ಆ್ಯಪ್ನಗರ

ಪೊಲೀಸರಿಗೆ ಕೇಸರಿ ಶಾಲು ಹಾಕಿಸಿದ ದಿಗ್ವಿಜಯ್‌!

ರೋಡ್‌ ಶೋ ವಿಡಿಯೊ ವೈರಲ್‌ ಆಗಿದ್ದು, ಹಿಂದು ಮತಗಳನ್ನು ಸೆಳೆಯಲು ಕೇಸರಿ ಶಾಲುಗಳನ್ನು ದಿಗ್ವಿಜಯ್‌ ಹಂಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Vijaya Karnataka 9 May 2019, 5:00 am
ಭೋಪಾಲ್‌: ಕಾಂಗ್ರೆಸ್‌ ಹಿರಿಯ ನಾಯಕ ಹಾಗೂ ಲೋಕಸಭಾ ಚುನಾವಣಾ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಬುಧವಾರ ನಡೆಸಿದ ರೋಡ್‌ಶೋ ವೇಳೆ ಭದ್ರತೆಗೆ ನಿಯೋಜಿತರಾಗಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಗೆ ಕೇಸರಿ ಶಾಲು ಹಾಕಿಸಿ, ರಾರ‍ಯಲಿಯಲ್ಲಿ ಶಾಮೀಲು ಮಾಡಿಕೊಳ್ಳಲು ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತಾದ ರೋಡ್‌ ಶೋ ವಿಡಿಯೊ ವೈರಲ್‌ ಆಗಿದ್ದು, ಹಿಂದು ಮತಗಳನ್ನು ಸೆಳೆಯಲು ಕೇಸರಿ ಶಾಲುಗಳನ್ನು ದಿಗ್ವಿಜಯ್‌ ಹಂಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
Vijaya Karnataka Web 785444-digy-use


ರಾರ‍ಯಲಿ ವೇಳೆ ಕೇಸರಿ ಶಾಲು ಹಾಕಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿಯನ್ನು ಮಾಧ್ಯಮದವರು ಮಾತನಾಡಿಸಿದಾಗ, ಕಾರ್ಯಕರ್ತರ ಒತ್ತಾಯದಿಂದಾಗಿ ಶಾಲು ಹಾಕಿಕೊಂಡಿದ್ದೇವೆ ಎಂದು ಕೆಲವರು ತಿಳಿಸಿದ್ದಾರೆ. ಮತ್ತೆ ಕೆಲವರು ಬಿಸಿಲಿನಿಂದ ರಕ್ಷಣೆ ಪಡೆಯಲು ಶಾಲು ಹೊದ್ದಿರುವುದಾಗಿ ಹೇಳಿದ್ದಾರೆ. ಇದು ಪಕ್ಷ ಅಥವಾ ಧರ್ಮದ ಬಣ್ಣವಲ್ಲ. ರಾಷ್ಟ್ರಧ್ವಜದಲ್ಲಿನ ಬಣ್ಣ ಎಂದು ಕೆಲವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಕ್ರಮಕ್ಕೆ ಬಿಜೆಪಿ ಆಗ್ರಹ : ಪೊಲೀಸರನ್ನು ರೋಡ್‌ ಶೋ ಭಾಗವಾಗಿಸಲು ಯತ್ನಿಸಿದ ದಿಗ್ವಿಜಯ್‌ ವಿರುದ್ಧ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ವಕ್ತಾರ ರಜನೀಶ್‌ ಅಗರ್‌ವಾಲ್‌ ಒತ್ತಾಯಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಭೋಪಾಲ್‌ ಡಿಐಜಿ ಇರ್ಷಾದ್‌ ವಾಲಿ, ವಿಡಿಯೊದಲ್ಲಿನ ಮಹಿಳೆಯರು ಪೊಲೀಸ್‌ ಸಿಬ್ಬಂದಿಯಲ್ಲ. ಪೊಲೀಸರೊಂದಿಗೆ ಸ್ವಯಂಸೇವಕರಾಗಿ ರಾರ‍ಯಲಿಯಲ್ಲಿ ಭದ್ರತಾ ನಿರ್ವಹಣೆ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್‌ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ದಿಗ್ವಿಜಯ್‌ ಸಿಂಗ್‌ ಎದುರು ಬಹುಸಂಖ್ಯಾತ ಹಿಂದು ಮತಗಳನ್ನು ಸೆಳೆಯುವ ಕಾಂಗ್ರೆಸ್‌ ತಂತ್ರ ಇದಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌