ಇರಲಾರ. ಇದು ಧಮಾಕಾ. ಇತಿಹಾಸದಲ್ಲಿ ಯಾವುದೇ ದೇಶ ಇದನ್ನು ಮಾಡಿದ ಉದಾಹರಣೆ ಇರಲಾರದು. ನಾವದನ್ನು ಮಾಡಿ ತೋರಿಸಲಿದ್ದೇವೆ ಎಂದು ರಾಹುಲ್ ಹೇಳಿದ್ದಾರೆ.

ಪ್ರಧಾನಿ ವಿರುದ್ಧ ಹರಿಹಾಯ್ದ ಅವರು, ಮೋದಿ ಕಪ್ಪು ಹಣ ಇದ್ದವರಿಗೆ ಸಹಾಯ ಮಾಡಿದರು. ಅವರ ಆಡಳಿತದಲ್ಲಿ ಕೇವಲ ಬಡವರು ಮಾತ್ರ ಕನಸು ಕಾಣಬಹುದು. ಯುಪಿಎ ಸರಕಾರ ಬಡತನದಿಂದ ಮೇಲಕ್ಕೆತ್ತಿದವರನ್ನೆಲ್ಲ ಕಳೆದ 5 ವರ್ಷಗಳಲ್ಲಿ ಮತ್ತೆ ಬಡತನಕ್ಕೆ ನೂಕಲಾಗಿದೆ ಎಂದವರು ದೂರಿದ್ದಾರೆ. ಅವರ ಪ್ರಕಾರ ಕೈ ನೇತೃತ್ವದ ಸರಕಾರ 14 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿತ್ತು. ಮತ್ತೀಗ ಅವರೆಲ್ಲ ಬಡವರಾಗಿದ್ದಾರೆ.

ಅವರು ಶ್ರೀಮಂತರಿಗೆ ಹಣ ನೀಡುತ್ತಾರೆ, ಕಾಂಗ್ರೆಸ್ ಬಡವರಿಗೆ ನೀಡಲಿದೆ. ಈಗಲೂ ದೇಶದಲ್ಲಿ 25 ಕೋಟಿ ಬಡವರರಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ರಾಹುಲ್ ಕಿಡಿಕಾರಿದ್ದಾರೆ.

ಬಡತನ ನಿರ್ಮೂಲನೆ ಮಾಡುವ ದಿಶೆಯಲ್ಲಿ ಯುಪಿಎ ಸರಕಾರ 10ವರ್ಷಗಳಿಗಾಗಿ ಯೋಜನೆಯನ್ನು ಜಾರಿ ಮಾಡಿತ್ತು. ಆದರೆ ಮೋದಿ ಸರಕಾರ ಅದಕ್ಕೆ ಅಂತ್ಯ ಹಾಡಿತು. ನರೇಗಾ ಯೋಜನೆಯನ್ನು ಅರಿತುಕೊಳ್ಳಲು ಮೋದಿ ವಿಫಲರಾದರು ಎಂದವರು ಹರಿಹಾಯ್ದಿದ್ದಾರೆ.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಲಿದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ.

ಮೋದಿ ನಿಜಕ್ಕೂ ಚೌಕಿದಾರ್ , ಆದರೆ ಉದ್ಯೋಗಪತಿ ಅಂಬಾನಿಗೆ ಮಾತ್ರ ಎಂದವರು ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌