ಆ್ಯಪ್ನಗರ

ಫಲಿತಾಂಶಕ್ಕೂ ಮೊದಲು ವಿವಿಪ್ಯಾಟ್‌ ಪೇಪರ್ ಲೆಕ್ಕ ಹಾಕುವಂತೆ ಕಾಂಗ್ರೆಸ್‌ ಒತ್ತಾಯ

ವಿಪಕ್ಷಗಳು ಚುನಾವಣೆ ಫಲಿತಾಂಶ ಘೋಷಿಸುವ ಮೊದಲೇ ವಿವಪ್ಯಾಟ್‌ ಪೇಪರ್‌ಗಳನ್ನು ಲೆಕ್ಕ ಹಾಕಿ ತಾಳೆ ಮಾಡಬೇಕು ಎಂದು ವಿಪಕ್ಷಗಳು ಒತ್ತಾಯ ಪಡಿಸುತ್ತಿವೆ.

Vijaya Karnataka Web 22 May 2019, 1:04 pm
ಬೆಂಗಳೂರು: ಲೋಕಸಭೆ ಚುನಾವಣೆ 2019ರ ನ್ಯಾಯೋಚಿತ ಫಲಿತಾಂಶಕ್ಕಾಗಿ ಇವಿಎಂ ಜತೆಗೇ ವಿವಿಪ್ಯಾಟ್‌ ಪೇಪರ್‌ಗಳನ್ನು ಲೆಕ್ಕ ಹಾಕಬೇಕು ಎಂದು ಕಾಂಗ್ರೆಸ್‌ ಒತ್ತಾಯ ಮಾಡಿದೆ.
Vijaya Karnataka Web Kapil Sibal


ಇವಿಎಂಗೆ ಸಂಬಂಧಿಸಿದ ವಿವಾದವು ವಿರೋಧ ಮಾಡುವಂತದ್ದಲ್ಲ. ಇದು ಎನ್‌ಡಿಎ ವರ್ಸಸ್‌ ವಿಪಕ್ಷಗಳು ಎಂದಲ್ಲ. ಇದು ಚುನಾವಣೆಯ ಕಾರ್ಯವೈಖರಿಯ ಸಮಗ್ರತೆಯನ್ನು ಅರ್ಥೈಸುವುದಾಗಿದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಕಪಿಲ್‌ ಸಿಬಲ್‌ ಟ್ವೀಟ್‌ ಮಾಡಿದ್ದಾರೆ.

ಇವಿಎಂ ವಿವಾದದ ಬಗ್ಗೆ ಸುಪ್ರೀಂ ಕೋರ್ಟ್‌, ಚುನಾವಣೆ ಆಯೋಗ, ಕೇಂದ್ರ ಸರಕಾರ ಯಾವುದೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದಿರುವ ಕಪಿಲ್‌ ಸಿಬಲ್‌, ನ್ಯಾಯೋಚಿತ ಚುನಾವಣೆ ಫಲಿತಾಂಶಕ್ಕೆ ವಿವಿಪ್ಯಾಟ್‌ ಪೇಪರ್‌ಗಳನ್ನು ಲೆಕ್ಕ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ಇವಿಎಂ ಲೆಕ್ಕ ಹಾಕಿದ ನಂತರ ವಿವಿಪ್ಯಾಟ್‌ ಪೇಪರ್‌ಗಳನ್ನು ಲೆಕ್ಕ ಹಾಕುವುದಾಗಿ ಚುನಾವಣೆ ಆಯೋಗ ಹೇಳಿದೆ. ಆದರೆ ವಿಪಕ್ಷಗಳು ಚುನಾವಣೆ ಫಲಿತಾಂಶ ಘೋಷಿಸುವ ಮೊದಲೇ ವಿವಪ್ಯಾಟ್‌ ಪೇಪರ್‌ಗಳನ್ನು ಲೆಕ್ಕ ಹಾಕಿ ತಾಳೆ ಮಾಡಬೇಕು ಎಂದು ವಿಪಕ್ಷಗಳು ಒತ್ತಾಯ ಪಡಿಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌